ಈ ಪುಟವನ್ನು ಪ್ರಕಟಿಸಲಾಗಿದೆ
29

ಪರಿಸರ, ನಾಲ್ಕೆಂಟು ಚಿಕ್ಕ ಚೊಕ್ಕ ಗುಡಿಸಲುಗಳು. ಒಂದೆಡೆ ಗೋವುಗಳಿಗಾಗಿ ಕೊಟ್ಟಡಿ. ಅವುಗಳ ಬದಿಯಲ್ಲಿ ಒಂದು ಚಪ್ಪರದಲ್ಲಿ ನಾಲ್ಕು ಎತ್ತುಗಳು, ಕೆಲ ಕೃಷಿಯ ಉಪಕರಣಗಳು, ಎದುರು ಬಗೆಬಗೆಯ ಹೂ ಹಣ್ಣುಗಳ ಗಿಡ ಬಳ್ಳಿಗಳಿಂದ ಅಲಂಕೃತವಾದ ತೋಟ! ಎಲ್ಲೆಡೆ ಪ್ರಶಾಂತವಾದ ಶಾಂತಿಯ ಸಾಮ್ರಾಜ್ಯ! ಆಶ್ರಮದಲ್ಲಿ ಕೆಲ ಬಟುಗಳು ತಮ್ಮ ತಮ್ಮ ಅಧ್ಯಯನಕಾಯಕಗಳಲ್ಲಿ ನಿರತರಾಗಿದ್ದರು. ಅವರೆಲ್ಲ ಮುನಿಗಳೊಡನೆ ಬಂದ ಬಸವಣ್ಣನನ್ನು ನಗೆಮೊಗದಿಂದ ಸ್ವಾಗತಿಸಿದರು. ಮುನಿಗಳು ಅವರಿಗೆ ಅವರ ನೂತನ ಬಂಧುವಾದ ಬಸವಣ್ಣನ ಪರಿಚಯ ಮಾಡಿಕೊಟ್ಟರು. ಮರುದಿನ ಆತನ ಬಿನ್ನಹದ ಮೇರೆಗೆ ಆತನನ್ನು ಸಂಗಮನಾಥನೆದುರು ಯಥಾವಿಧಿ ಅನುಗ್ರಹ ಮಾಡಿದರು.

ಈಶಾನ್ಯ ಮುನಿಗಳು ಬೂದಿ ಮುಚ್ಚಿದ ಕೆಂಡ. ಸ್ವಾಮಿ ವಿವೇಕಾನಂದರಿಗೆ ಶ್ರೀ ರಾಮಕೃಷ್ಣರಿದ್ದಂತೆ, ಬಸವಣ್ಣನವರಿಗೆ ಈಶಾನ್ಯ ಮುನಿಗಳು, ಅವರ ಹಿರಿಮೆ ಅಳೆಯಲು ಬಾರದಂತಹದು. ವಿವೇಕಾನಂದರೇ ಒಂದೆಡೆ ಅರುಹಿದ ಮೇರೆಗೆ:

"ಪ್ರಪಂಚದಲ್ಲಿಯ ಅತಿ ಶ್ರೇಷ್ಠರಾದ ಪುರುಷೋತ್ತಮರು ಮರೆಯಲ್ಲಿಯೇ ಬಾಳಿದರು, ಮರೆಯಲ್ಲಿಯೇ ಮಡಿದರು. ಪ್ರಪಂಚಕ್ಕೆ ತೀರ ಅಜ್ಞಾತರಾದ ಈ ಪುರುಷೋತ್ತಮರೊಡನೆ ಹೋಲಿಸಿದರೆ, ನಮಗೆ ಜ್ಞಾತರಾದ ಬುದ್ದಕ್ರಿಸ್ತಾದಿ ಮಹಾಪುರುಷರು ಎರಡನೆಯ ತರಗತಿಯ ಹಿರಿಯರು. ಈ ಪುರುಷೋತ್ತಮರು ಮೌನದಿಂದ ಬಾಳಿದರು, ಮೌನದಿಂದ ತೆರಳಿದರು. ಅವರ ವಿಚಾರಗಳು ಸರಿಯಾದ ಸಮಯದಲ್ಲಿ ಬುದ್ಧ-ಕ್ರಿಸ್ತರಂಥವರಲ್ಲಿ ಮೈದಳೆದವು ಮತ್ತು ಇವರೇ ನಮಗೆ ಪರಿಚಿತರಾದರು."

(The greatest of men have passed away unknown. The Buddhas and Christs whom we know, are but second rate heroes, in comparison with the greatest men of whom the world knows nothing. Silently they live and silently