ಈ ಪುಟವನ್ನು ಪ್ರಕಟಿಸಲಾಗಿದೆ

34
ಹಾಳು! ಎಂಬ ಭಾವವನ್ನೊಳಗೊಂಡ ಕೆಲ ವಚನಗಳನ್ನು ಆ ಅವಧಿ ಯಲ್ಲಿ ಬರೆದನು. ಅವನ್ನು ಗುರುಗಳೆದುರು, ಗುರುಬಂಧುಗಳೆದುರು ಹಾಡಿ ತೋರಿಸಿ, ಅವರ ಮೆಚ್ಚುಗೆಯನ್ನು ಪಡೆದನು. ಸಂಗನ ಜಾತ್ರೆಯ ಕಾಲದಲ್ಲಿಯೂ ಬೇರೆ ಉತ್ಸವ ಪ್ರಸಂಗಗಳಲ್ಲಿಯೂ ಜನ ನೆರೆದಾಗ, ಗುರುಗಳ ಆಜ್ಞೆಯ ಮೇರೆಗೆ ಅದನ್ನವನು ಅವರೆದುರು ಹಾಡುವ ಅವುಗಳ ಜತೆಯಲ್ಲಿಯೇ ಜನರ ಅನಾಚಾರವನ್ನು ಹಳಿಯುವ, ಸದಾಚಾರ-ಸದ್ಭಕ್ತಿಗಳನ್ನು ಹೊಗಳುವ ಕೆಲ ವಚನಗಳನ್ನು ರಚಿಸಿ, ಅವನ್ನೂ ಹಾಡುವ. ಆತನ ವಚನಗಳನ್ನು ಹಲವರು ಕೊಂಡಾಡಿದರು. ಕೆಲವರು ಅವನ್ನು ಕೇಳಿ ಕೆಂಡದಂತಾದರು. ಅವುಗಳ ಒಂದೆರಡು ಮಾದರಿಗಳನ್ನು ಕೆಳಗೆ ಕಾಣಬಹುದು.
ಸಂಗನೇ ಏಕೋದೇವನೆಂಬುದನ್ನು ಬಸವಣ್ಣನು ಈ ರೀತಿ ಬಣ್ಣಿಸಿರುವ:
“ಸ್ವಾಮಿ ನೀನು ! ಶಾಶ್ವತ ನೀನು”
ಎತ್ತಿದೆ ಬಿರುದ ಜಗವೆಲ್ಲರಿಯಲು
“ಮಹಾದೇವ ! ಮಹಾದೇವ !?
ಇಲ್ಲಿಂದ ಮುಂದೆ ಶಬ್ದವಿಲ್ಲ.
ಪಶುಪತಿ ಜಗಕ್ಕೆ ಏಕೋದೇವ. ಸ್ವರ್ಗಮೃತ್ಯುಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ !
ದೇವನೊಬ್ಬ ನಾಮ ಹಲವು :
ಪರಮಪತಿವ್ರತೆಗೆ ಗಂಡನೊಬ್ಬ :
ಮತ್ತೊಂದಕ್ಕೆರಗಿದರೆ ಕಿವಿಮೂಗ ಕೊಯ್ವನು !
ಹಲವು ದೈವದ ಎಂಜಲ ತಿಂಬವರನೇನೆಂಬೆ
ಕೂಡಲಸಂಗಮದೇವಾ |
ಇಂಥ ಸಂಗನ ಭಕ್ತಿಯು ಕಡುಪಾಪಿಗಳನ್ನು ಉದ್ದರಿಸಬಲ್ಲದು. ಆದುದರಿಂದ ಆತನಿಗೆ ಶರಣುಹೋಗಿರಿ! ಎಂದು ಬಸವಣ್ಣನು ಆರುಹುವ.