ಈ ಪುಟವನ್ನು ಪ್ರಕಟಿಸಲಾಗಿದೆ
49

ಬಿನ್ನವಿಸಿದರು. ಅವರ ಬಿನ್ನಹದ ಮೇರೆಗೆ ಲೆಕ್ಕದ ವಹಿಗಳನ್ನು ಬಸವಣ್ಣನವರಿಗೆ ತೋರಿಸಲು, ಸಿದ್ಧರಸನು ಗಣಕರಿಗೆ ಆಜ್ಞಾಪಿಸಿದನು. ಅವನ್ನು ಕೆಲ ಸಮಯ ಪರೀಕ್ಷಿಸಿದ ಮೇಲೆ, ಬಸವಣ್ಣನವರು ಅವರ ಮೋಸವನ್ನೂ ಕೈ ಚಳಕವನ್ನೂ ಕಂಡುಹಿಡಿದರು. ಅದರ ಫಲವಾಗಿ ಕಾಗದದಲ್ಲಿಯ ನೀಲವಿನಲ್ಲಿ ಐದು ಕೋಟಿ ಹಣ ಹೆಚ್ಚಾದದ್ದು ಕಂಡುಬಂದಿತು. ಈ ಸಂಗತಿಯನ್ನು ಅವರು ಸಿದ್ಧರಸನಿಗೆ ತಿಳಿಸಿದರು. ಅದನ್ನು ಅರಿತು ಅತೀವ ರೇಗಿಗೆದ್ದ ಸಿದ್ಧರಸನು, ಗಣಕರಿಗೆ ಅದರ ಸರಿಯಾದ ವಿವರವನ್ನು ಅರುಹಲು ಹೇಳಿದಾಗ, ಅವರೆಲ್ಲ ಹತಪ್ರಭರಾಗಿ, ತಮ್ಮ ತಪ್ಪನ್ನು ಒಪ್ಪಿಕೊಂಡರು. ಅಧಿಕಾರಿಯು ತಾನು ಅಪಹರಿಸಿದ ಹಣವನ್ನೆಲ್ಲ ಮರಳಿ ಭಾಂಡಾರದಲ್ಲಿ ಇರಿಸಲು ಒಪ್ಪಿದನು. ಈ ಸಂಗತಿಯನ್ನು ಬಿಜ್ಜಳರಾಯನಿಗೆ ತಿಳಿಸಲಾಯಿತು. ಆತನು ಕೂಡಲೇ ಅಲ್ಲಿಗೆ ಬಂದು, ಬಸವಣ್ಣನವರ ಬುದ್ಧಿಚಾತುರ್ಯವನ್ನು ಕಂಡು ಅವರನ್ನು ತುಂಬ ಕೊಂಡಾಡಿದನು. ಮೋಸ ಮಾಡಿದ ಅಧಿಕಾರಿ ಗಣಕರನ್ನು ದಂಡಿಸಿ, ಅವರನ್ನು ಕೆಲಸದಿಂದ ತಳ್ಳಿಹಾಕಿದನು. ಆ ಅಧಿಕಾರಿಯ ಸ್ಥಳದಲ್ಲಿ ಬಸವಣ್ಣನವರನ್ನೇ ನಿಯಮಿಸಿದನು. ಸಂಗಯ್ಯನ ಕರುಣದ ಫಲವದು ಎಂದು ಭಾವಿಸಿ, ಬಸವಣ್ಣನವರು ಭಕ್ತಿಭಾವದಿಂದ ಮನದಲ್ಲಿ ಸಂಗನನ್ನು ವಂದಿಸಿ, ತಮ್ಮ ಹೊಸ ಅಧಿಕಾರವನ್ನು ಸ್ವೀಕರಿಸಿದರು. ಮುಂದೆ ಕೆಲಕಾಲದಲ್ಲಿಯೇ ಬಸವಣ್ಣನವರ ಕೆಲಸವನ್ನು ಅತಿಯಾಗಿ ಮೆಚ್ಚಿ ಬಿಜ್ಜಳರಾಯನು ಸಿದ್ದರಸನ ಸಲಹೆಯ ಮೇರೆಗೆ ಬಸವಣ್ಣನವರಿಗೆ ಮಂತ್ರಿಪದವನ್ನು ದಯಪಾಲಿಸಿ, ಭಾಂಡಾರದ ಇಡೀ ಆಢಳಿತವನ್ನು ಅವರಿಗೆ ಒಪ್ಪಿಸಿದರು.

ವಿವಾಹ

ಬಸವಣ್ಣನವರು ಈ ಬಗೆಯಾಗಿ ಬಿಜ್ಜಳರಾಯನ ಪ್ರೀತಿಗೂ ಮತ್ತು ಗೌರವಕ್ಕೂ ಪಾತ್ರವಾದುದನ್ನು ಕಂಡು ಸಿದ್ಧರಸನಿಗೆ ಅತಿಯಾಗಿ ಆನಂದ

೧೮. ದ.ಬ, ಪು. ೨೯೬,