ಈ ಪುಟವನ್ನು ಪ್ರಕಟಿಸಲಾಗಿದೆ

72

ದರುಶನಂ, ಮುಟ್ಟುವುದೆ ಸ್ಪರ್ಶನಂ. ನೀವೇ ಗತಿ, ನೀವೆ ಮತಿ, ನೀವೇ ಪ್ರಾಣಂ' ಎನುತ ಆನಂದಜಳಮಂ ಸೂಸುತಮಿರ್ದ೦.

ಬಸವಣ್ಣನವರು ಶರಣರನ್ನು ಈ ಬಗೆಯಾಗಿ ಆರಾಧಿಸುತ್ತಿದ್ದರಂತೆ:

“ಎಲ್ಲರಂ ನಿಜನಿಳಯಮಧ್ಯಸ್ಥಿತ ಭದ್ರಾಸನತಗಳೊಳು ಬಿಜಯಂಗೈದು ಚರಣಗಳಂ ತೊಳೆದು, ಪಾದೋದಕಂ ತಳೆದು, ಸಂಗಡದೊಳು ಲಿಂಗಾರ್ಚನೆಯ ಮಾಡಿ, ಪ್ರಸಾದಭರಿತ ಪ್ರಮೋದಹೃದಯನಾಗುತಂ; ಅಂದಿನ ದಿನದ ಲವರಂ ಪಿಂಗಲಾರದೆ, ಪುರಾತನ ಗೀತಗೋಷ್ಠಿರಸತರಂಗಿಣಿಯೊಳು, ಬೆಳಗಪ್ಪನ್ನವೀಸಾಡಿ, ಪರಿಣಾಮದ ತಡಿಗೆ ಸಾರ್ದು, ಬಸವರಾಜಂ ಭಕ್ತಿಯುಕ್ತಂ ನಿಂದಿರ್ದು - 'ದೇವದೇವ, ಶಿವರಾತ್ರಿಯ ಸುಖಮಂ ಸವಿಗಂಡೆO ಬಿಡಲಾರೆಂ ಇಂದಿನ ತೆರದೊಳ್ ಬಂದೆಂದಿಗಂ ಕುಂದದ - ನಿಚ್ಚಶಿವರಾತ್ರಿಯಂ ಮಾಳನೆಂಬ ನೇಮವಂ ಕೈಕೊಂಡೆಂ ಎಂದು ಉಸುರುವನು. ಗೀತಾಕಾರರು ಉಸುರಿದ ಮೇರೆಗೆ -

ಮಚ್ಚಿತ್ತಾ ಮದ್ಗತಪ್ರಾಣಾ | ಬೋಧಯಂತಃ ಪರಸ್ಪರಂ |
ಕಥಯಂತಶ್ಚ ಮಾಂ ನಿತ್ಯಂ | ತುಷ್ಯOತಿ ಚ ರಮಂತಿ ಚ ||

“ನನ್ನಲ್ಲಿಯ - ಪರಮಾತ್ಮನಲ್ಲಿಯೆ - ಮನಪ್ರಾಣಗಳನ್ನು ನಿಲ್ಲಿಸಿ, ಪರಸ್ಪರರನ್ನು ಬೋಧಿಸುತ್ತ ತನ್ನ ಪರಮಾತ್ಮನ ಕಥೆಗಳನ್ನು ಅರುಹುತ್ತ ಭಕ್ತರು ನಲಿದಾಡುವರು, ಕುಣಿದಾಡುವರು. ಇದು ಇಂಥ ಶರಣರ ಕೂಟಗಳನ್ನೆಯ ಬಣ್ಣಿಸುವದಿಲ್ಲವೇ? ಇಂಥ ಶರಣರ ಅನುಭವಗೋಷ್ಠಿಗಳೇ ಪರಮಾನಂದದ ಸೆಲೆಗಳು!

ಅನುಭವಮಂಟಪ :

ಬಸವಣ್ಣನವರ ಮಹಾಮನೆಯಲ್ಲಿ ನಡೆಯುವ ಶರಣರ ಅನುಭವಗೋಷ್ಠಿಯು ಬರಬರುತ್ತ 'ಅನುಭವಮಂಟಪ' ಎಂದು ಪರಿಣತವಾಯಿತು. 'ಅನುಭವಮಂಟಪ' ಎಂಬ ಸಂಸ್ಥೆಯೇ ಇರಲಿಲ್ಲ. ಅದರ ಉಲ್ಲೇಖವು ಪುರಾಣಗಳಲ್ಲಿಲ್ಲ. ಅದು ಹದಿನೈದನೆಯ