ಈ ಪುಟವನ್ನು ಪ್ರಕಟಿಸಲಾಗಿದೆ

76

ಈ 'ಅನುಭವ ಮಂಟಪ'ದ ಸಂಚಾಲಕರಾದ ಹಿರಿಯ ಶರಣರು ಪ್ರಚಾರಕರಿಗೆ ಬೇಕಾದ ಸಾಹಿತ್ಯವನ್ನು ವಿಪುಲವಾಗಿ ನಿರ್ಮಿಸಿದರು, ರಚನೆ ಮಾಡಿದರು. ಅದೇ ನಮ್ಮ ಕನ್ನಡನುಡಿಯ ವಿಶೇಷವಾದ ವಚನಸಾಹಿತ್ಯ, ಹಿರಿಯ ಶರಣ-ಶರಣೆಯರು ತಮ್ಮ ತಮ್ಮ ಜೀವನದಲ್ಲಿಯ ರಸನಿಮಿಷಗಳಲ್ಲಿ ಅವನ್ನು ರಚಿಸಿದರು, ಬರೆದರು. “ಮಂಟಪ' ದ ಕೂಟಗಳಲ್ಲಿ ಅವನ್ನು ಹಾಡಿದರು. ಅವು ಬರೆದವರೊಡನೆ, ಹಾಡಿ ಹೇಳಿದವರೊಡನೆ, ಕೇಳಿದವರಿಗೂ ಸ್ಫೂರ್ತಿಯನ್ನು ನೀಡಿದವು. ಅಂಥ ವಚನಗಳನ್ನು ಕುರಿತು ಚೆನ್ನಬಸವಣ್ಣನವರು ಅರುಹಿರುವದೇನೆಂದರೆ :

ಪಾತಾಳದಗ್ಗವಣೆಯ ನೇಣಿಲ್ಲದೆ,
ಸೋಪಾನದ ಬಲದಿಂದಲ್ಲದೆ ತೆಗೆಯಬಹುದೆ ?
ಶಬ್ದಸೋಪಾನ ಕಟ್ಟಿ ನಡೆಸಿದರು ಪುರಾತನರು,
ದೇವಲೋಕಕ್ಕೆ ಬಟ್ಟೆ ಹಾಕಿರೋ !
ಮರ್ತ್ಯಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತ-ಮಾತೆಂಬ ಜ್ಯೋತಿಯ ಬೆಳಗಿಕೊಟ್ಟರು
ಕೂಡಲಚೆನ್ನಸಂಗನ ಶರಣರು !

ಈ ವಚನಗಳ ಮಾಧುರ್ಯವನ್ನು ಬಸವಣ್ಣನವರು ತುಂಬ ಕೊಂಡಾಡಿರುವರು. ಅವನ್ನು ಉಪೇಕ್ಷಿಸಿದ ತಮ್ಮ ತಪ್ಪನ್ನು ನೆನೆದು ಅತಿಯಾಗಿ ವ್ಯಸನಪಟ್ಟಿರುವರು.

ಹಾಲ ತೊರೆಗೆ ಬೆಲ್ಲದ ಕೆಸರು
ಸಕ್ಕರೆಯಂತಹ ಮಳಲು
ತವರಾಜದಂತಹ ನೊರೆತೆರೆಗಳು.
ಇಂತಪ್ಪ ಆದ್ಯರ ವಚನವಿರಲು
ಬೇರೆ ಬಾವಿಯ ತೋಡಿ,
ಉಪ್ಪು ನೀರು ಸವಿದಂತಾಯಿತ್ತಯ್ಯಾ ಎನ್ನ ಯುಕ್ತಿ!
ನಿಮ್ಮ ವಚನಂಗಳ ಕೇಳದೆ, ಅನ್ಯಪುರಾಣ ಕೇಳಿ
ಕೆಟ್ಟೆನಯ್ಯಾ ಕೂಡಲಸಂಗಮದೇವಾ,