ಈ ಪುಟವನ್ನು ಪ್ರಕಟಿಸಲಾಗಿದೆ
79

ಕತ್ತಲೆ ಅಡಗಿತು. ಬೆಳಕು ಬೆಳಗಿತು. ನಿಚ್ಚಶಿವರಾತ್ರಿಯಾಯತ್ತು'೨೪ ಇದೇ ಗುರುತರ ಶರಣರ ಪರಮಾತ್ಮನ 'ಅನುಭವ- ಮಂಟಪ' ದ ಮಹಾಕಾರ್ಯ.
ಮತಪ್ರಚಾರ :
ಪ್ರಭುದೇವರ ನೇತೃತ್ವದಲ್ಲಿ ಶರಣರ ನೆರವಿನಿಂದ ಬಸವಣ್ಣನವರು ತಮ್ಮ ನೂತನ ಮತಪ್ರಚಾರವನ್ನು ಒಳ್ಳೆಯ ರಭಸದಿಂದ ನಡೆಯಿಸಿದರು. ಈ ನೂತನ ಮತದ ತಿರುಳಾದ 'ಷಟ್ ಸ್ಥಲ, ಅಷ್ಟಾವರಣ, ಪಂಚಾಚಾರ'ಗಳ ರಹಸ್ಯವನ್ನು ಚೆನ್ನ ಬಸವಣ್ಣನು ಬಗೆಬಗೆಯಾಗಿ ವಿಶದಗೊಳಿಸಿದನು. ಆತನೇ ವೀರಶೈವ ತತ್ತ್ವಪ್ರಣಾಲಿಯ ಪ್ರಧಾನ ಭಾಷ್ಯಕಾರ, ಆತನು ವಚನಧರ್ಮದ ಮರ್ಮವನ್ನು ಕಲಿಸಿಕೊಟ್ಟು ಜಂಗಮರನ್ನು ಹಿಂದೆ ಅರುಹಿದ ಮೇರೆಗೆ, ಸಮಾಜೋದ್ಧಾರಕ್ಕಾಗಿ ತರಬೇತಿಗೊಳಿಸಿದನು. ಶಿವಾನುಭವಮಂಟಪದಲ್ಲಿ ಜನಗಳು ಸೇರಿದಾಗ, ಷಟ್‌ ಸ್ಥಲ ಸಿದ್ದಾಂತವನ್ನು ಉಪದೇಶಿಸುವ ಗುರು ತಾನೆಂಬ ಅರಿವೂ ಆತನಿಗೆ ಇತ್ತು. ಆದುದರಿಂದ ಷಟ್‌ಸ್ಥಲ ಸಿದ್ಧಾಂತಕ್ಕೆ ಪ್ರಥಮತಃ ಸರಿಯಾದ ತಳಹದಿಯನ್ನು ಹಾಕಿ, ಆ ಭವ್ಯಮಂದಿರವನ್ನು ಸುಂದರವಾಗಿ ಕಟ್ಟಿದಾತನು ಚೆನ್ನಬಸವನು ಆಗಿದ್ದಾನೆ.೨೫

ಈ ಮೊದಲು ಕಾಣಿಸಿದ ಮೇರೆಗೆ, ಸಾಮಾನ್ಯ ಸದಾಚಾರದ ತತ್ತ್ವಗಳ ಜತೆಯಲ್ಲಿ ಶರಣರು ವೀರಶೈವದ ವಿಶೇಷ ಸಿದ್ಧಾಂತಗಳನ್ನು ಜನಸಾಮಾನ್ಯರಲ್ಲಿ ಪ್ರಚುರಗೊಳಿಸಿದರು. ಅವುಗಳಲ್ಲಿ ಅಷ್ಟಾವರಣ- ಪಂಚಾಚಾರಗಳೆಲ್ಲ ಭಕ್ತರು ಆಚರಿಸಬೇಕಾದ ವಿಷಯಗಳು, ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿಮಂತ್ರ-ಇವೇ ಅಷ್ಟಾವರಣಗಳು. ಸದ್ಗುರುಗಳಿಂದ ದೀಕ್ಷೆಯನ್ನು ಪಡೆದು, ಅವರು ದಯಪಾಲಿಸಿದ


೨೪. ಕ.ಬ.ಜೀ, ಪು. ೬೬
೨೫. ವಧ.ಸಾ, ಪು. ೬೩