ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಶ್ರೀಮದಾನಂದ ರಾಮಾಯಣ, . . . . . - --- ... --- ..... - - - - - ೨ನೆಯ ಪ್ರಕರಣ. ಶತನು ರಾವಣಾದಿಗಳ ವಧ. ಹಿಯ ಶಿಷ್ಯನೇ, ನಿನಗೆ ಇನ್ನೊಂದು ಸಂಗತಿಯನ್ನು ಹೇಳುವೆನು ಕೇಳು. ಶ್ರೀ 07ಮನು ಲಂಕೆಯಲ್ಲಿ ರಾಕ್ಷಸರನ್ನು ನಾಶಮಾಡುತ್ತಿರುವಾಗ ಕುಂಭಕರ್ಣನ ಮಗನಾದ ನಿಕುಂಭನ ಹೆಂಡತಿಯು ಗರ್ಭಿಣಿಯಾಗಿದ್ದಳು, ಕರುಣಾನಿಧಿಯಾದ ಶ್ರೀ ರಾಮನು ಆ ತರುಣಿಯಷ್ಟು ಮಾತ್ರ ನಾಶಮಾಡಲಿಲ್ಲ. ಕಾದು ರಾವಣರ ಯುದ್ದ ವಾದ ಕೆಲವು ಕಾಲದಮೇಲೆ ಆ ರಾಕ್ಷಸಿಯು ಕೌಂಡಕನೆಂಬ ಮಗನನ್ನು ಪಘದಳು, ಆ ರಾಕ್ಷಸನು ಮಾಯಾನಗರಿಯಲ್ಲಿ ವಾಸಮಾಡುವ ಶತಮುಬರವಣ ನ ಸಹಾಯದಿಂದ ವಿಭೀಷಣನನ್ನು ರಾಜಕಾರ್ಯದಿಂದ ತಪ್ಪಿಸಿಬಹಳ ತೊಂದರ ಗೊಳಿಸಿದನು. ವಿಭೀಷಣನು ಆ ಬಾಧೆಯನ್ನು ಸಹಿಸಲಾದ ಶ್ರೀ ರಾಮನಿಗೆ ಶರಣಾಗತನಾಗಿ, ತನ್ನ ಸಮಸ್ತ ದುಃಖವನ್ನೂ ಆತನಿಗೆ ತಿಳುಹಿದನು. ಅಗ ಶ್ರೀ ರಾಮನು ಸೀತೆಯೊಡನೆ ಪುಷ್ಪಕವಿಮಾನದಲ್ಲಿ ಕುಳಿತು ಲಂಕೆಗೆ ಪ್ರಯಾಣ ಮಾಡಿ ದನು. ವಿಭೀಷಣನು ಕೌಂಡ್ರಕನ ಹೆದರಿಕೆಯಿಂದ ಶ್ರೀ ರಾಮನ ವಿಮಾನದಲ್ಲಿ ಯೇ ಕುಳಿತಿದ್ದನು. ಲಂಕೆಯಲ್ಲಿ ಕೌಂಡ್ರಕನೇ ಮೊದಲಾದ ಕಕ್ಷಸರಿಗೂ ಶ್ರೀ ರಾಮನಿಗೂ ಬಹಳ ದಿವಸಗಳ ವರೆಗೆ ಯುದ್ಧ ನಡೆಯಿತು, ಕೊನೆಗೆ ಶ್ರೀ ರಾಮ ಸುಕೌಂಡ್ರಕನನ್ನೂ, ಸೀದೇವಿಯು ಶತಮುಖರಾವಣನನ್ನೂ ನಾಶಮಾಡಿದರು. ವಿಭೀಷಣನಿಗೆ ಲಂಕಾಂಶಜ್ಯವನ್ನಿತ್ತು ಸೀತರಾತುರು ಅಯೋಧ್ಯೆಗೆ ಬಂದರು, ಮತ್ತೆ ಕೆಲವು ಕಾಲದಮೇಲೆ ವಿಭೀಷಣನು ಪಸರೂಡನೆ ಘಢಪ ಸಡು ಗುತ್ತ ಸಭಾಮಧ್ಯದಲ್ಲಿ ಕುಳಿತಿರುವ ಶ್ರೀ ರಾಮನ ಪಾದಕಮಲಗಳಿಗೆರಗಿದನು. ಆತನ ಕಣ್ಣುಗಳಲ್ಲಿ ನೀರು ಥಳಥಳನೆ ಉದುರುತ್ತಿತ್ತು, ಮುಖವು ದುಃಖದಿಂದ ಬಡಿತ್ತು, ಇಂಥ ವಿಭೀಷಣನನ್ನು ನೋಡಿ ಶ್ರೀ ಮನು (ಎಳ್ಳೆ ಭಕ್ತಿ ನೆ, ಇಷ್ಟು ವ್ಯಸನಕ್ಕೆ ಕಾರಣವೇನು?' ಎಂದು ಪ್ರಶ್ನೆ ಮಾಡಿದನು. ವಿಭೀಷಣನು 66ನೇ ಅಮಚಂದ್ರಾ, ನನ್ನನ್ನು ಸಂರಕ್ಷಿಸು ಕುಂಭಕರ್ಣನಿಗೆ ಮೂಲಾ ನಕ್ಷತ್ರ ದಲ್ಲಿ ಒಬ್ಬ ಮಗನು ಹುಟ್ಟಿದ್ದನು. ಅವನನ್ನು ಒಂದು ದೃಕ್ಷದ ಕೆಳಗೆ ಬಿಸುಟಿದ್ದರು, ಆತನು ದಪ್ರಯೋಗದಿಂದ ಅಲ್ಲೇ ಸಹಾಯ ಸಂಪತ್ತಿಗಳನ್ನು ಹೊಂದಿ ಬದುಕಿ