ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಗ್ಯೂತ ನಾಥಸ್ವಾಮಿಗಳಿಗೆ ಈರಯಾಗಿ ಬರಬೇಕೆಂಬ ಸೂಚನೆಯನ್ನು ಕಳಿಸಿದರು, ಶಮ ರ್ಥರು ಮಹಾರಾಜರ ಗಡಬಿಡಿಯನ್ನು ನೋಡಿ ಮಹಾರಾಜರಿಗೆ ಇದೇನೆಂದು ಪ್ರಶ್ನೆ ಮಾಡಿದರು, ಆಗ ಮಹಾರಾಜರು ರಂಗನಾಥಸ್ಯಮಿಗಳು ಬಂದಿರುವದರಿಂದ ಆ ವರಿಗೂ ಪಂಜಗೆ ಬರಲಿಕ್ಕೆ ಅಮಂತ್ರಣ ಕಟ್ಟಿರುತ್ತದೆ" ಎಂದು ಹೇಳಿದರು, ಅದಕ್ಕೆ ಸಮರ್ಥರು-“ಯಾವ ರಂಗನಾಥಸ್ಕಾಮಿ?” ಎಂದು ತಿರಿಗಿ ಕೇಳಿದರು. ಆ ಗ ಮಹಾರಾಜರು-'ನಿಮ್ಮ ಚಿರಂಜೀವರಾದ ನಿಗಡಿಯ ರಂಗನಾಥಸ್ವಾಮಿ” ಎಂ ದು ಹೇಳಿದರು, ಅದನ್ನು ಕೇಳಿ ಸಮರ್ಥರು ಆಶ್ಚರ್ಯ ಮುದ್ರೆಯಿಂದ- ಆವ ನು ಭ್ರಷ್ಟ ನಿರುತ್ತಾನೆ, ಅವನ ಪಂಜ್ಗೆ ನಾನು ಕೂತುಕೊಳ್ಳುವದಿಲ್ಲ. ಆದ್ದ ರಿಂದ ಅವನು ತಾನಿಳಿದಲ್ಲಿಯೇ ಅಡಿಗೆ ಮಾಡಿ ಊಟ ಮಾಡಲೆಂದು ನಿನ್ನೊಬ್ಬ ಕುರ ಕೂನನ ಕಡೆಯಿಂದ ಹೇಳಿಕಳಿಸು" ಎಂದು ನುಡಿದರು, ಮಹಾರಾಜರು ತಾವೇ ತಮ್ಮ ಮನಸ್ಸಿನಲ್ಲಿ ನಾಚಿಕೊಂಡು ಒಂದು ತುಟಿಯನ್ನು ಎರಡು ಮಾಡದೆ ಸುಮ್ಮ ನ ನಿಂತರು, ಸಮರ್ಥರು ಅವರಿಗೆ ಮೂರು ನಾಲ್ಕಾವತಿ (sಾರಕನನನ್ನು ರಂ ಗನಾಧನ ಕಡಿಗೆ ಕಳಿಸಿಕೊಟ್ಟಿರೋ??” ಎಂದು ವಿಚಾರಿಸಿದರು. ಮಹಾರಾಜರು ಉತ್ತರವನ್ನೇ ಕೊಡಲಿಲ್ಲ. ಆಗ ಸಮರ್ಧರು ತಾವೇ ಒಬ್ಬ ಕಾರಕೂನನನ್ನು ಕರಗಿ ರಂಗನಾಥಸ್ವಾಮಿಗಳ ಕಡೆಗೆ ನೀನು ಹೇಗಿ “ನೀನು ಭ್ರಷ್ಟನಾಗಿರು ನಿನ್ನ ಸಂ ಜಗೆ ನಾನು ಕೂಡ್ರುವದಿಲ್ಲ, ಆದ್ದರಿಂದ ನೀನು ಅಲ್ಲಿಯೇ ಆರಿಗೆ ಮಾಡಿಕೊಂ ಡು ಊಟ ಮಾಡೆಂದು ತಿಳಿಸು” ಎಂದು ಹೇಳಿದರು, ಸಮರ್ಥರ ಬಾಯಿಂದ ಹೊರಟ ಮಾತನ್ನು ಮೀರುವವರಾರು? ಸಮರ್ಥರ ಆಜ್ಞೆಯು ಮಹಾರಾಜರಿಗೆ ಸಹಾ ಯ ವಾಗಲು ಮಾನವ, ಅಂದಬಳಿಕ ಆ ಬಡಕಾರಕೂನನು ಕ ಕೂ ಎಂದು ನುಡಿ ಯುವದು ಹ್ಯಾಗೆ? ಅವನು ಮಹಾರಾಜರ ಮೊಲೆಯನ್ನು ನೋಡನೋಡುತ್ತ ಮಲ್ಲ ಮೆಲ್ಲನೆ ಹೆಜ್ಜೆಯನ್ನಿಡುತ್ತ ರಂಗನಾಥ ಸ್ವಾಮಿಗಳ ಕಡೆಗಹೊರಟು ಹೋದನು, ಅಲ್ಲಿ ಕೂದತರುವಾಯ ಕಾರಕೂನನಕಡೆಯಿಂದ ರಂಗನಾಥಸ್ಕಾಮಿಗಳಿಗೆ ಭೋಜನಕ್ಕೆ ಬರಬೇಡಿರೆಂದು ಹೇಳುವದು ಹ್ಯಾಗೆ ಆಗಬೇಕು? ಅವನು ಹೋಗಿ ರಂಗನಾಥ ಸ್ವಾ ಮಿಗಳ ಮುಂದೆ ಸುಮ್ಮನೆ ಕುಳಿತನು, ಸ್ವಾಮಿಗಳು ತಾವಾಗಿ-ಹಕೆ ಬಂದಿರಿ?” ಎಂದು ವಿಚಾರಿಸಿದರು, ಕಾರಕೂನನು ಅಂಡಿಂಜುತ್ತ-ತನ ಸನ್ನಿಧಿಗೆ ವಿನಂತಿ ಮಾಡಲಿಕ್ಕೆ ಬಂದೆನು” ಎಂತ ಹೇಳಿದನು, ಸ್ವಾಮಿಗಳು-“ಅದೇನು? ಎಂದು ವಿಚಾರಿಸಿದರು, ಆದಕ್ಕೆ ಕಾರಕೂನನು ಉತ್ತರವನ್ನೇ ಕೊಡಲಿಲ್ಲ, ಈ ಪ್ರಕಾರ ಕಾರಕೂನನ ಮನದಿಂದ ಬಹಳೊತ್ತು ಆಯಿತು ಆಗ ಸ್ವಾಮಿಗಳು ತಾವಾಗಿ'ಸಮರ್ಥರ ನಿರೋಪವನ್ನೇನಾದರು ತಂದಿರುವಿರೋ?” ಎಂದು ಕೇಳಿದರು, ಅದ ಈ ಕಾರಕನನು “ಹೌದು” ಎಂದು ಹೇಳಿ ಆ ನಿರೋಪವನ್ನು ತಿಳಿಸದೆ ಸುಮ್ಮ