ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಗ್ರಹ ಸಂದೇಶ ನಮ್ಮ ಪರ್ಯಾಯದ ಅವಧಿಯಲ್ಲಿ ಸಾಮಾನ್ಯ ಜಿಜ್ಞಾಸುಗಳಿಗೆ ತಲುಪುವ ಅನೇಕ ಕಿರುಹೊತ್ತಿಗೆಗಳನ್ನು ಪ್ರಕಟಿಸಲು ಸಂಕಲ್ಪಿಸಿದ್ದೇವೆ. ಈಗಾಗಲೇ 'ಶ್ರೀ ಕೃಷ್ಣ ಸಂದೇಶ' ಮತ್ತು 'ಉಪನಿಷತ್ ಸಾರಸಂಗ್ರಹ' ಎಂಬ ಎರಡು ಪುಸ್ತಕಗಳು ಪ್ರಕಟವಾಗಿವೆ. ಇದು ಸಣ್ಣ ಕಥೆಗಳ ಸಂಗ್ರಹವಾದ ಮೂರನೆಯ ಕೃತಿ. ಇದರಲ್ಲಿ ಕೆಲವು ಪೌರಾಣಿಕ ಕಥೆಗಳಿವೆ. ಮತ್ತೆ ಕೆಲವು ಕಟ್ಟು ಕಥೆಗಳಿವೆ. ಆದರ್ಶಗಳನ್ನು ನೇರವಾಗಿ ಹೇಳಿದಾಗ ಸಪ್ಪೆಯಾಗುತ್ತವೆ. ಕಥೆಗಳ ಮೂಲಕ ಹೇಳಿದಾಗ ಮನಸ್ಸಿಗೆ ಹಿಡಿಯುತ್ತವೆ. ಈ ದೃಷ್ಟಿಯಿಂದ ಕಥೆಗಳ ಸಂಗ್ರಹವನ್ನು ಪ್ರಕಟಿಸಲಾಗಿದೆ. ನಮ್ಮ ಶಿಷ್ಯನಾದ ಶ್ರೀನಿವಾಸ ವರಖೇಡಿ ಆಕರ್ಷಕ ಭಾಷೆಯಲ್ಲಿ ಅನೇಕ ಕಥೆಗಳನ್ನು ಸಂಗ್ರಹಿಸಿದ್ದಾನೆ. ಅವನಿಗೆ ಶ್ರೀಕೃಷ್ಣನ ಅನುಗ್ರಹವಾಗಲೆಂದು ಪ್ರಾರ್ಥಿಸುತ್ತೇವೆ. - ಶ್ರೀಕೃಷ್ಣಭಕ್ತರು ಇದನ್ನು ಕೊಂಡುಕೊಂಡು ಓದಿ ತಮ್ಮ ಬದುಕನ್ನು ಸಾರ್ಥಕಗೊಳಿಸಬೇಕಾಗಿ ಆಶಿಸುತ್ತೇವೆ. ದಿನಾಂಕ : 25.3.2001 ವೃಷ ಸಂವತ್ಸರ, ಚೈತ್ರ, ಪ್ರತಿಪತ್ ಶ್ರೀ ವಿಶ್ವೇಶತೀರ್ಥಶ್ರೀಪಾದರು ಪರ್ಯಾಯ ಶ್ರೀಪೇಜಾವರ ಮಠ ಉಡುಪಿ