ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ ] ರತ್ನಾಕರ ಅಭಿನಂದನ (೨) ಮುಕ್ತಾಕಣಶಿವಸ್ವಾಮಿಾ , , , , ಸಾಮ್ರಾಜ್ಯವಂತಿವರ್ಮಣಃ ಎಂಬ ಶ್ಲೋಕದಲ್ಲಿ ಹೇಳಿರುವ ಶಿವಸ್ವಾಮಿಯು ಇವನೆ. ಇವನ ಶ್ಲೋಕ ಗಳು ವಲ್ಲಭದೇವನ ಸುಭಾಷಿತಾವಳಿಯಲ್ಲಿ ಕಂಡುಬರುವುವು. ಕಾವ್ಯಶೈಲಿಯು ಮಾಘ ಕಾವ್ಯವನ್ನು ಹೋಲುವುದಾಗಿದೆ. : ಅ ಭಿ ನ ೦ ದ ನ (9) ಇವನು ಬ್ರಾಹ್ಮಣನು. ಶತಾನಂದನ ಮಗನು. ಕಾಲ:-ಇವನು ಕ್ರಿ. ಶ. ೯ನೆಯ ಶತಮಾನದಲ್ಲಿದ್ದ ಯುವರಾಜನಾದ ಹಾರವರ್ಷನ ಆಶ್ರಯದಲ್ಲಿದ್ದನು. ಗ್ರಂಥ :-ಇವನು ರಾಮಚರಿತವೆಂಬ ೪೦ಸರ್ಗಗಳುಳ್ಳ ಮಹಾಕಾವ್ಯವನ್ನು ಬರೆದಿರುವನು. ಇದರಲ್ಲಿ ೩೬ ಸರ್ಗಗಳು ಅಭಿನಂದನೇ ಬರೆದುದು, ಉಳಿದ ನಾಲ್ಕು ಸರ್ಗಗಳನ್ನು ಭೀಮಕವಿಯೆಂಬವನು ಬರೆದು ಮುಗಿಸಿರುವನು. ಸೀತಾವಿಯೋಗಾನಂತರ ಚಿಂತಾಕುಲಿತನಾದ ಶ್ರೀರಾಮನು ವರ್ಷಾಕಾಲವು ಮುಗಿಯುತ್ತಿರುವುದನ್ನು ನೋಡಿ ರಾವಣನು ಇರುವ ಸ್ಥಳವನ್ನು ಹುಡುಕಿಕೊಂಡು ಬರಲು ಕಳುಹಿಸಿಕೊಡಬೇಕೆಂದು ಸುಗ್ರೀವನ ಆಗಮನನಿರೀಕ್ಷಣೆಯಲ್ಲಿದ್ದ ವಿಚಾ ರವು ವರ್ಣಿತವಾಗಿರುವುದು. ಕವಿಯು ತನಗೆ ಆಶ್ರಯದಾತನಾದ ಯುವರಾಜ ಹಾರವರ್ಷನ ವಿಚಾರವಾಗಿ ತಾನು ಬರೆದ ರಾಮಚರಿತದಲ್ಲಿ ಹೀಗೆಂದಿರುವನು. (೧) ಏತೇ ನಿಕಾಮರಸಿಕಸ್ಯ ಜಯಂತಿ ಪಾದಾಃ - ಶ್ರೀಹಾರವರ್ಷಯುವರಾಜ ಮಹೀತಲೇಂದೋಃ ಯ್ಕೆ ರ್ದ್ಯಾದಶಾರ್ಕಕಿರಣೋತ್ರದುರ್ನಿವಾರಃ ಸ್ಪಷ್ಟೋsಭಿನಂದಕುಮುದಸ್ಯ ಮಹಾವಿಕಾಸಃ || ೧ (೨) ಪಾಲಾಯಾಂಬುಜವನೈಕವಿರೋಚನಾಯ ತಸ್ಮಿನಮೋsಸ್ತು ಯುವರಾಜ ನರೇಶ್ವರಾಯ ಕೋಟಿಪ್ರದಾನ ಘಟಿ ತೋಜಲಕೀರ್ತಿಮೂರ್ತಿ ಯೇನಾಮರತ್ವ ಪದವೀಂ ಗಮಿತೋ ಭಿನಂದಃ || ೨-೭ ೧೪-೩೫ (೩) ನಮಃ ಶ್ರೀಹಾರವರ್ಷಾಯ ಯೇನ ಹಾಲಾದನಂತರಂ ಸ್ವಕೋಶಃ ಕವಿಕೋಶಾನಾಮಾವಿರ್ಭವಾಯ ಸಂಭತಃ || ೫-೮ ೧೦-೧೨

  • History of classical Sanskrit Literature P. 40-