ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ wwws \ \ \ \ \ # \ \ \ 4 # } - & / � # } , 1 \ \ | : \ \ "

  • * * * * * * * * * * * * * * * * * * * * \ # \ \ # 4 # V 1, # \P 1 \ \//V \ \/ \

ಬೆ ಸತ್ಯವತಿಚರಿತ್ರೆ ರಹುದೋ ಅಲ್ಲವೋ ಎಂದು ವಿಚಾರಿಸದೆ ಯಾರೇನು ಕೊಟ್ಟರೂ ಅದನ್ನೆಲ್ಲಾ ನುಂಗುವುದಕ್ಕೆ ಶಕ್ತಿಯಿರುವವರೆಗೂ ಬಾಯಲ್ಲಿ ಸುರಿಯುತ್ತಿದ್ದರು. ಆಕೆ ಹೆಚ್ಚು ಕಡಿಮೆ ಒಂದು ತಿಂಗಳ ತನಕ ಮಂಚದಮೇಲೆಯೇ ಮಲಗಿದ್ದಳು. ಪ್ರಾಣ ಹೋಗುವವರೆಗೂ ಜ್ಞಾನವಿದ್ದೇ ಇದ್ದಿತು. ಹಿಂದೆ ಆಕೆ ಸತ್ಯವತಿಯನ್ನು ಎಷ್ಟು ಹಿಂಸೆಪಡಿಸಿದ್ದರೂ ಅಪತ್ಕಾಲದಲ್ಲಿ ತನಗೆ ಮಾಡಿದ ಉಪಚಾರವನ್ನು ನೋಡಿ ಬಹು ಸಂತೋಷಿಸಿ ಸೊಸೆಯನ್ನು ಹತ್ತಿರಕ್ಕೆ ಕರೆದು ಅಪ್ಪಿಕೊಂಡು ಕಣ್ಣಿನಲ್ಲಿ ನೀರು ಸುರಿಸುತ್ತಾ ' - ನೀನು ನಮ್ಮ ಮನೆಗೆ ಮಹಾಲಕ್ಷ್ಮಿ, ನಾನು ನಿನ್ನ ವಿಷಯದಲ್ಲಿ ಮಾಡಿದ ತಪ್ಪುಗಳನ್ನು ಕ್ಷಮಿಸಿ ಮರೆತುಬಿಡಬೇಕು. ನಾನು ಇನ್ನೊಂದು ಜನ್ಮದಲ್ಲಿ ನಿನ್ನ ಹೊಟ್ಟೆಯೊಳಗೆ ಹುಟ್ಟಿ ನಿನ್ನ ಋಣವನ್ನು ತೀರಿಸಿ ಕೊಳ್ಳ ಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ~ ಎಂದುಹೇಳಿ ಕೈಯನ್ನು ಮುಖಕ್ಕೆ ಅಡ್ಡಲಾಗಿಟ್ಟು ಕೊಂಡಳು. ಸತ್ಯವತಿ ಏನೋ ಹೇಳಬೇಕೆಂದು ಪ್ರಯತ್ನಿಸಿ ದುಃಖ ದಿ೦ದ ಬಾಯಿಬಾರದೆ ಕಣ್ಣೀರು ಸುರಿಸುತ್ತಾ ಸುಮ್ಮನಾದಳು. ಇಷ್ಟರಲ್ಲಿ ಯಶೋದಮ್ಮನಿಗೆ ಅವಸಾನಕಾಲ ಒಂದು ದರಿಂದ ಮಂಚದಮೇಲಿನಿಂದ ಇಳಿಸುವು ದಕ್ಕಾಗಿ ವೆಂಕಟೇಶನನ್ನು ಕರೆದರು. ಅಷ್ಟರಲ್ಲಿಯೇ ನಕ್ಷತ್ರ ಒಳ್ಳೆಯದಹುದೊ ಅಲ್ಲವೋ ತಾಯಿಯನ್ನು ಬೀದಿಯಲ್ಲಿ ಮಲಗಿಸಬೇಕೋ ಬೇಡವೋ ಎಂದು ಕೇಳಿ ತಿಳಿದುಕೊಂಡು ಬರುವುದಕ್ಕಾಗಿ ವೆಂಕಟೇಶನು ಜೋಯಿಸನ ಮನೆಗೆ ಹೋಗಿದ್ದನು, ಆಗ ನಾರಾಯಣಮೂರ್ತಿ ಮುಂತಾದವರು ಕೆಳಗೆ ಚಾಪೆಯ ಮೇಲೆ ಆಕೆಯನ್ನು ಮಲಗಿಸಿದರು, ಪ್ರಾಣ ಹೋದಮೇಲೆ ನೆರೆಹೊರೆಯವರು ನೋಡುವುದಕ್ಕೆ ಬಂದಾಗ ಸೂರಮ್ಮನು ಅತ್ತಷ್ಟು ಮತ್ತೆ ಯಾರೂ ಗಟ್ಟಿಯಾಗಿ ಅವರೇ ಕಾಣ ಲಿಲ್ಲ. ಆಮೇಲೆ ವೆಂಕಟೇಶನು ಒಂದು ಯಾಕೆ ಬೀದಿಗೆ ಹಿಡಿಯಲಿಲ್ಲ ಎಂದು ತಮ್ಮಂದಿರಮೇಲೆ ಕೋಪಮಾಡಿಕೊಂಡನು. ಮನೆಯ ಯಜಮಾನಿ ಸತ್ಯಾಗ ಮನೆ ಹೇಗಿರುತ್ತದೆಂಬುದನ್ನು ನಾವು ತಿಳಿಸಬೇಕಾಗಿಯೇ ಇಲ್ಲ. ಅದು ಪಟ್ಟಣ ವಲ್ಲ ವಾದಕಾರಣ ಹೊರುವುದಕ್ಕೆ ಹಣ ಕೊಡದೆಯೇ ನಾಲ್ಕು ಮಂದಿ ನೆಂಟರು ಬಂದು ಸಹಾಯಮಾಡಿ ಶವವನ್ನು ಹೊತ್ತುಕೊಂಡು ಹೋಗಿ ದಹನಾದಿ ಕಾರ್ಯ ಗಳನ್ನು ನಡೆಯಿಸಿದರು, ಆಮೇಲೆ ಹತ್ತು ದಿನಗಳೂ ನಡೆಯಬೇಕಾದ ಕರ್ಮಗಳು ನಡೆದುವು. ಉತ್ತರಕ್ರಿಯೆಗಳ ನಿಮಿತ್ತವಾಗಿ ವ್ಯಯವಾದ ಹಣದಲ್ಲಿ ವಿಸ್ತಾರ ವಾದ ಭಾಗವು ಸತ್ಯವತಿಯ ಕಾಸುಗಳನ್ನು ಮಾರಿದಹಣವೇ. ಆದರೂ ವೆಂಕ ಟೇಶನೂ ಸ್ವಲ್ಪ ವ್ಯಯ ಮಾಡಬೇಕಾಯಿತು. ಆದುದರಿಂದ ತಾನು ಸಾಲಗಾರರ