ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೭೫ - ಮುಖ್ಯಾಂಶವಾಗಿರುವ ಆಮ್ಲಜನಕವೂ ಹವೆಯಲ್ಲಿ ಸ್ವಲ್ಪ ಮಟ್ಟಿಗೆ ಸೇರಿರುವ ಅಂಗಾರಾಮ್ಲವಾಯ ಇದರಲ್ಲಿ ಬೆರೆತುಕೊಳ್ಳುವವ, ಮಳೆಯ ನೀರು ಬಂಡೆ ಗಳ ಮೇಲೆ ಹರಿಯುವಾಗ ಅವುಗಳ ಕೆಲವು ಅಂಶಗಳು ಆಮ್ಲಜನಕದ ಸಂ ಗಡವಾಗಲಿ ಅಂಗಾರಾಮ್ಲ ವಾಯುವಿನ ಸಂಗಡವಾಗಲಿ ಸಂಯ ಕವಾಗಿ ಬಂಡೆ ಗಳಿಂದ ಪ್ರತ್ಯೇಕಿಸಲ್ಪಟ್ಟು ನೀರಿನಲ್ಲಿ ಕರಗಿ ಬೇರೆ ಸ್ಥಳಗಳಿಗೆ ಸಾಗಿಸಲ್ಪಡುತ್ತವೆ. ಈ ನೀರು ಬಂಡೆಗಳ ಕರಗಿದ ಅಂಶಗಳನ್ನು ಮಾತ್ರವಲ್ಲದೆ ಕರಗಿಸಲಾಗದ ಮಣ್ಣು, ಕಲ್ಲು ಮೊದಲಾದವುಗಳನ್ನು ಸಹ ಕೊಚ್ಚಿಕೊಂಡು ಹೋಗುತ್ತದೆ. ಹೀಗೆ ನೀರಿನ ಪ್ರವಾಹಗಳಲ್ಲಿ ಹರಿದು ಹೋಗುವ ಕಲ್ಲುಗಳು ತಾವು ಸವೆಯು ನವಲ್ಲದೆ ತಮ್ಮ ಘರ್ಷಣದಿಂದ ಬುಡದಲ್ಲಿರುವ ಬಂಡೆಗಳನ್ನು ಸವಿಸಿ ನುಚ್ಚು ಮಾಡುತ್ತವೆ. ಪ್ರವಾಹದಲ್ಲಿ ಹರಿದು ಹೋಗುವ ಕಲ್ಲುಗಳು ಒಂದನ್ನೊಂದು ಉಜ್ಜುವದ ರಿಂದ ನುಣುಪಾದ ಗುಂಡು ಕಲ್ಲುಗಳಾಗುತ್ತವೆ. ಗಟ್ಟಿಯಾದ ಬಂಡೆಗಳ ಮೇಲಿ ನಿಂದ ಹರಿಯುವ ನದಿಗಳ ತಳದಲ್ಲಿ ( ಉ. ತುಂಗಭದ್ರಾ, ಕಾವೇರಿ ) ಇಂಥ ಗುಂಡು ಕಲ್ಲುಗಳು ವಿಶೇಷವಾಗಿರುತ್ತವೆ. ನೆಲದ ಮೇಲ್ಬಾಗವು ಮೇಲೆ ವಿವ ರಿಸಲ್ಪಟ್ಟ ರೀತಿಯಲ್ಲಿ ಸೆಕೆ, ಗಾಳಿ, ನೀರು ಇವುಗಳಿಂದ ನಿರಂತರವಾಗಿ ಸವೆಯುತ್ತಿ ರುವದು, ಭೂದೃಷ್ಟವು ಈ ವಿಧದ ರೂಪಾಂತರವನ್ನು ಹೊಂದುತ್ತಿರುವದರಿಂದಲೇ ಸಸ್ಯಾದಿಗಳ ಉತ್ಪತ್ತಿಗೂ ಪ್ರಾಣಿಗಳ ನೆಲೆಗೂ ತಕ್ಕದ್ದಾಗಿರುತ್ತದೆ. Printed by Y. B. Jatlar at the Karnatak Frinting Works, Dharwar,