QᏋᏳᏊ ಸಾಮಿ ఆవరింనారా ವಾದುದನ್ನು ಚಿಕವೀರರಾಜನಿಗೆ ಹೇಳಿ ಅವನಿಗೆ ನೋವುಂಟುಮಾಡುವೆನೇನೋ ಎಂಬ ಭಯ ಆತನಿಗೆ. ಕಡೆಗೂ ಧೈರ್ಯಮಾಡಿ ಅವನು ಕಾರ್ಯೊನಮ್ಮಖನಾದ ಯೋಜನೆಯ ಮೊದಲ ಹಂತ : ದುಲೀಪ್ ಸಿಂಗ್ ಚಿಕವೀರರಾಜನಲ್ಲಿ ಸ್ವೀಕರಿಸಿದ ಆತಿಥ್ಯ, ಕೊಡಗಿನ ಅರಸ ಆ ರಾಜಕುಮಾರನಿಗೆ ಅಂದ : పఱa=్ప "ಹಿಂದಿನ ಕಥೆ. ನಿಮ್ಮ ತಂದೆಯವರ ಜತೆ ಸ್ನೇಹ ಬೆಳೆಸಬೇಕು ಅಂಬೋಉದ್ದೇಶ ದಿಂದ ಲಾಹೋರ್ ಸಿಂಗ್ ಅಂತ ಒಬ್ಬನನ್ನು ಮಡಕೇರಿಯಿಂದ ರಾಯಭಾರಿಯಾಗಿ ನಾವು ಕಳಿಸಿದ್ದೆವು, ಮುಂದೆ ಸ್ವಲ್ಪ ಸಮಯದಲ್ಲೇ ನಮ್ಮ ರಾಜ್ಯದ ಮೇಲೆ ಇಂಗ್ಲಿಷರ ಆಕ್ರಮಣ ನಡೆಯಿತು. ನಮ್ಮ ರಾಯಭಾರಿ ಲಾಹೋರ್ ತಲುಪಿದನೋ ಇಲ್ಲವೋ ಒಂದೂ త్రిళియది చేJణలయు3ు." ದುಲೀಪ್ ಸಿಂಗ್ಗೆ ತಂದೆಯನ್ನು ಕುರಿತ ಪ್ರಸಾಪ ಕಸಿವಿಸಿಯುಂಟುಮಾಡಿದಂತೆ లేండిలేు. ಆತನೆಂದ : “ಆಗಿನ ಕಾಲದಲ್ಲಿ ಏನೇನೋ ನಡೆದುಹೋಯು, ಆ ವಿಷಯ ಈಗ ಮಾತನಾಡಿ చ్చేరినేణRజనెచిల్ల అన్నిదే." ಚಿಕವೀರರಾಜನ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೆ ದುಲೀಪ್ಸಿಂಗ್, ಇಂಗ್ಲೆಂಡಿನಲ್ಲಿ ತಾನು ಕಂಡು ಅನುಭವಿಸಿದ ಸಂಗತಿಗಳನ್ನು ಕುರಿತು, ತಾನು ಆ ದೇಶದ ಪ್ರಜೆಯೇ ಎಂಬ ಅಭಿಮಾನದಿಂದ, ಮಾತನಾಡಿದ. ఆవానామ శ్రేరాణ్ణిడా బళికా పాsRగాలింగానేంది : "ಚುರುಕು ಹುಡುಗ. ಒಬ್ಬನೇ ಇದು ಸ್ವಲ್ಪ ವಿಚಿತ್ರವಾಗಿ ಬೆಳೆದಿದ್ದಾನೆ, ಅಷ್ಟೆ. ಹಿರಿಯರಾದವರ ರಕ್ಷಣೆ ಅವನಿಗೆ ದೊರೆತಿದ್ದರೆ ಇನ್ನೂ ಉತ್ತಮನಾಗುತ್ತಿದ್ದ." జిరేబిరారాజ ఒప్పిదా : “ನಿಮ್ಮ ಶಿಕ್ಷಣ ಪದ್ಧತಿಯಿಂದಂತೂ ಮನುಷ್ಯ ಪೂರ್ತಿಯಾಗಿ ಬದಲಾಗತಾನೆ." ಆ ದಿನ ಮಾತು ಮುಂದುವರಿಸುವುದು ಮೇಗ್ಲಿಂಗನಿಂದ ಆಗಲಿಲ್ಲ. .ಮುಂದೆಯೊಮ್ಮೆ ಇದ್ದಕ್ಕಿದ್ದಂತೆ ಸಂದರ್ಭ ಒದಗಿ ಬಂತು. ಬೇಸರದಲ್ಲಿದ್ದ ಅರಸನೆಂದ: "ಇಲ್ಲಿಗೆ ಬಂದು ಹತ್ತರ ಹತ್ತರ ಎರಡು ವರ್ಷವಾಗತಾ ಬಂತು. ನಮ್ಮ ಹಕ್ಕಿನ ಪ್ರಸಾಪ ಮಾಡುವುದು ಆಗಲಿಲ್ಲ." పాపినిగా లింగా నోుడిది : ಸಸೂತ್ರವಾಗಿ ಕೆಲಸ ಆಗಬೇಕಾದರೆ ಇರುವುದು ಒಂದೇ ದಾರಿ, ರಾಜಕುಮಾರಿಯ ಮೇಲೆ ಚಕ್ರವರ್ತಿನಿಯ ಕೃಪಾಕಟಾಕ್ಷ ಬೀಳಬೇಕು.” "ನಾವು ಬಯಸುವುದಾದರೂ ಅದನ್ನೇ ಅಲ್ಲ ?" "ರಾಜಕುಮಾರಿಗೆ ತಾಯಿಯಿಲ್ಲ. 'ತಮ್ಮ ಉಡಿಯಲ್ಲಿ ಹಾಕಿದೇನೆ: ದೇವಮಾತೆಯಾಗಿ ಸಲಹುವ ಕೃಪೆಮಾಡಿ' ಅಂತ ಚಕ್ರವರ್ತಿನಿಯನ್ನು ಪಾರ್ಥಿಸಬೇಕು.” "ಅಂದರೆ ಅವಳನ್ನು ಬಿಟ್ಟ ನಾವಿರಬೇಕೆ?"
ಪುಟ:ಸ್ವಾಮಿ ಅಪರಂಪಾರ.pdf/೧೯೪
ಈ ಪುಟವನ್ನು ಪರಿಶೀಲಿಸಲಾಗಿದೆ