ಈ ಪುಟವನ್ನು ಪ್ರಕಟಿಸಲಾಗಿದೆ
೯೨
ಬಿ. ಎಸ್. ವೆಂಕಟರಾಮ್

ಬೇಕಾಗಿತ್ತು. ನಮ್ಮ ತಾಯಿಯ ಮಾತನ್ನವನು ಮಾರುವ ಹಾಗೇ ಇರಲಿಲ್ಲ.

ಸರಿ, ಹಣ ತೆಗೆದುಕೊಂಡು ಒಂದು ದಿನ ರಾಮ ಸಂಗಡ ಸ್ಟೇರ್ಷಗೆ ಹೋಗಿ ಅಲ್ಲಿಂದ ಹಾಗೇ ಬೊಂಬಾಯಿಗೆ ಹೊರಟೆ. ಹೋಗುವಾಗ ರಾಮ ಕಣ್ಣೀರಿಟ್ಟು ಕೊಂಡು ಆಗಾಗ್ಗೆ ತಪ್ಪದೆ ಕಾಗದ ಹಾಕುತ್ತಿರೆಂದು ಬೀಳ್ಕೊಟ್ಟ. ಅಷ್ಟು ವರ್ಷಗಳಿಗೆ ನಾವು ಆಗಲಿದ್ದು ಅದೇ ಮೊದಲು. ನನಗೂ ವ್ಯಥೆಯಾಯ್ತು. ಆದರೆ ಬೊಂಬಾಯಿಗೆ ಪ್ರಯಾಣ—ಸಂಗೀತ ವಿದ್ಯಾರ್ಜನೆಯ ಆಸೆಯಲ್ಲಿ ಅದು ಅರ್ಧ ಮುಚ್ಚಿಹೋಯಿತು. ಗಾಡಿಯು ಹೊರಟೇ ಬಿಟ್ಟಿತು. ರಾಮ ದೂರ ವಾಗುತ್ತ ಆಗುತ್ತ ಕೊನೆಗೆ ಕಾಣದಂತಾದ. ಆಗ ಏಕೋ ಮನ ವಳುಕಿತು.

XXXX

ಒಬ್ಬ ಉತ್ತಮ ಗವ ಬಳಿ ವಿದ್ಯಾರ್ಜನೆ ಮಾಡಿದ್ದಾಯ್ತು. ಆತನಿಂದಲೇ ಗಣ್ಯನೂ ಆದೆ. ಅನೇಕ ದೊಡ್ಡ ದೊಡ್ಡ ಮನುಷ್ಯರ ಮನೆಗಳಲ್ಲೆಲ್ಲಾ ಕಛೇರಿಯಾಗುತ್ತಿತ್ತು. ಅವರಲ್ಲಿ ಕೆಲವರಿಗೆ ನನ್ನ ಮೇಲೆ ಬಹಳ ವಿಶ್ವಾಸವುಂಟಾಗಿ ಅವರು ನನ್ನನ್ನು ಆಗಾಗ ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದರು. ಅವರ ಅತಿಧಿಯಾಗಿ ಅನೇಕ ದಿನಗಳು ಅವರ ಮನೆಯಲ್ಲೇ ನಿಲ್ಲಿಸಿಕೊಳ್ಳುತ್ತಿರಲು ನಾನು ಅವರ ಮನೆಯವರಲ್ಲಿ ಒಬ್ಬನಾದೆ. ಸಲಿಗೆಯು ಹೆಚ್ಚಿದಂತೆಲ್ಲಾ ಹೆಂಗಸರ ಆಟದ ಬೊಂಬೆ ಯಾಗಿ ಅಡ್ಡ ಹಾದಿ ತುಳಿದು ನಾನು ಮಾಡುತ್ತಿದ್ದ ಕಾರ್ಯದ ಪರಿವೆಯೇ ನನಗಿಲ್ಲದಂತಾಯ್ತು, ಪರಸ್ತ್ರೀಯರೆಂಬ ಭಾವನೆಯೇ ಹೋಗಿ, ಎಲ್ಲಿ ಕಾಲಿಟ್ಟರಲ್ಲಿ ಸ್ತ್ರೀಯರನ್ನು ಮರುಳು ಮಾಡಿ ನನ್ನ ಕಾಮವನ್ನು ಸುಡುತ್ತಿದ್ದೆ. ಸ್ತ್ರೀಯರು ನನ್ನ ಬಲೆಗೆ ಬಿದ್ದಂತೆಲ್ಲಾ ನನ್ನ ಕಾಮದ ಬೆಂಕಿಗೆ ತುಪ್ಪ ಸುರಿದಂತಾಗುತ್ತಿತ್ತೇ ಹೊರ್ತು ಅದು ಶಮನವಾಗುತ್ತಿರಲಿಲ್ಲ. ಕೊನೆಕೊನೆಗೆ ನನ್ನ ಸಂಗೀತ ವಿದ್ಯೆಯು