ನಿಮಿಷಗಳು ಬಲು ನಿಧಾನವಾಗಿ ಕಳೆದುವು.
ಸ್ವಲ್ಪ ಹೊತ್ತಿನಲ್ಲೇ ಸೋಮಶೇಖರ, ಯುವತಿಯಾದ ಒಬ್ಬ ಲೇಡಿ
ಡಾಕ್ಟರೊಡನೆಯೂ ಒಬ್ಬ ಯುವಕ ಡಾಕ್ಟರೊಡನೆಯೂ ಬಂದ.
ಹತ್ತಿರಬರುತಿದ್ದಂತೆ ಲೇಡಿ ಡಾಕ್ಟರು ಕೇಳಿದರು.
"ಎಲ್ಲಿ ಮಿಸ್ಟರ್ ಸೋಮಶೇಖರ್ ನಿಮ್ಮ ಪೇಷೆಂಟು?"
ಹಾಗೆ ಕೇಳಿದಾಗ ಆ ಡಾಕ್ಟರ ತುಟಗಳು ಸೂಕ್ಷ್ಮವಾಗಿ ನಕ್ಕಂತೆ
ತುಂಗಮ್ಮನಿಗೆ ತೋರಿತು. ಯಾಕೊ, ಆದೃಶ್ಯ ಆವಳಿಗೆ ಇಷ್ಟವಾಗಲಿಲ್ಲ.
ಸೋಮಶೇಖರ ಲಲಿತೆಯತ್ತ ಬೊಟ್ಟುಮಾಡಿದ ಗಂಡಸು ಡಾಕ್ಟರನ್ನು
ಉದ್ದೇಶಿಸಿ ಅವನೆಂದ:
"ಅಲ್ಲ ನಾಗರಜ್, ಇಂಧಗಲಾಟೀಲೂ ಕಾಹಿಲೆ ವಾಸಿ
ಯಾಗುತ್ತೇನಯ್ಯ?"
"ಅದೆಲ್ಲಾ ಕೇಳ್ಬೇಡ ನಾಳೆ ಚುನಾವಣೆಗೆ ನಿಂತು ಶಾಸನ ಸಭೆಗೆ
ಹೋಗಿ, ಆಸ್ಪತ್ರೆಗೆ ಹೊಸಕಟ್ಟಡಬೇಕು--ಜಾಸ್ತಿ ಬೆಡ್ಡು ಬೇಕು ಅಂತ
ಗಲಾಟೆ ಮಾಡು.ಈಗ--?"
ಆ ಡಾಕ್ಟರ ಮಾತು ನಿಲ್ಲಿಸಿ ಲೇಡಿ ಡಾಕ್ಟರು ಅಂದರು.
"ನೋಡಿ, ಆ ಕೊನೇ ಪೇಷೆಂಟು ನಾಳೆ ಬೆಳಿಗ್ಗೆ ಡಿಸ್ ಚಾರ್ಜು
ಆಗ್ತಾಳೆ"
ಕೊನೆಯ ಬೆಡ್ಡು ಅದು ಚೆನ್ನಾಗಿತ್ತು ಕಿಟಿಕಿಯಬಳಿ, ಗಾಳಿ ಓಡಾ
ಡುವ ಜಾಗ.
"ಹಾಗಾದರೆ ನಾಳೆ ಈಕೇನ ಅಲ್ಲಿ ಹಾಕಿಸ್ತೀರಾ? ಪ್ಲೀಸ್!"
ಡಾ ನಾಗರಾಜ್ ಅಂದರು:
"ಹೂಂ. ಅಷ್ಟೂ ಮಾಡ್ದೆ ಇರೋಕಾಗುತ್ತೇನಯ್ಯ, ನೀನು ಕೇಳ್ದೆ
ಅಂದ್ಮೇಲೆ."
ಬಂದಿದ್ದ ಡಾಕ್ಟರಿಬ್ಬರೂ ಲಲಿತೆಯ ತಲೆಯಮೇಲೆ ಮಂಚಕ್ಕೆತಗಲಿಸಿ
ತೂಗಹಾಕಿದ್ದ ಚಾರ್ಟನ್ನು ನೋಡಿದರು. ಒಬ್ಬೊಬ್ಬರು ಒಂದೊಂದು ವಿಧ
ವಾಗಿ ತುಂಗಮ್ಮನತ್ತ ದೃಷ್ಟಿಹಾಯಿಸಿದರು.
ಯುವತಿ ಡಾಕ್ಟರು ಮುಗುಳುನಗುತ್ತಲೇ ಅಂದರು: