ಆ ಉತ್ತರದಿಂದ ತೃಪ್ತಿಗೊಂಡವಳಂತೆ ತುಂಗಮ್ಮ ಸುಮ್ಮನಾದಳು.
"ನಾನು ಮೆಡಿಕಲ್ ಕಾಲೇಜಿಗೆ ಸ್ವಲ್ಪ ದಿವಸ ಮಣ್ಣು ಹೊತ್ತಿದ್ದೆ."
"ಓ!"
"ಇಷ್ಟರೊಳಗೆ ನಾನು ಈ ನಾಗರಜನಹಾಗೆ ಇಲ್ಲಿ ಹೌಸ್ ಸರ್ಜನ್
ಆಗಬೇಕಾಗಿತ್ತು ಆದರೆ ಅದೇನೋ ಅಂತಾರಲ್ಲ-ವಿಧಿ ಬರೆದಿರ್ರ್ಲಿಲ್ಲ
ಅಂತ!"
ತುಂಗಮ್ಮ,ಸೋಮಶೇಖರನನ್ನು ಡಾಕ್ಟರಾಗಿ ಚಿತ್ರಿಸಿಕೊಂಡಳು.
ಕಾಹಿಲೆಗಳನ್ನೆಲ್ಲ ಗುಣಮಾಡಬಲ್ಲ ವಿಚಕ್ಷಣ ಡಾಕ್ಟರು.ಕೆನ್ನೆಗಳು ಬಿರಿಯು
ವಂತೆ ತೋರುತಿದ್ದ ಆ ಮೋಹಕ ನಗೆಯೊಂದೇ ಸಾಕು, ರೋಗಿಗಳನ್ನು
ಹರ್ಷ ಚಿತ್ತರಾಗಿಮಾಡಲು.
"ಮೆಡಿಕಲ್ ಕಾಲೇಜು ಬಿಟ್ಬಿಟ್ರಾ?"
"ಹೂಂ ಕಣ್ರೀ. ಪ್ರಿ-ಮೆಡಿಕಲ್ನಲ್ಲೇನೋ ಪಾಸಾಯ್ತು ಫಸ್ಟ್
ಈಯರ್ ಆಗೋ ಹೊತ್ಗೆ ಬೇಜಾರಾಯ್ತು ನಂಗೆ-ಹೆಣ ಕುಯ್ದು ಕುಯ್ದು!"
ಪ್ರಿ-ಮೆಡಿಕಲೆಂದರೇನೋ ತುಂಗಮ್ಮನಿಗೆ ಗೊತ್ತಿರಲಿಲ್ಲ.ಏನೆಂದು
ಕೇಳಿ ತನ್ನ ಅಗನವನ್ನು ತೋರಿಸಿಕೊಲಳ್ಳುವುದಕ್ಕೂ ಆಕೆ ಸಿದ್ದಳಿರಲಿಲ್ಲ.
ಆದರೆ ಹೆಣಕೊಯವ ಆ ವಿಶಯ! ಅವಳ ಮೈ ಜುಮ್ಮೆಂದಿತು
"ಆಮೇಲೆ?ಕಾಲೇಜು ಬಿಟ್ಬಿಟ್ರಾ?"
-ವಿಷಾದದ ಛಾಯೆಯಿತ್ತು ಆ ಪ್ರಶ್ನೆಯಲ್ಲಿ.
"ಹೂಂ. ಅದಾದ್ಮೇಲೆ ಜಾಸ್ತಿ ಶ್ರಮವಹಿಸಿದ್ದೇನೆ ಬಿ ಎ ಮಾಡ್ಕೊಂಡೆ.
ವಕೀಲನಾಗೋದು ವಾಸಿ ಅನಿಸ್ತು.ಪೂನಾಗೆ ಹೋಗಿ ಎಲ್ ಎಲ್.ಬಿಗೆ
ಕೂತೆ. ಆದರೆ ಜತೇಗೆ ಎಂ ಎ.ನೂ ಮಾಡ್ಕೊಂಡೆ"
ಈ ಸೋಮಶೇಖರ್ ವಕೀಲ ಹಾಗಾದರೆ....ಕರಿಕೋಟು ಹಾಕಿ
ಕೊಂಡು ನ್ಯಾಯಾಸ್ಥಾನದಲ್ಲಿ ವಾದಿಸುವ ಚಿತ್ರ....ತುಮಕೂರಿನಲ್ಲಿ
ಯಾವುದೋ ತಮೀಳು ಸಿನಿಮಾದಲ್ಲಿ ನೋಡಿದ ಹಾಗೆ.
ಆಸ್ಪತ್ರೆಯ ಹೆಬ್ಬಾಗಿಲ ಬಳಿ ಸೋಮಶೇಖರ ಕೇಳಿದ:
"ನೀವು ಬಸ್ನಲ್ಲಿ ಹೋಗ್ತೀರಾ?"
"ಹೌದು.ನೀವು?"