ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೨೩೯
"ದುಡಿಯುವ ಜೀವಕ್ಕೆ ಬೇರೇನು ಬೇಕು ಹೇಳಿ? ಒಂದು ಬೀಡಿ, ಒಂದು ಕಪ್ ಚಾ!" ಅಲ್ಲಿದ್ದವರಿಗೆ ಚಹಾದ ನೆನಪಾಗಿ ಕೆಲವರು ಗೊಣಗಿದಾಗ, ಆತ ಗೋಗರೆಯುತ್ತ ಹೇಳುತ್ತಿದ್ದ: "ಪೋಲೀಸರು ಎಲ್ಲಾ ಸರಿ.ಆದರೆ ಒಂದು ವಿಷಯದಲ್ಲಿ ಮೋಸ ಮಾಡಿದ್ರು. ಆ ಹೋಟೆಲು ರಾಮುಣ್ಣೀನ ಅವರು ಹಾಗೇ ಬಿಡೋದೆ? ಆತನನ್ನೂ ಇಲ್ಲಿಗೆ ಕಳಿಸಿದ್ದಿದ್ರೆ,ಆಗ ತೋರಿಸ್ತಿದ್ದೆವು! ಏನು ಮಾಡೋಣ?" ೬ ಚಿರುಕಂಡ, ಅಪ್ಪು,ಮಾಸ್ತರು_ಈ ಮೂವರಿಗೆ ಕರೆ ಬಂತು, ಯಾರೋ ಭೇಟಿಗೆ ಬಂದಿದ್ದರು.ಭೇಟಿಯ ಕೊಠಡಿಗೆ ಹೊರಡುತ್ತ ಮೂವರೂ ಯೋಚಿಸಿದರು; ಯಾರಿರಬಹುದು? ಹಿಂದಿನ ದಿನವಷ್ಟೇ ಕಯ್ಯೂರಿನಿಂದ ಮಗಳೊಡನೆ ದೇವಕಿಯೂ, ಮಗವನ್ನೆತ್ತಿಕೊಂದು ಜಾನಕಿಯೂ ಬಂದಿದ್ದರು. ಈಗ ಇಷ್ಟರಲ್ಲೆ ಮತ್ತೆ ಯಾರು? ರಕ್ಷಣಾ ಸಮಿತಿಯವರು ಬಂದಿದ್ದರೂ ಇರಬಹುದೆಂದು ಊಹಿಸುತ್ತಲೇ ಆ ಮೂವರು ಕೊಠಡಿಯನ್ನು ಹೊಕ್ಕರು. ಜೇಲರು ಆಗಲೇ ಕುಳಿತಿದ್ದರು. ಆ ಭೇಟಿಯ ಮಟ್ಟಿಗೆ ತರಿಸಿದ್ದ ಕುಚಿ ಮೇಲೊಬ್ಬರಿದ್ದರು__ಎತ್ತರದ ದೇಹ, ಕೆಂಪು ಕೆಂಪಗಿನ ತುಂಬುಮುಖ, ಗುಂಗುರು ಕೂದಲು, ತೆರೆದುಕೊಂದು ನಗುತ್ತಲೇ ಇದ್ದ ತುಟಿಗಳು,ಕರಿಯ ಕೋಟು, ವಕೀಲರೆಂಬುದರಲ್ಲಿ ಸಂದೇಹವಿರಲಿಲ್ಲ.ಅವರ ಕೈಯಲ್ಲಿ ತೊಗಲಿನ ಚೀಲವಿತ್ತು. ಆ ಮೂವರು ಬಂದೊಡನೆ ವಕೀಲರು ಎದ್ದುನಿಂತು ತಮ್ಮ ಪರಿಚಯ ಮಾಡಿಕೊಟ್ಟರು: "ನಾನು ರಾಜಾರಾವ್,ವಕೀಲ, ನಿಮ್ಮ ಕಡೆಯ ವಕೀಲ..." ಮೂವರು ಅವರಿಗೆ ಕಮುಗಿದು ನಮಸ್ಕರಿಸಿದರು. ವಕೀಲರು ಎದ್ದು ನಿಂತುದು ಜೇಲರಿಗೆ ಸರಿಬೀಳಲಿಲ್ಲ.ಅವರು ಹೇಳಿದರು: "ನೀವು ಕೂತ್ಕಳ್ಳಿ ಮಿಸ್ಟರ್ ರಾಜಾರಾವ್." ಜೇಲರತ್ತ ನೋಡಿ ರಾಜಾರಾಯರು ವಿನಯದಿಂದ ಅಂದರು: "ಹೇಳೋದಕ್ಕೆ ಸಂಕೋಚವಾಗ್ತದೆ ಇವರೆ.ಇದು ಖಾಸಗಿ ಭೇಟಿಯಲ್ಲ. ವಕೀಲನಾಗಿ ಕಗಳನ್ನ ನೋಡೋದಕ್ಕೆ ಬಂದಿದ್ದೇನೆ.ಈ ಸಂಭಾಷಣೆ ನೀವು