ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಗಳು

ದಕ್ಷಿಣ ಕನ್ನಡದ ಕರಾವಳಿಯ ಮುಖ್ಯ ಬೆಳೆ ಭತ್ತ . ಒಳನಾಡಿನಲ್ಲಿ ಅಡಿಕೆ, ತೆ೦ಗುಗಳನ್ನು ಬೆಳೆಸುತ್ತಾರೆ. ಒಟ್ಟು 1,81,942 ಹೆಕ್ಟೇರುಗಳಲ್ಲಿ ಭತ್ತವನ್ನು ಮುಖ್ಯಬೆಳೆಯನ್ನಾಗಿ ಬೆಳೆಸುತ್ತಾರೆ.

ಇದನ್ನು ಬಿಟ್ಟರೆ ಕಬ್ಬು, ರಾಗಿ ಮತ್ತು ಧಾನ್ಮಗಳನ್ನು ಬೆಳೆಸುವ ಕ್ರಮವಿದೆ. ಎರಡನೆಯ ಫಸಲಿನ ಕಾಲದಲ್ಲಿ ಹುರುಳಿ, ಉದ್ದು, ಹೆಸರು, ನೆಲಗಡಲೆ ಮುಂತಾದವನ್ನು ಬೆಳೆಸುವ ಕ್ರಮವಿದೆ. ದ್ವಿದಳ ಧಾನ್ಮಗಳನ್ನು ಸಾಮಾನ್ಯ 16,000 ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯುತ್ತಾರೆ.

ಗುಡ್ಡದ ಕಮರಿಗಳಲ್ಲಿ ಮೂರನೆಯ ಫಸಲಿನ ಕಾಲದಲ್ಲಿ ಗದ್ದೆಗಳಲ್ಲಿ ತರಕಾರಿ, ಗಡ್ಡೆಗೆಣಸುಗಳನ್ನು ಬೆಳೆಸುತ್ತಾರೆ. ಶುಂಠಿಯ ಬೆಳೆಯನ್ನು, ಅರಶಿನವನ್ನು ಬೆಳೆಸುವ ಕ್ರಮವಿದೆ.

ಬಾಳೆಯನ್ನು, ಹಣ್ಣು ಹಂಪಲ ಗಿಡಗಳನ್ನು ಎಲ್ಲ ಕಡೆ ಕಾಣಬಹುದು. ಬಾಳೆಯ ಗಿಡಗಳು ಮೊದಲು ಅಡಿಕೆಗೆ ನೆರಳಾಗಿ ಇದ್ದು ಅಡಿಕೆ ಫಲ ಬರುವ ತನಕ ವಾಣಿಜ್ಯ ಬೆಳೆಯಾಗಿ ಬೆಳೆಸುವವರಿದ್ದಾರೆ. ಅಡಿಕೆಯ ಬೆಳೆ ಈಗ ಪುಮುಖ ವಾಣಿಜ್ಯ ಬೆಳೆಯಾಗಿದೆ.

ಚಂದ್ರಬಾಳೆ, ಕದಳಿ, ಗಾಳಿ, ಬೂದು, ಹೂ, ರಸ, ಮೈಸೂರು, ಪುಟ್ಟುಬಾಳೆಗಳೆ೦ದು ಅನೇಕ ಜಾತಿಯ ಸಂಪ್ರದಾಯಿಕ ಬಾಳೆಗಳ ಬೆಳೆಯೊಂದಿಗೆ ಇತ್ತೀಚೆಗೆ ಕ್ಯಾವೆ೦ಡಿಶ್‌ ಬಾಳೆಯನ್ನು ಬೆಳೆಸುವ ಕ್ರಮವನ್ನು ಅನುಸರಿಸಲಾಗುತ್ತಿದೆ.

ದಕ್ಷಿಣ ಕನ್ನಡದಲ್ಲಿ ಸುಮಾರು 2,609 ಹೆಕ್ಟೇರುಗಳಲ್ಲಿ ಕಸಿ ಮಾವಿನ ಕೃಷಿಯನ್ನು ಮಾಡುತ್ತಾರೆ. ಜೊತೆಗೆ ಸಾಂಪ್ರದಾಯಿಕ ಕಾಡು ಮಾವಿನ ಮರಗಳು ತುಂಬ ಇವೆ.

ಅಲ್ಫೋನ್ಸಾ, ಬೆನೆಟ್‌, ಪೈರಿ, ಮುಂಡಪ್ಪ, ತೋತಾಪುರಿ, ನೀಲಂ, ಬ೦ಗಲ್‌ಪಳ್ಳಿ ಮತ್ತು ಕದ್ರಿ ಮುಂತಾದ ಹಲವು ಜಾತಿಯ ಬೆಳೆಗಳನ್ನು ಬೆಳೆಸುತ್ತಾರೆ.

ಇದಲ್ಲದೆ ಕ್ಯೂ ಮತ್ತು ಮೊರಿಸಿಯನ್‌ ಜಾತಿಯ ಅನಾನಸುಗಳನ್ನು ಕಾರ್ಕಳ, ಬೆಳ್ತಂಗಡಿ ಕುಂದಾಪುರ ಮತ್ತು ಮಂಗಳೂರು ತಾಲೂಕುಗಳಲ್ಲಿ ಬೆಳೆಸುವ ಪದ್ಧತಿಯಿದೆ.

6