ಈ ಪುಟವನ್ನು ಪ್ರಕಟಿಸಲಾಗಿದೆ

(ಉಡುಪಿ, ಧರ್ಮಸ್ಥಳ). ಡಾ। ಶಿವರಾಮ ಕಾರಂತರು ಯಕ್ಷಗಾನ ಅಧ್ಯಯನ ಮತ್ತು ಪ್ರಾಯೋಗಿಕ ರಂಗಭೂಮಿಗಳ ಆದ್ಯರಾಗಿದ್ದು, ಅವರು ಪ್ರಾರಂಭಿಸಿದ ಅಧ್ಯಯನವನ್ನು ಹಲವು ವಿದ್ವಾಂಸರು ಮುಂದುವರಿಸಿದ್ದು, ಅನೇಕ ಉತ್ತಮ ಅಧ್ಯಯನಗಳು ಹೊರ ಬಂದಿದೆ.

1930, 1950 ಮತ್ತು 1970ರಲ್ಲಿ ಯಕ್ಷಗಾನದಲ್ಲಿ ದೊಡ್ಡ ಬದಲಾವಣೆಗಳು ಕಾಣಿಸಿಕೊಂಡು, ಕಂಪನಿ ನಾಟಕಗಳ ಪ್ರಭಾವ, ವಿದ್ಯುಚ್ಛಕ್ತಿಯ ಬಳಕೆ, ವೇಷ ವಿಧಾನದಲ್ಲೂ ಮತ್ತು ಯಕ್ಷಗಾನದ ವಸ್ತುವಿನ ಪರಿವರ್ತನೆಗಳು ಉಂಟಾದವು. 1950ರವರೆಗೆ ಧರ್ಮಾರ್ಥವಾಗಿ ಹರಕೆ ಬಯಲಾಟವಾಗಿ ಪ್ರದರ್ಶಿತವಾಗುತ್ತಿದ್ದ ಕಾಲ. ಈ ಕಲೆ, ಅನಂತರ ಸಂಚಾರಿ ರಂಗಮಂದಿರ (ಟೆಂಟ್ ಥಿಯೇಟರ್) ಗಳಲ್ಲಿ ಪ್ರದರ್ಶಿತವಾಗತೊಡಗಿತು. ಜೊತೆಗೆ ಹರಕೆ ಬಯಲಾಟಗಳೂ ಮುಂದುವರಿದಿವೆ. ಹರಕೆ ಬಯಲಾಟಗಳಿಗೂ ದೊಡ್ಡ ಪ್ರೋತ್ಸಾಹ ಇದೆ. ಕೆಲವು ಕ್ಷೇತ್ರಗಳ ಹರಕೆ ಆಟಗಳು ಮುಂದಿನ ಮೂರು ವರ್ಷಗಳಿಗೆ ಈಗಾಗಲೇ ಮುಂಗಡ ಕಾದಿರಿಸಲ್ಪಟ್ಟಿವೆ. ಬೇಸಗೆ ಕಾಲವಲ್ಲದೆ ಈಗ ಮಳೆಗಾಲದಲ್ಲೂ, ಸಭಾಭವನಗಳಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತದೆ. ದೂರದ ಊರುಗಳಿಗೆ ತಂಡಗಳು ಪ್ರವಾಸ ಹೋಗುವುದು ಮಳೆಗಾಲದಲ್ಲಿ. ಶಾಲಾ ಕಾಲೇಜು, ವರ್ಧಂತ್ಯುತ್ಸವ, ಯುವಕ ಸಂಘಗಳ ಸಮಾರಂಭಗಳಲ್ಲೂ ಯಕ್ಷಗಾನವು ಒಂದು ಅನಿವಾರ ಅಂಗವೆಂಬಂತೆ ಸೇರಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಮೇಳಗಳೂ ಉದಿಸಿವೆ. ಹವ್ಯಾಸಿ ವ್ಯವಸಾಯಿ ಚಟುವಟಿಕೆಗಳು ಭರದಿಂದ ಹೆಚ್ಚುತ್ತಿವೆ.

ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಗಾನವು 1950ರಿಂದ ಈ ಜಿಲ್ಲೆಯ ಮುಖ್ಯ ಜನಭಾಷೆಯಾದ ತುಳುವಿನಲ್ಲೂ ಅವತರಿಸಿತು. ತುಳು ಯಕ್ಷಗಾನದ ಉದಯವು, ಸಾಂಸ್ಕೃತಿಕ ವಿಕೇಂದ್ರಿಕರಣ ಬಹುಪ್ರಕ್ರಿಯೆಯಾಗಿದ್ದು ಆವರೆಗೆ ಅವಕಾಶವಿಲ್ಲದ ಜನರಿಗೆ, ಅಭಿರುಚಿಗೆ ಇಂಬು ನೀಡಿತು. ಈ ದೃಷ್ಟಿಯಿಂದ ಕನ್ನಡ ಕಲೆ ಆಗಿದ್ದ ಯಕ್ಷಗಾನ, ತುಳು ಕಲೆಯೂ ಆಗಿ, ಹೊಸ ಪ್ರೋತ್ಸಾಹ ಈ ಕಲೆಗೆ ಲಭಿಸಿತು. ಕಲೆ ಜನರಿಗೆ ಹತ್ತಿರವಾಯಿತು. ಇದೀಗ ಯಕ್ಷಗಾನ ತೆಂಕುತಿಟ್ಟಿನ ಒಳಗೆ ತುಳು ಯಕ್ಷಗಾನ ಪ್ರದರ್ಶನಗಳು, ಒಂದು ಭಿನ್ನಮಾರ್ಗವಾಗಿ ಮೂಡಿವೆ. ಅದರೆ, ತುಳು ಯಕ್ಷಗಾನಗಳಿಂದಾಗಿ ಯಕ್ಷಗಾನದ ಪಾರಂಪರಿಕ ಸೌಂದರ್ಯಾಂಶಗಳಿಗೂ, ಶೈಲಿ, ಕಲಾಂಗಗಳಿಗೂ ದೊಡ್ಡ ಊನ ಉಂಟಾದದನ್ನು

43