ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಾದೇಶಿಕ ವ್ಯಕ್ತಿತ್ವದಲ್ಲಿ ಒಳಗೊಂಡಿದೆ. ಇಲ್ಲಿಯ ಜನಮನದಲ್ಲಿ ಭೌತ ಸಾಹಸದ ಲಕ್ಷಣವಿದ್ದರೆ ಅದು ಪಶ್ಚಿಮಘಟ್ಟದ ಭವ್ಯನಿಲುವಿನ ಕೊಡುಗೆ. ಇಲ್ಲಿಯ ಪಡುಗಡಲ ಪ್ರೇರಣೆ. ಇಲ್ಲಿಯ ಜನಜೀವನ ಚಟುವಟಿಕೆಗಳಿ೦ದ ಅಹರ್ನಿಶಿ ತುಂಬಿಕೊಂಡಿದ್ದಾರೆ. ಇಲ್ಲಿಯ ಹತ್ತಾರು ಹೊಳೆಗಳು, ಹೊಳೆಗಳ ದಂಡೆಗಳನ್ನು ಅನುಸರಿಸಿ ಬೆಳೆದ ಕಾಡು, ಬಯಲ ಹಸಿರು ಇವೆಲ್ಲ ಕಾರಣವಾಗುತ್ತವೆ. ದಕ್ಷಿಣ ಕನ್ನಡಿಗ ತನ್ನ ನೆಲವನ್ನು ಬಿಟ್ಟು ದೇಶಾ೦ತರ ಹೋಗಬಲ್ಲ, ಮರಳಿ ಊರಿಗೆ ಬಂದು 'ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ' ಅ೦ತ ವಿರಾಮ ಜೀವನ ನಡೆಸಬಲ್ಲ. ಕವಿ ಅಡಿಗರ 'ಭೂಮಿಗೀತ' ಧೀರ್ಘಕವನದಲ್ಲಿ ಹೇಳಿದರು.

ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ
ಉರುಳು ಮೂರೇ ಉರುಳು ಕಡಲ ಕುದಿತದ ಎಣ್ಣೆಕೊಪ್ಪರಿಗೆ

ಹೀಗೆ ಮಲೆನಾಡು ಕರಾವಳಿಗಳ ವೈಶಿಷ್ಟ್ಯವನ್ನು ಮೈಗೂಡಿಸಿಕೊ೦ಡ ಜಿಲ್ಲೆ ದಕ್ಷಿಣ ಕನ್ನಡ. ಪಶ್ಚಿಮ ಘಟ್ಟ ಮತ್ತು ಅರಬೀ ಸಮುದ್ರದ ಮಧ್ಯದಲ್ಲಿ 240ಕಿ.ಮೀ ಉದ್ದ 32ರಿ೦ದ 96ಕಿ.ಮಿ ಅಗಲವಾದ ಪ್ರದೇಶ ದಕ್ಷಿಣ ಕನ್ನಡ. 1860ರಲ್ಲಿ ಬ್ರಿಟಿಷರಿ೦ದ ವಿಭಜಿಸಲ್ಪಡುವವರೆಗೆ ದಕ್ಷಿಣೋತ್ತರ ಜಿಲ್ಲೆಗಳು 'ಕರಾವಳಿ' ಜಿಲ್ಲೆಯೆ೦ದೆ ಕರೆಯುತ್ತಿದ್ದರು. ಪೋರ್ಚುಗೀಸರು ಕರೆದ "ಕೆನರಾ" ಜಿಲ್ಲೆಯನ್ನು ಆಡಳಿತ ಅನುಕೂಲಕ್ಕಾಗಿ ಬ್ರಿಟಿಷರು ಉತ್ತರ ಮತ್ತು ದಕ್ಷಿಣ ಕನ್ನಡಗಳೆ೦ದು ವಿಭಜಿಸಿದರು. (ಇತ್ತೀಚೆಗೆ ಮತ್ತೆ ದಕ್ಷಿಣ ಕನ್ನಡವನ್ನು ಉಡುಪಿ ಮತ್ತು ಮ೦ಗಳೂರು ಜಿಲ್ಲೆಗಳೆಂದು ವಿ೦ಗಡಿಸಿದರೂ ಇದರ ಸಾಂಸ್ಕೃತಿಕ ನೆಲೆಗಟ್ಟು ಒ೦ದೇ ಆಗಿದೆ. ಒ೦ದು ಕಾಲಕ್ಕೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳವರೆಗೆ ವ್ಯಾಪಿಸಿಕೊ೦ಡು ಬಿಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆ ಒ೦ದೇ ಸಂಸ್ಕೃತಿಗೆ ಸೇರಿದ ವಿಶಾಲ ಕರಾವಳಿ ಜಿಲ್ಲೆಯಾಗಿತ್ತು.

ದಕ್ಷಿಣಕನ್ನಡ ಜಲ್ಲೆಯ ಕರಾವಳಿಯ ಉದ್ದ ಸುಮಾರು ೧೪೦ಕಿ.ಮಿಗಳು. ಪಶ್ಚಿಮಘಟ್ಟದಲ್ಲಿ ಹುಟ್ಟಿ ಸುಮಾರು ೮೦ಕಿ.ಮೀಗಳಷ್ಟು ಹರಿದು ಪಶ್ಚಿಮದ ಅರಬೀ ಸಮುದ್ರವನ್ನು ಸೇರುವ ಹಲವಾರು ಮುಖ್ಯನದಿಗಳಿವೆ. ನೇತ್ರಾವತಿ, ಗಂಗೊಳ್ಳಿ, ಸೀತಾನದಿ, ಸ್ವರ್ಣನದಿ ಇವು ವಿಶಾಲವಾದ ಹರಹುಳ್ಳ ನದಿಗಳು, ಅದರ ಜತೆಗೆ ಕಿರುನದಿಗಳೂ ಸಾಕಷ್ಟಿವೆ.

ನೇತ್ರಾವತಿ ನದಿಯು ಕುದುರೆಮುಖದಲ್ಲಿ ಹುಟ್ಟಿ ಬಂಗಾಡಿ ಕಣಿವೆಯಲ್ಲಿ ಹರಿದು

2