ಈ ಪುಟವನ್ನು ಪ್ರಕಟಿಸಲಾಗಿದೆ

ಹುಡುಗರು ಟೋಫನ್ ಧರಿಸುವುದನ್ನು ಕಂಡಿದ್ದ ಜಯದೇವ ಆ ಹಳ್ಳಿಯಲ್ಲಿ ಬೇರೇನನ್ನೂ ನಿರೀಕ್ಷಿಸುವುದು ಸಾಧ್ಯವಿತ್ತು ?

ಇಷ್ಟಾದರೂ ಹುಡುಗಿಯರಿಗೆ ಸರಿಯಾದ ನಾಟಕ ಸಿಗಲಿಲ್ಲ. ಪ್ರಭಾಮಣಿ ದಿನಾಲೂ ಪೀಡಿಸುತ್ತಿದ್ದಳು:

“ಏನ್ಸಾರ್ ? ನಮ್ಮ ನಾಟಕ ಹುಡುಕ್ಲೆ ಇಲ್ವಲಾ ಸಾರ್ ನೀವು?"

ಜಯದೇವನಿಗೆ ಒಮ್ಮೆಲೆ ಪ್ರಾಥಮಿಕ ಶಾಲೆಯ ತಿಮ್ಮಯ್ಯ ಮೇಷ್ಟ್ರ ನೆನಪಾಯ್ತು, ನಾಟಕದ ಖಯಾಲಿಯ ಮನುಷ್ಯ, ಆ ಸಂಜೆಯೇ ಜಯದೇವ ಅವರನ್ನು ಕಂಡ. ಮಾಧ್ಯಮಿಕ ಶಾಲೆಯ వేుi్మ తెనే్కున్ను ಹುಡುಕಿಕೊಂಡು ಬಂದರೆಂದು ಅವರಿಗೆ ಸಂತೋಷವಾಗದಿರಲಿಲ್ಲ.

“ಹುಡುಗೀರು ಆಡೋಕೆ ಸರಿಹೋಗುವಂಥ ನಾಟಕ ಯಾವುದಾದ್ರೂ ಉಂಟೆ ತಿಮ್ಮಯ್ಯನವರೆ?"

ಅವರು ಮೂಗಿಗೆ ನಸ್ಯವೇರಿಸಿ ಒಂದು ಕ್ಷಣ ಗಂಭೀರವಾಗಿದ್ದು ಹೇಳಿದರು :

“ಯಾವಾಗ್ಬೇಕು?

“ಈಗ್ಲೇ ಸಿಗೋ ಹಾಗಿಲ್ವೇನು?”

“ಮನೇಲಿದೆ, ಹುಡುಕ್ಕೇಕು, ಇವತ್ತು ಮಂಗಳವಾರ, ಗುರುವಾರ ಕೊಟ್ರೆ ಸಾಕೊ ? ನೀವು ಎಲ್ಲಿರೋದು–ಜಯರಾಮಶೆಟ್ಟರ ಮನೇಲಿ ತಾನೆ? ಗುರುವಾರ ಬೆಳಿಗ್ಗೆ ಬಂದು ನಿಮ್ಮನ್ನ ಕಾಣ್ತೀನಿ? "

ಸಂಭಾಷಣೆಯನ್ನು ಕೇಳುತಲಿದ್ದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೆಂದರು.

“ತಿಮ್ಮಯ್ಯ, ನಾಳೆ ಶಾಲೆಗೆ ನೀವು ಚಕ್ಕರ್–ಹಾಗಾದ್ರೆ.”

ಮೂಗೊರೆಸಿ ತಿಮ್ಮಯ್ಯ, ಆ ದಿನ ಕಂಡಿದ್ದಂತೆ ನಾಟಕದ ಪಾತ್ರಧಾರಿಯ ಹಾಗೆಯೇ, ಬಿಡುಗಣ್ಣಿನಿಂದ ತಮ್ಮ ಮುಖ್ಯೋಪಾಧ್ಯಾಯರನ್ನು ನೋಡಿದರು.

ಗುರುವಾರ ಬೆಳಗ್ಗೆ ಬಂದು ತಿಮ್ಮಯ್ಯ ಮೇಷ್ಟ್ರು, ಸುರಳಿ ಸುತ್ತಿದ್ದ ಹಾಳೆಗಳನ್ನು ಜಯದೇವನಿಗೆ ಕೊಟ್ಟರು.

“ಕೈ ಬರಹ, ಪ್ರತಿಮಾಡಿದಿರಾ ?”