ಹುಡುಗರು ಟೋಫನ್ ಧರಿಸುವುದನ್ನು ಕಂಡಿದ್ದ ಜಯದೇವ ಆ ಹಳ್ಳಿಯಲ್ಲಿ ಬೇರೇನನ್ನೂ ನಿರೀಕ್ಷಿಸುವುದು ಸಾಧ್ಯವಿತ್ತು ?
ಇಷ್ಟಾದರೂ ಹುಡುಗಿಯರಿಗೆ ಸರಿಯಾದ ನಾಟಕ ಸಿಗಲಿಲ್ಲ. ಪ್ರಭಾಮಣಿ ದಿನಾಲೂ ಪೀಡಿಸುತ್ತಿದ್ದಳು:
“ಏನ್ಸಾರ್ ? ನಮ್ಮ ನಾಟಕ ಹುಡುಕ್ಲೆ ಇಲ್ವಲಾ ಸಾರ್ ನೀವು?"
ಜಯದೇವನಿಗೆ ಒಮ್ಮೆಲೆ ಪ್ರಾಥಮಿಕ ಶಾಲೆಯ ತಿಮ್ಮಯ್ಯ ಮೇಷ್ಟ್ರ ನೆನಪಾಯ್ತು, ನಾಟಕದ ಖಯಾಲಿಯ ಮನುಷ್ಯ, ಆ ಸಂಜೆಯೇ ಜಯದೇವ ಅವರನ್ನು ಕಂಡ. ಮಾಧ್ಯಮಿಕ ಶಾಲೆಯ వేుi్మ తెనే్కున్ను ಹುಡುಕಿಕೊಂಡು ಬಂದರೆಂದು ಅವರಿಗೆ ಸಂತೋಷವಾಗದಿರಲಿಲ್ಲ.
“ಹುಡುಗೀರು ಆಡೋಕೆ ಸರಿಹೋಗುವಂಥ ನಾಟಕ ಯಾವುದಾದ್ರೂ ಉಂಟೆ ತಿಮ್ಮಯ್ಯನವರೆ?"
ಅವರು ಮೂಗಿಗೆ ನಸ್ಯವೇರಿಸಿ ಒಂದು ಕ್ಷಣ ಗಂಭೀರವಾಗಿದ್ದು ಹೇಳಿದರು :
“ಯಾವಾಗ್ಬೇಕು?
“ಈಗ್ಲೇ ಸಿಗೋ ಹಾಗಿಲ್ವೇನು?”
“ಮನೇಲಿದೆ, ಹುಡುಕ್ಕೇಕು, ಇವತ್ತು ಮಂಗಳವಾರ, ಗುರುವಾರ ಕೊಟ್ರೆ ಸಾಕೊ ? ನೀವು ಎಲ್ಲಿರೋದು–ಜಯರಾಮಶೆಟ್ಟರ ಮನೇಲಿ ತಾನೆ? ಗುರುವಾರ ಬೆಳಿಗ್ಗೆ ಬಂದು ನಿಮ್ಮನ್ನ ಕಾಣ್ತೀನಿ? "
ಸಂಭಾಷಣೆಯನ್ನು ಕೇಳುತಲಿದ್ದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೆಂದರು.
“ತಿಮ್ಮಯ್ಯ, ನಾಳೆ ಶಾಲೆಗೆ ನೀವು ಚಕ್ಕರ್–ಹಾಗಾದ್ರೆ.”
ಮೂಗೊರೆಸಿ ತಿಮ್ಮಯ್ಯ, ಆ ದಿನ ಕಂಡಿದ್ದಂತೆ ನಾಟಕದ ಪಾತ್ರಧಾರಿಯ ಹಾಗೆಯೇ, ಬಿಡುಗಣ್ಣಿನಿಂದ ತಮ್ಮ ಮುಖ್ಯೋಪಾಧ್ಯಾಯರನ್ನು ನೋಡಿದರು.
ಗುರುವಾರ ಬೆಳಗ್ಗೆ ಬಂದು ತಿಮ್ಮಯ್ಯ ಮೇಷ್ಟ್ರು, ಸುರಳಿ ಸುತ್ತಿದ್ದ ಹಾಳೆಗಳನ್ನು ಜಯದೇವನಿಗೆ ಕೊಟ್ಟರು.
“ಕೈ ಬರಹ, ಪ್ರತಿಮಾಡಿದಿರಾ ?”