ಈ ಪುಟವನ್ನು ಪ್ರಕಟಿಸಲಾಗಿದೆ

'ಅಲ್ಲಿ ಮನೆ ಇರೊಲ್ಲ, ಹಾಸ್ಟಲಲ್ಲಿರ್ಬೇಕು.”

“ಹೌದು ಸಾರ್, ಹೈಸ್ಕೂಲು-ಕಾಲೇಜು ಎರಡೂ ಬೆಂಗಳೂರಲ್ಲೇ ಓದ್ಬಿಡೂಂತ ನಮ್ಮಣ್ಣ ಅಂತಿದ್ರು.”

ಬೆಂಗಳೂರು ಎಂಬ ಹೆಸರನ್ನು ಬಲು ಭಕ್ತಿಯಿಂದ ಆ ಹುಡುಗ ಉಚ್ಚರಿಸಿದ್ದ, ಅದು ಆತನ ಪಾಲಿನ ಮಾಯಾನಗರಿ.

ಜಯದೇವನೇನೋ ಹುಡುಗನ ಮಾತಿಗೆ 'ಹೂಂ'ಗುಟ್ಟಿದ. ಆದರೆ ಅವನ ಮನಸ್ಸು ಬೆಂಗಳೂರಿಗೆ ಧಾವಿಸಿತ್ತು, ಆತನ ಓದಿನ ವೈಖರಿ ವಿಚಿತ್ರವಾದುದು. ಪ್ರತಿವರ್ಷವೂ ಮುಂದಿನ ವರ್ಷದ ಓದಿನ ನಂಬಿಕೆ ಇಲ್ಲದೆಯೇ ಆತ ಪರೀಕ್ಷೆಗೆ ಕುಳಿತಿದ್ದ, ಆತನ ಪಾಲಿಗೆ ಪಾಧ್ಯಾಪಕರ ಪಾಠಗಳಲ್ಲದೆ, ತರಗತಿಯ ಅಧ್ಯಯನಗಳಲ್ಲದೆ, ಬಾಹ್ಯ ಪ್ರಪಂಚವೂ ದೊಡ್ಯ, ವಿಶ್ವವಿದ್ಯಾನಿಲಯವಾಗಿತ್ತು... .

ನಂಜುಂಡಯ್ಯ ಮನೆಯ ಹೆಬ್ಬಾಗಿಲಲ್ಲೇ ನಿಂತಿದ್ದು, ಸ್ವಾಗತಬಯಸಿದರು. ಅವರುಟ್ಟಿದ್ದ ಅಡ್ನ ಪಂಚೆ, ಮಲ್ಲಿನ ಜುಬ್ಬ, ಅವರ ಪ್ರಕೃತಿಗೆ ಸೌಮ್ಯತೆಯ ವಾತಾವರಣವನ್ನು ಕಲ್ಪಿಸಿದುವು.

ಅವರ ಕೊಠಡಿಯೂ ಊರಿನ ಆವರಣಕ್ಕಿಂತ ಭಿನ್ನವಾಗಿತ್ತು, ಪುಸ್ತಕಗಳು ತುಂಬಿದ ಬೀರುಗಳೆರಡು. ರಾಜಾ ರವಿವರ್ಮನಿಂದ ಮೊದಲಾಗಿ ಒಂದು ಪಾಶ್ಚಾತ್ಯ ವಕ್ರ ಕೃತಿಯವರೆಗೆ, ನಾನಾ ಬಗೆಯ ಚಿತ್ರಗಳು ಅಲ್ಲಿದ್ದುವು. ಬಾಗಿಲಿಗೆ, ಬಣ್ಣ ಬಣ್ಣದ ಗಾಜಿನ ಮಣಿಗಳನ್ನು ಹೊತ್ತಿದ್ದ ತೆಳು ಪರದೆ ಯನ್ನು ಇಳಿಬಿಟ್ಟಿದ್ದರು. ನಯ ನಾಜೂಕು ಇಲ್ಲದೆ ಹೋದರೂ ಒಳ್ಳೆಯ ಮರದಿಂದ ಮಾಡಿದ್ದ ಮೇಜು-ಕುರ್ಚಿಗಳು, ಹಳೆಯ ಕಾಲದ ಮನೆ ಕಿಟಕಿ ಗಳು ಚಿಕ್ಕವಾಗಿದ್ದರೂ ಗೋಡೆಗಳು ದಪ್ಪಗಿದ್ದು ಭದ್ರವಾಗಿದ್ದುವು.

ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತ ಜಯದೇವ ಕಪಾಟಗಳಲ್ಲಿಟ್ಟಿದ್ದ ಪುಸ್ತಕಗಳನ್ನೆ ದಿಟ್ಟಿಸಿದ.

“ಒಳ್ಳೆಯ ಗ್ರಂಥಸಂಗ್ರಹ ಇಟ್ಟಿದ್ದೀರಿ!”

ಹಾಗೆ ಹೊಗಳುವುದರಿಂದ ನಂಜುಂಡಯ್ಯನವರಿಗೂ ಸ್ವಲ್ಪ ತೃಪ್ತಿ ಯಾಗುವುದೆಂಬುದು ಜಯದೇವನಿಗೆ ತಿಳಿಯದೆ ಇರಲಿಲ್ಲ, ಆ ಮಾತು ಕೇಳಿ ನಂಜುಂಡಯ್ಯನ ಮುಖ ಸ್ವಾಭಾವಿಕವಾಗಿಯೇ ಅರಳಿತು.