ಈ ಪುಟವನ್ನು ಪ್ರಕಟಿಸಲಾಗಿದೆ

ವಾಗಿ ಹೇಳಬೇಕೆನ್ನಿಸಿತು. ಆದರೆ ವಿರಸಕ್ಕೆ ಎಡೆಯಾಗುವುದೇನೋ ಎಂದು ಆತ ಸುಮ್ಮನಾದ. ರಂಗರಾಯರು ಮಾತ್ರ ಸುಮ್ಮನಿರುವಂತೆ ತೋರಲಿಲ್ಲ.

“ಹುಡುಗರ ವಿದ್ಯಾಭ್ಯಾಸ ಕೆಡೋದಕ್ಕೆ ನಾಟಕ ಕಾರಣ ಅಂತ ಹ್ಯಾಗೆ ಹೇಳ್ತೀರಿ ನಂಜುಂಡಯ್ಯ? ನಾಟಕವೇ ಬೇಡ ಅಂದ್ರೆ ಸಾಂಸ್ಕೃತಿಕ ಚಟುವಟಿಕೆ ಅನ್ನೋದಾದ್ರೂ ಎಲ್ಲಿರುತ್ತೆ? ಏನೋಪ್ಪಾ, ನಿಮ್ಮ ಮಾತು ಸರೀಂತ ನನಗೆ ತೋರೋಲ್ಲ.”

ಇದೊಂದೇ ಭಿನಾಭಿಪ್ರಾಯವಾಗಿದ್ದರೆ, ಅದಕ್ಕೆ ಮಹತ್ವ ಕಲ್ಪಿಸಬೇಕಾದ ಅಗತ್ಯವಿರಲಿಲ್ಲ, ಆದರೆ ಅದರ ಹಿಂದೆ ಬೇರೆ ಕಹಿ ವಿಚಾರಗಳೆಲ್ಲ ಹೊಗೆಯಾಡುತ್ತಿದುವು. ಮುಂದೆ ಮಾತು ಹೇಗೆ ಬೆಳೆಯುವುದೋ ಎಂದು ಜಯದೇವನಿಗೆ ಕಾತರವೆನಿಸಿತು.

ನಂಜುಂಡಯ್ಯನೆಂದರು .

“ಆ ಮಾತು ಅಷ್ಟಕ್ಕೆ ಬಿಟ್ಬಿಡೋಣ ಸಾರ್. ಅದೇನೂ ಹೊಸ ವಿಷಯ ಅಲ್ವಲ್ಲ, ಎಷ್ಟು ಸಲ ಚರ್ಚೆ ಮಾಡಿದೀವೊ ಏನೋ.”

“ಹಾಗೇ ಆಗ್ಲಿ, ನೀವಾಗಿಯೇ ನಾಟಕದ ಮಾತೆತ್ತಿದ್ರಲ್ಲಾಂತ ನಾನು ಹಾಗಂದೆ.”

ನಂಜುಂಡಯ್ಯ ಮೌನವಾಗಿದ್ದು, ಅಲ್ಲಿಂದ ಮತ್ತೆಲ್ಲಿಗೋ ಬೆಳೆಯ ಬಹುದಾಗಿದ್ದ ಆ ಸಂಭಾಷಣೆಯ ಪ್ರಕರಣವನ್ನು ಆ ರೀತಿ ಚುಟುಕಾಗಿ ಮುಕ್ತಾಯಗೊಳಿಸಿದರು.

ಆನಂದ ವಿಲಾಸದಲ್ಲಿ ಸಂಜೆಯ ಕಾಫಿಯಾಗುತ್ತಿದ್ದಂತೆ ನಂಜುಂಡಯ್ಯ ಕೇಳಿದರು;

“ನಮ್ಮ ಪಂಚಾಯತ ಬೋರ್ಡು ಅಧ್ಯಕ್ಷರ ಮನೆಗೆ ಹೋಗೋಣ್ವೆ?

“ಹೋಗೋಣ, ಮೊನ್ನೆ ತಾನೆ ಕೇಳಿದ್ರು- ಹೊಸ್ಮೇಷ್ಟ್ರು ಯಾವಾಗ ಬರ್ತಾರೇಂತ.”

ಅಧ್ಯಕ್ಷರೇ ಆ ಊರಿನ ಪ್ರಮುಖರು. ಊರಿನ ಇನ್ನೊಬ್ಬ ಹಿರಿಯರೆಂದರೆ ಸಬ್ಇನ್ಸ್ಪೆಕ್ಟರು. ಹಾಗೆ, ಊರಿನ ಇಬ್ಬರು ಮುಖ್ಯಸ್ಥರಲ್ಲಿ ಒಬ್ಬರನ್ನು ನೋಡಲು ಮೂವರು ಉಪಾಧ್ಯಾಯರೂ ಹೊರಟರು.

... ಮನೆಗೆ ಬರುತ್ತಿದ್ದ ಆ ಮೂವರಿಗೂ ಸಾಗತ ಬಯಸಿದರು ಅಧ್ಯಕ್ಷ ಶಂಕರಪ್ಪ,