ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೪೧ "ಮೈ ಬೆಚ್ಕಗಿದೆಯೇ ಏನೂಂತ ನೋಡಕ್ಕೆ ಬಂದಿಯಾ?"

ಮೈ ಬೆಚ್ಚಗಿರಲೇ ಇಲ್ಲ. ಆ ಜೀವದಲ್ಲಿ ಜ್ವರದ ಚಿಹ್ನೆ ಇರಲೇ ಇಲ್ಲ. "ನಿಮ್ಮಮ್ಮ ಸೀನೋದು ಕೇಳಿದ ತಕ್ಷಣ ನನ್ನ ಜ್ವರ ಓಢ್ಹೋಯ್ತು. ಇಬ್ಬರೂ ಕಾಹಿಲೆ ಬೀಳೋದಕ್ಕಾಗುತ್ಯೆ? ಎಷ್ಟು ರೋಗಿಗಳ ಆರೈಕೆ ಮಾಡೀಯಮ್ಮಾ ನೀನಾದರೂ?"

ಹಾಗೆ ಹೇಳುತ್ತ ಅವರು ನಕ್ಕರು. ನಗುತಿದ್ದಂತೆ ಕುಣಿದ, ಸ್ವಲ್ಪ ನೀಳವಾಗಿದ್ದ, ಅವರ ಮೂಗನ್ನು ಸರಸ್ವತಿ ಹಿಡಿಯಲೆತ್ನಿಸಿದಳು.

...ಮಾರನೆಯ ಬೆಳಿಗ್ಗೆ ಸುನಂದೆಯ ತಾಯಿಯ ಮೈ ಬೆವರಿತು. ಆ ಮೇಲೆ ಜ್ವರ ಬರಲಿಲ್ಲ. ಆದರೆ ನೆಗಡಿ ಇತ್ತು. ಅದರ ಆಯಸು ಮೂರು ದಿನ.

ಜ್ವರ ಬಂದು ತಂದೆ ಹಾಸಿಗೆ ಹಿಡಿಯುವ ಬದಲು ತಾಯಿ ಕಾಹಿಲೆ ಬಿದ್ದುದು ಮೊದಲ ನೋಟಕ್ಕೆ ವಿಚಿತ್ರವೆನಿಸುತ್ತಿತ್ತು. ಆದರೆ ಸುನಂದೆ, ತನ್ನ ತಾಯಿ ಮತ್ತು ತಂದೆಯ ನಡುವೆ ಇದ್ದ ಪ್ರಗಾಢವಾದ ಆತ್ಮೀಯತೆಯನ್ನು ತಿಳಿಯದವಳಲ್ಲ. ಮಗಳನ್ನು ಗಂಡನ ಮನೆಗೆ ಕಳುಹಿಸಿದ ಮನೋವೇದನೆಯೇ ಒಳಸಂಚು ನಡೆಸಿ ತಮ್ಮ ಕೈಹಿಡಿದಾಕೆಯ ಆರೋಗ್ಯದ ಮೇಲೆ ಧಾಳಿನಡೆಸಿತ್ತೆಂದು ಕೃಷ್ಣಪ್ಪನವರು ಸುಲಭವಾಗಿಯೆ ಊಹಿಸಿದ್ದರು.ಆಂತಹ ದೌರ್ಬಲ್ಯ ತಾವು ತೋರಬಾರದೆಂದು ತಮ್ಮ ದೇಹಾಲಸ್ಯವನ್ನು ಆವರು ಕಡೆಗಣಿಸಿದರು, ನಿಸರ್ಗದ ಕಿರುಕುಳವನ್ನು ಇಚ್ಛಾಶಕ್ತಿ ಜಯಿಸಿತು. ಅವರ ಗೃಹವೈದ್ಯ ಸಂತೈಸುವ ಎರಡು ನುಡಿ, ವಿಜಯಳ ಅಕ್ಕ ಸುನಂದೆಯ ಆರೈಕೆ ಸಂಪೂರ್ಣವಾಗಿ ಆಕೆಯ ತಾಯಿಯ ಕಾಹಿಲೆಯನ್ನು ಸೋಲಿಸಿದುವು.

..ಮತ್ತೆ ಏಕಪ್ರಕಾರವಾದ ದಿನಗಳು. ಹಗಲು-ಇರುಳು ಸುನಂದೆಯ ತಾಯಿ ಹೇಳುತ್ತಿದ್ದರು.

"ಪೋಸ್ಟಿನೋನು ಬರೋ ಹೊತ್ತಾಯ್ತೋ ಏನೋ. ಬೀದಿ ಕಡೆ ಹೋಗಮ್ಮ."

ವಾಚನಾಲಯದ ಕಡೆಗೋ ದಿನಸಿ ಅಂಗಡಿಗೋ ಹೋಗಿದ್ದ ಕೃಷ್ಣಪ್ಪನವರು, ಮನೆಗೆ ಬಂದೊಡನೆ ಕೇಳುತ್ತಿದ್ದರು:

"ಏನಾದರೂ ಕಾಗದ ಬಂತೇನೇ ಸುನಂದಾ?"

ವಿಜಯಾ ಗಂಡನ ಮನೆಗೆ ಹೋದ ಆರನೆಯ ದಿನ ಆ ಕಾಗದ ಬಂತು.