ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೪೩ ಕೃಷ್ಣಪ್ಪನವರು ಉಗುಳು ನುಂಗಿದರು. ಸಾಧ್ಯವಿದ್ದಿದ್ದರೆ ಅದಕ್ಕಿಂತಲೂ ಕಠಿನವಾದ ಮಾತನ್ನೆ ಆಡಲು, ಶಪಿಸಿಬರಲು, ಅವರು ಸಿದ್ದರಿದ್ದರು. ಆದರೆ ಈಗೆ ಅವೆಲ್ಲಾ, ತಮ್ಮೊಳಗೆ ತಾವೇ ಅಂದುಕೊಳ್ಳಬೇಕಾದ ಮಾತುಗಳು ಮಾತ್ರ. ಸುನಂದೆಯ ತಾಯಿ ಬಿಕ್ಕಿಬಿಕ್ಕಿ ಅತ್ತೆರು: ಉರಿಯುತ್ತಿದ್ದ ಬೆಂಕಿಯ ಮುಂದೆ ಬಿಸಿಯಾದ ಕ೦ಬನಿ ಒಂದರಮೇಲೊಂದಾಗಿ ತೊಟ್ಟಿಕ್ಕಿತು, ಕೈಹಿಡಿದವಳ ಸಂಕಟವನ್ನು ಸಹಿಸಲಾರದೆ ಕೃಷ್ಣಪ್ಪನವರು ಅಸಹನೆ ಯಿಂದ ಅಂದರು ; “ಅಳಬೇಡ ಯಾಕ್ಸುಮ್ನೆ అಳ್ತೀಯಾ? ನೀನು ಅತ್ತರೆ ಅವನಿಗೆ ಬುದ್ದಿ ಬರುತ್ತೇನು ?... ಮಾಡೋ ಕೆಲಸ ನಾವು ಮಾಡ್ಬೇಕು. ಉಳಿದದ್ದೆಲಾ ಭಗವಂತನ ಇಚ್ಛೆ. ಸ್ವಸ್ಥವಾಗಿರು. ಎಲ್ಲಾ ಸರಿಹೋಗುತ್ತೆ.” ಆ ನಂಬಿಕೆಯೊಡನೆ ಅವರ ಮಾತುಕತೆ ಮುಕ್ತಾಯವಾಯಿತು. .... ಬುಧವಾರ ಬಂತು. ಹೂರಡಲನುವಾದ ಕೃಷ್ಣಪ್ಪನವರು ಹೆಂಡತಿಗೂ ಮಗಳಿಗೂ ಹೇಳಿದರು : "ಬರೋದು ತಡವಾಗುತ್ತೋ ಏನೋ, ಭಾನುವಾರ ಆತನಿಗೆ ರಜಾ. ಅಂತೂ ಆ ರಾತ್ರಿಯೋ ಸೋಮವಾರವೋ ಅಲ್ಲಂದ ಹೊರಡ್ತೀನಿ." "ಕಾಗದಾ ಬರೀತೀಯಾ ?” ಎಂದು ಸುನಂದಾ ಕೇಳಿದಳು. ಅ೦ತಹ ಅಭ್ಯಾಸವೇ ಸಾಮನ್ಯವಾಗಿ ಇಲ್ಲದ ಕೃಷ್ಣಪ್ಪನವರು ಉತ್ತರಕ್ಕಾಗಿ ಅರೆಕ್ಷಣ ತಡವರಿಸಿ ಅಂದರು : ತುರ್ತಾಗಿ ತಿಳಿಸ್ಬೇಕಾದ್ದು ಏನಾದರೂ ಇದ್ದರೆ ಬರೀತೀನಿ. “ನಾನು ಬರ್ಬೀಕಾಗುತ್ತಾ ?” "ಪರಿಸ್ಥಿತಿ ನೋಡ್ಕೊಂಡು ಬರೀತೀನಿ ಸುನಂದಾ." ಸುನಂದೆಯ ತಾಯಿ ಏನನ್ನೂ ಹೇಳಲಾರದೆ ಸುಮ್ಮನೆ ನಿಂತರು. ಕೃಷ್ಣಪ್ಪನವರು ಹಳೆಯದಾಗಿದ್ದ ತಮ್ಮ ಚಪ್ಪಲಿ ಮೆಟ್ಟಿಕೊಂಡು, ಧೋತ ರದ ಅಂಚನ್ನು ಬಲಗೈಯಿಂದೆತ್ತಿ, ಎಡಗೈಯಲ್ಲಿ ಚೀಲಹಿಡಿದು, ರೈಲು ನಿಲ್ದಾ ಣದ ಕಡೆಗೆ ನಡೆದರು.