ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಎಕಾಂಗಿನಿ ೬೩
“ಆತ ಎಂಥ ಮನುಷ್ಯ ಆನ್ನೋದನ್ನ ನಾನೂ ಒಮ್ಮೆ ನೋಡೇ ಬಿಡ್ರೀನಿ” “ಅದೇನು ನೋಡ್ರೀಯೋ ನೋಡಪ್ಪ, ನನಗಂತೂ ಬೇಜಾರಾಗ್ಬಿಟ್ಟಿದೆ”.
“ಬೇಜಾರು ಅಂತ ಸುಮ್ನಿ ರೋಕಾಗುತ್ತೇನಯ್ಯ? ಧೈರ್ಯವಾಗಿರಬ್ಬೇಕು
ನೋಡೋಣ". ರಾಮಕೃಷ್ಣಯ್ಯ ಹಾಗೆ ಹೇಳಿ ಗರೇನೋ ನಿಜ. ಆದರೆ, ಪ್ರಶ್ನೆ ಜಟಲ ವಾಗಿದೆ ಎನ್ನುವುದು ಅವರಿಗೆ ಆಗಲೇ ವ.ನದಟ್ಟಾಗಿತ್ತು, ಗೆಳೆಯನ ಕುಟುಂ
ಬಳ್ಕೆ ಪ್ರಾಸ್ತವಾದ ಸಂಕಟಕ್ಕಾಗಿ ಅವರ ಮನಸ್ಸೂ ಮರುಗಿತು.
೮ ಪುಟ್ಟಣ್ಣನ ವಾಸ ಸ್ಥಾನವನ್ನು ಕೃಷ್ಣಪ್ಪನವರು ಕೈಗೊಂಡ ಉಪಾಯ ಬಲು ಪುರಾತನವಾದದ್ದು. ಬೆಳಗ್ಗೆ ಬೇಗನೆದ್ದು ಆವರು ಮುಖ ಕ್ವೌರ ಮಾಡಿಸಿಕೊಂಡರು. ಪ್ರಾತರ್ವಿಧಿಗಳ ಬಳಿಕ, ಪುಟ್ಟಣ್ಣನ ಆಫೇಸಿಗೆ ಹೊತ್ತಿಗೆ ಮುಂಚೆಯೇ ಹೋಗಿ, ಅಲ್ಲಿನ ಒಬ್ಬ ಜವಾನನ್ನು ಕುರಿತು “ಅಪ್ಪಾ” ಎಂದರು. ಕೃಷ್ಣಪ್ಪನವರ ಎಂಬಾನೆಯ ನಾಣ್ಯ ಆತನ ಅಂಗೈಯೊಳಗೆ ಕುಳಿತಿತು. ಕಾರಣವಿಲ್ಲದೆಯೇ ಇಂತಹ ಕಾಣಿಕೆ ಸ್ವೀಕರಿಸುವುದು ಸರಿಯಲ್ಲ ಎನ್ನು
ವಂತೆ ಆತನೆಂದ.
"ಏನು ಸಮಾಚಾರ ಹೇಳಿ ” “ನಿಮ್ಮ ಆಫೀಸಿನಲ್ಲಿ ఇంజినిಯರ್ ಸಾರ್ಹೇಬರು ಪುಟ್ಟಣ್ಣ ಅವರಿಲ್ವೆ?
ಅವರ ಕಡೆಯಿಂದ ನನಗೊ೦ದು ಕೆಲಸ ಆಡ್ಬೇಕಾಗಿದೆ. ಅವರನ್ನ ನಾನು
ತುರ್ತಾಗಿ ನೊಡ್ಬೇಕು. ಸಾಹೇಬರ ಮನೆ ಎಲ್ಲಿದೆ ಅಂತ ತೋ ಸ್ತ್ರೀಯಾ?” ಜವಾನ ಎಂಟ ಣೆಯನ್ನು ಜೇಬಿನೊಳಕ್ಕೆ ತುರುಕಿದ ಪುಟ್ಟಣ್ಣ ಈಗ ಇರವುದೆಲ್ಲೆಂದು ಆತನಿಗೆ ಗೊತ್ತಿರಲಿಲ್ಲ. ಹೀಗಾಗಿ, ಪುಟ್ಟಣ್ಣನ ವಿಭಾಗದ ಕರೆಹುಡುಗನನ್ನು ಆತ ಕರೆದ.