ಈ ಪುಟವನ್ನು ಪ್ರಕಟಿಸಲಾಗಿದೆ

ಚಂದಾದಾರರಲ್ಲಿ ನಿವೇದನೆ.

ಪ್ರತಿಭಾ ಗ್ರಂಥಮಾಲೆಯ ಒಂಬತ್ತನೆಯ ವರುಷವು ಈ 'ಹೊಸಬೆಳಕಿ'ನೊಂದಿಗೆ ಪೂರ್ತಿಯಾಗುತ್ತಿದೆ. ಈ ವರುಷ ಐದು ಕಾದಂಬರಿಗಳನ್ನೂ ಒಂದು ಕಥಾಸಂಕಲನವನ್ನೂ ಚಂದಾದಾರರಿಗೆ ಸಲ್ಲಿಸಿದಂತಾಯ್ತು. ಯೋಜನೆಯ ಮಾಲೆಯು ಒಂಬತ್ತುನೂರು ಪುಟ ಸಾಹಿತ್ಯವನ್ನು ಸಕಾಲಕ್ಕೆ ನೀಡಿದೆಯೆಂದು ತಿಳಿಸಲು ಅಭಿಮಾನವೆನಿಸುತ್ತದೆ. ಜನೆವರಿ ೧೯೫೩ಕ್ಕೆ ಹೊಸವರ್ಷಾರಂಭವಾಗುವದು.

ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ನಮ್ಮ ನಿಯಮಿತವಾದ ಸೇವೆಯನ್ನು ಮೆಚ್ಚಿ ಕನ್ನಡಾಭಿಮಾನಿಗಳು ಕೊಡುತ್ತಿರುವ ಬೆಂಬಲವೇ ಇದಕ್ಕೆ ಕಾರಣವಾಗಿದೆ.

ಆದಷ್ಟು ಸುಂದರವಾದ ಕೃತಿಗಳನ್ನೇ ಪ್ರಕಟಿಸಬೇಕೆಂದು ಮಾಲೆಯ ನಿರ್ಧರಿಸಿದೆ. ಬರುವ ವರುಷದಲ್ಲಿ ಶ್ರೀ. ಅ. ನ. ಕೃಷ್ಣರಾಯರು, ಶ್ರೀ. ಬಸವರಾಜ ಕಟ್ಟಿಮನಿ, ಶ್ರೀ ಕೃಷ್ಣಮೂರ್ತಿ ಪುರಾಣಿಕ, ಶ್ರೀ ನೇವ ನಮಿರಾಜಮಲ್ಲ, ಶ್ರೀ ಜನಾರ್ದನ ಗುರ್ಕಾರ್ ಮೊದಲಾದ ಹೆಸರಾಂತ ಲೇಖಕರ ಉತ್ತಮ ಕಾದಂಬರಿಗಳನ್ನು ಪ್ರಕಟಿಸಬೇಕೆಂದು ನಿರ್ಧರಿಸಲಾಗಿದೆಯೆಂದು ಅರಿಕೆ ಮಾಡಿಕೊಳ್ಳಲು ಸಂತೋಷವಾಗುತ್ತದೆ.

ಪ್ರತಿ ಪುಸ್ತಕಕ್ಕೂ ದ್ವಿವರ್ಣ ಚಿತ್ರವುಳ್ಳ ರಕ್ಷಾಪತ್ರದ ಏರ್ಪಾಡುಮಾಡಿದ್ದೇವೆ. ಹೊಸ ವರುಷದ ಹೊಸ ಯೋಜನೆಯಿದು. ಆದುದರಿಂದ ಈಗಿದ್ದ ಎಲ್ಲ ಚಂದಾದಾರರು ಶಾಶ್ವತ ಉಳಿಯಬೇಕೆಂದೂ ಮತ್ತೆ ಹೊಸ ಹೊಸ ಜನರು ಚಂದಾದಾರವಾಗಿ ಪ್ರೋತ್ಸಾಹಿಸಬೇಕೆಂದೂ ಬೇಡಿಕೊಳ್ಳುತ್ತೇವೆ.

ಈ ಕಥಾಸಂಕಲವನ್ನು ಕೊಟ್ಟು ಮಾಲೆಗೆ ಸಹಾಯ ಮಾಡಿದ ಶ್ರೀ. ವೆಂ. ಮು. ಜೋಶಿಯವರಿಗೂ, ಮುನ್ನುಡಿಕಾರರಾದ ಶ್ರೀ. ಬೆಟಗೇರಿ ಕೃಷ್ಣಶರ್ಮರಿಗೂ ಮತ್ತು ಚಿತ್ರಕಾರರಾದ ಶ್ರೀ. ಮೂರ್ತಿಯವರಿಗೂ ಕೃತಜ್ಞರಾಗಿದ್ದೇವೆ.


ಭಾಲಚಂದ್ರ ಘಾಣೇಕರ