ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಹೊಗೆಯಿಂದ ಹೊರಗೆ

"ನಿಜಕ್ಕೂ."

ಗಂಭೀರಸಿಂಗರ ಪತ್ನಿ ಆ ಮಾತಿಗೆ ಉಬ್ಬಿ ಹೋಗಿದ್ದರು. ಮತ್ತೆ ಗಂಭೀರಸಿಂಗರೇ ಹೇಳಿದರು:

"ಅವನ ಮದುವೆಯಾಗಿ ಬಿಟ್ಟಿತೆಂದರೆ, ಹೊಸ ಸಂಸಾರದ ಹುರುಸಿನಲ್ಲಿ ತನ್ನ ತಂಗಿಯನ್ನು ಸಾವಧಾನವಾಗಿ ಮರೆಯುತ್ತ ಹೋಗುತ್ತಾನೆ. ಮುಂದೆ ಎಲ್ಲವೂ ಸುರಳೀತವಾಗಿ ಸಾಗುತ್ತದೆ." ಸಂಕಟ ನಿವಾರಣೆಯ ಸೂಚನೆ, ಗಂಭೀರಸಿಂಗರ ಪತ್ನಿಗೆ ಸಮ್ಮತವಾಯಿತು.

ಜಸವಂತಸಿಂಗನ ಮದುವೆ ಮಾತಿಗೆ ಪ್ರಾರಂಭವಾಗುತ್ತಿರುವ ಮೊದಲೇ ಗಂಭೀರಸಿಂಗರಿಗೆ ದಿಲ್ಲಿಯಿಂದ ನಾಗಪೂರಕ್ಕೆ ವರ್ಗವಾಯಿತು. ನಾಗಪೂರಕ್ಕೆ ಬಂದ ಒಂದೆರಡು ತಿಂಗಳಲ್ಲಿಯೇ ಗಂಭೀರಸಿಂಗರು ಜಸವಂತಸಿಂಗನ ಮದುವೆ ಮಾಡಲು ಪ್ರಯತ್ನಿಸತೊಡಗಿದರು ಒಂದು ದಿನ ಮಧ್ಯಾನ್ಹ ಊಟವಾದ ನಂತರ ಗಂಡಹೆಂಡರಿಬ್ಬರೂ ಮದುವೆಯ ಬಗ್ಗೆ ಮಾತನಾಡುತ್ತಿರುವಾಗಲೇ ಜಸವಂತನೂ ಒಳಗೆ ಬಂದು ನಿಂತ.

ಗಂಭೀರಸಿಂಗರು ಅವನನ್ನು ಹತ್ತಿರ ಕರೆದು "ಮಗೂ, ನೀನಿನ್ನು ದೊಡ್ಡವನಾದೆ. ನಿನ್ನ ಮದುವೆ ಈಗಲೇ ಮಾಡುವದು ಒಳಿತು."

“........” ಜಸವಂತಸಿಂಗ ನಿರುತ್ತರನಾದ. ಅವನ ಮೌನವನ್ನು ಗಂಭೀರಸಿಂಹರು ಸಮ್ಮತಿಯ ಸೂಚನೆಯಂದು ಅರ್ಥ ಮಾಡಿಕೊಂಡು ಮುಂದೆ ಹೇಳಿದರು: "ಹೆಣ್ಣು, ನೋಡೋಣವೇ?"

"ಹೆಣ್ಣು" ಗಾಬರಿಗೊಂಡ ಸ್ವರದಲ್ಲಿ ಜಸವಂತಸಿಂಗ ಮುಂದೆ ಹೇಳ ತೊಡಗಿದ:

"ಹೆಣ್ಣು ಗೊತ್ತುಪಡಿಸುವದಕ್ಕೆ ಪರವಾ ಇಲ್ಲ, ಆದರೆ ನನ್ನದೊಂದು ವಿಜ್ಞಾಪನೆ ಕೇಳಿಕೊಳ್ಳುವಿರಾ?"

"ಅಗತ್ಯವಾಗಿ ಮಗೂ."

ನೀವು ನನ್ನನ್ನು ದತ್ತ ತೆಗೆದುಕೊಂಡಿರಿ. ಬೀದಿಯಲ್ಲಿ ಬಿದ್ದವನನ್ನು