ಈ ಪುಟವನ್ನು ಪ್ರಕಟಿಸಲಾಗಿದೆ

ಮತಾ೦ತರ

೬೭


"ದೀಪದ ಕೆಳಗೆ ಕತ್ತಲು" ಈ ಹಳೆಯ ನಾಣ್ಣುಡಿ ವಿಜ್ಞಾನ ಯುಗದಲ್ಲಿ ಹಳೆದಾಗಿ ಹೋಯಿತು. ಅದರ ನಿತ್ಯನೂತನತೆ ಧ್ವಂಸವಾಯಿತು.

ಹಾಗಾದರೆ ದೇಶಪಾಂಡೆಯ ಅಪರಾಧ ……? ಆ ಅಪರಾಧವೂ ಈ ದ್ವಿಭಾರ್ಯಾ ಪ್ರತಿಬಂಧಕ ಕಾಯಿದೆಯಲ್ಲಿ ಕ್ಷಮ್ಯವಾಗಬಲ್ಲದು ಆದರೆ...?

ನನ್ನ “ಆದರೆ” ಶಬ್ದ ಮುಗಿಯುವ ಮೊದಲೇ ನನ್ನ ಹೆಂಡತಿ ನನ್ನ ಎದುರು ಬಂದು ನಿಂತಳು. ಅವಳು ಬಂದು ನಿಂತ ರೀತಿಯನ್ನು ನೋಡಿದರೆ "ಹೆಂಡತಿ ! ಹೆಂಡತಿ ” ಎಂದು ಹಂಬಲಿಸುವ ಬ್ರಹ್ಮಚಾರಿಗಳ ಬಳಗಕ್ಕೆ ನಾನೂ ಒಬ್ಬನು ಸೇರಿದ್ದರೆ ಒಳಿತಿತ್ತು ಎಂದೆನಿಸಿತು.

"Victories Garland is better than victory" ಎಂಬ ಆಂಗ್ಲನುಡಿ ನೆನಪಿಗೆ ಬಂತು. "ಆದರೆ" ಶಬ್ದ ಮತ್ತೆ ಮುಂದೆ ನಿಂತಿತು. "ಖುರ್ಚಿಯ ಮೇಲೆ ಕೂಡು" ಎಂದು ಹೇಳಿದೆ. ಅವಳು ಕೂತಳೇನೋ ನಿಜ. ಕೂಡ್ರುವಾಗ ಶಾಂತಳಾಗಿಯೇ ಇದ್ದಳು. ಆದರೆ ಆ ಶಾಂತಿ ಶಾಶ್ವತ ಶಾಂತಿಯ ಸಂಜ್ಞೆಯಾಗಿರಲಿಲ್ಲ. ಬಿರುಗಾಳಿಯ ಪೂರ್ವದ ಭಯಾನಕ ಶಾಂತಿ……!

....ಒಮ್ಮೆಲೆ ಜ್ವಾಲಾಮುಖಿಯ ಸ್ಫೋಟವಾದಂತಾಯಿತು. ಗಂಡುಸರ ಜಾತಿನ ಇಷ್ಟು ಹರಾಮಖೋರ. ನಾಯಿಗಳನ್ನು ಎಷ್ಟು ಕಟ್ಟಿಹಾಕಿದರೇನು, ಮತ್ತೆ ಹೊರಗೆ ಅಡ್ಡಾಡೋದು. ನನ್ನ ಹೆಂಡತಿ ಒಂದುಸಲ ಇಡೀ ಪುರುಷ ಜಾತಿಯ ಉದ್ಧಾರ ಮಾಡಿದಳು. ನನಗೆ ತುಂಬಾ ಸಿಟ್ಟು ಬಂದಿತು. ಆದರೆ ಕೋರ್ಟಿನಲ್ಲಿ ಗಳಿಸಿದ ಕಹಿ ಅನುಭವ ನನ್ನನ್ನು ನಿಶ್ಯಕ್ತನನ್ನಾಗಿ ಮಾಡಿಬಿಟ್ಟಿತ್ತು. ಬರೀ ಸಿಟ್ಟಿನಿಂದೇನಾಗಬೇಕು. ಆದರೆ ಕೋರ್ಟಿನಲ್ಲಿಯ ತೀರ್ಮಾನಕ್ಕೆ ಕಾರ್ಯಕಾರಿ ಮಂಡಳದ ಸಂಬಂಧ ತಪ್ಪಿದರೆ ಆ ತೀರ್ಮಾನ ಕೃತಿಯಲ್ಲಿಳಿಯದು.

ನನ್ನ ಶಕ್ತಿ ಇಲ್ಲದ ಸಿಟ್ಟು.... ಬಿಳಿ ಪತಾಕೆಯನ್ನೇರಿಸಿದ ಪಡೆಯ ಸೇನಾಧಿಪತಿಯಂತೆ ಸೌಮ್ಯದಿಂದಲೇ ಕೇಳಿದೆ. "ಈ ಗಂಡಸರು ಯಾವ ಸ್ತ್ರೀ ರಾಜ್ಯದ ಮೇಲೆ ದಾಳಿ ಇಕ್ಕಿದ್ದಾರೆ?”

"ಇಲ್ಲಿ ನೋಡಿ" ಎಂದು ಸಿಟ್ಟಿನಿಂದಲೇ ಒಂದು ಫೋಸ್ಟಪಾಕೀಟನ್ನು ನನ್ನ ಮೈ ಮೇಲೆ ಎಸೆದಳು. ನನ್ನ ಹೆಂಡತಿಯ ಸಿಟ್ಟಿನ ಮುಖ್ಯ ಕಾರಣ ಈ