ಈ ಪುಟವನ್ನು ಪರಿಶೀಲಿಸಲಾಗಿದೆ

82

ನಿರಂಜನ: ಕೆಲವು ಸಣ್ಣ ಕಥೆಗಳು

ಆರತಿ ಬೆಳಗಿದ ತಾಯಿಗಂಟಿಕೊಂಡು ತಂದೆಯ ಕಡೆ ಬೆರಗುನೋಟ ಬೀರುತ್ತ, ಮೋನ್ಯಾ ಅ೦ದ;

“ನಾನೂ ಬತ್ತಿನಿ, ಅಪ್ಪಾಜಿ..”
ಆಮೇಕೆ, ಆಮೇಕೆ!

-ಎನ್ನುತ್ತ ಮಹಾರಾಜ ಹೊರಕ್ಕೆ ತೇಲಿದ ಸುಂಟರಗಾಳಿಯಾಗಿ, ಅಲ್ಲಿನ ಕಲರವದಲ್ಲಿ ಬೆರೆಯಲು, ರಣಾಂಗಣದಲ್ಲಿ ಮೆರೆಯಲು, ಅಸಮಾನ ಖಡ್ಗದಿಂದ ವೈರಿ ಶಿರಸ್ಸುಗಳನ್ನು ಕಡಿಯಲು.

“ಜಯ ಚಾಮುಂಡೇಶ್ವರೀ!”
_"ಜಯ ಮಹಿಷಾಸುರಮರ್ದಿನೀ!"

ಗುಡಾರದೊಳಗೆ ಮೋನಾ ತಾಯಿಯನ್ನು ಕಾಡಿದ: “ನನಗೊಂದು ಕತ್ತಿ ಕೊಡು, ಕೊಡಮಾ ಒಂದು ಕತ್ತಿ ...”

****

"ಧೋಂಡಿಯಾ...

ಧೋಂಡಿಯಾ ವಾಘ್...

ಚನ್ನಗಿರಿಯ ಮಣ್ಣಿನಲ್ಲಿ ಹುಟ್ಟಿದ ಆ ಹುಲಿಯ ಆರ್ಭಟಕ್ಕೆ ಪರಕೀಯರ ಪಡೆ ಗದಗದ ನಡುಗುತ್ತಿತ್ತು.

ಆ ರಣಧೀರನ ದಂಡನ್ನು ಬೆನ್ನಟ್ಟೀ ಬೆನ್ನಟ್ಟೀ, ಅಲೆದೂ ಅಲೆದೂ ಬಳಲೀ ಬಳಲೀ ಹಣ್ಣಾದ ಆ೦ಗ್ಲರ ಶ್ರೇಷ್ಠ ಸೇನಾನಿಗಳಲ್ಲೊಬ್ಬ-ವೆಲ್ಲೆಸ್ಲಿ-ಹತಾಶನಾಗಿ ಉದ್ಗರಿಸಿದ್ದ:

“ಈ ಧೋಂಡಿಯಾನನ್ನು ಯಾವಾಗ ಹಿಡಿಯುವೆನೋ ದೇವರಿಗೇ ಗೊತ್ತು!”

ಅಂತೂ ಕೊನೆಗೊಮ್ಮೆ ದೇವರಿಗೆ ಅರಿತಿದ್ದ ಘಳಿಗೆ ಸವಿನೂಪಿಸಿತ್ತು.

****

ಸುತ್ತುವರಿಯಲ್ಪಟ್ಟಿ ಐದು ಸಾವಿರ ಅಶ್ವಾರೋಹಿಗಳ ದಂಡಿಗೂ ಇಮ್ಮಡಿ ಬಲದ ವೈರಿ ಪಡೆಗಳಿಗೂ ಹೊಯ್ ಕಯ್.

“ಫಯರ್! ಫಯರ್!”
“ಹಿಮ್ಮೆಟ್ಟಬೇಡಿ! ಹಾರಿಸಿಗುಂಡು! ತುಂಡರಿಸಿ! ಕತ್ತರಿಸಿ!”

ವ್ಯೂಯ ರಚನೆಗಾಗಲೀ ಅತ್ತಿತ್ತ ಸರಿಯುವುದಕ್ಕಾಗಲೀ ಅವಕಾಶವಿಲ್ಲದ ತಾಣ.

ಅಭಿಮನ್ಯು ಮಹಾನ್‍ವೀರ.