ಈ ಪುಟವನ್ನು ಪರಿಶೀಲಿಸಲಾಗಿದೆ

ತಿರುಕಣ್ಣನ ಮತದಾನ

37

“ನಿಮ್ಮ ಕೇರೀಲಿ ಇನ್ನೂ ರೈವತ್ತು ಓಟುಗಳಿವೆ. ಅಷ್ಟಕ್ಕೂ ಯಜ
ಮಾನರಿಗೇ ಕೊಡಿಸು. ಎಲೆಕ್ಷನ್ ಆದ್ಮಲೆ ನೂರು ರೂಪಾಯಿ ಕೊಡ್ತಾರೆ.”
ಅಪನಂಬಿಕೆಯ ಕಣ್ಣಿನಿಂದ ತಿರುಕಣ್ಣನ್ ನೋಡಿದ. ಅವನು ಚೇತರಿಸ
ಕೊಂಡು “ನಿಜವಾ ಬುದ್ದಿ?” ಎಂದು ಕೇಳಬೇಕು ಎನ್ನುವುದರೊಳಗೇ ಕಾರು
ಹೊರಟು ಹೋಗಿತ್ತು.
ನೂರು ಯಾಕೆ, ಬೇರೆಯವರಿಗೆ ಗೊತ್ತಾದರೆ ಐವತ್ತಕ್ಕೂ ಆ ಕೆಲಸ
ಒಪ್ಪಬಹುದು, ಎಂದು ತಿರುಕಣ್ಣನ್ ಲೆಕ್ಕಾಚಾರ ಹಾಕಿದ. ಸ್ವಲ್ಪ ಅಡ್ವಾನ್ಸಾ
ದರೂ ತಗೊಂಡಿದ್ದರೆ_ಎಂದು ಹಲುಬಿದ. ಆ ಯಜಮಾನರ ಮನೆ ಎಲ್ಲಿದೆ
ಯೆಂತಲಾದರೂ ತಿಳಕೊಂಡಿದ್ದರೆ?
****
ಮತ್ತೆ ನಿದ್ದೆ ಬರಲಿಲ್ಲ. ಮಗಳನ್ನೆಬ್ಬಿಸಿ ಮಂಡಿ ಸಾಹುಕಾರರ ಮನೆಗೆ,
ಮುಸುರೆ ತಿಕ್ಕಲು ಕಳುಹಿಸಿಕೊಟ್ಟ. ಹಿಂದೆ ಆರೋಗ್ಯಮ್ಮ ಮಾಡುತ್ತಿದ್ದ
ಕೆಲಸ ಅದು. ತಿರುಕಣ್ಣನ ಪಾಲಿನ ಅದೃಷ್ಟದ ಬಾಗಿಲು ಪೂರ್ಣ ಮುಚ್ಚಿರ
ಲಿಲ್ಲ, ಎಂತಲೇ ತಾಯಿಯ ಕೆಲಸ ಮಗಳಿಗೆ ದೊರಕಿತ್ತು. ಒಪ್ಪೊತ್ತಿನ ಊಟ
ಮತ್ತು ಎರಡು ರೂಪಾಯಿ ಸಂಬಳ. ಆ ಎರಡು ರೂಪಾಯಿ ಹುಳಿ ಹೆಂಡದ
ಬಾಬತ್ತು. ಸ್ವಂತ ಹೊಟ್ಟೆಗೆ ತಿನ್ನಬೇಕಾದರೆ ತಿರುಕಣ್ಣನ್ ದುಡಿದು ತರ
ಬೇಕಾಗಿತ್ತು. ಸಾಯುವದಕ್ಕೆ ಮುಂಚೆ ಆರೋಗ್ಯಮ್ಮ ಗಂಡನಿಗೊಂದು
ಕೊಡಲಿ ತೆಗೆಸಿಕೊಟ್ಟಿದ್ದಳು. ನಡು ವಯಸ್ಸಿನಲ್ಲಿ ಸೌದೆ ಒಡೆಯುವುದನ್ನು
ಅವನು ಕಲಿತಿದ್ದ. ಆದರೆ ಅವನದು ಸಹಿಸಲಾಗದ ಕೆಮ್ಮು; ದೇಹವೂ ಬಡಕ
ಲಾಗಿತ್ತು. ಎರಡು ಮಣ ಒಡೆಯುವುದರೊಳಗೆ ಸಾಕೋಸಾಕು ಎನಿಸುತ್ತಿತ್ತು.
ಈ ದಿನ ಕೊಡಲಿಯನ್ನು ಹೆಗಲಿಗೇರಿಸಿಕೊಂಡು ತಿರುಕಣ್ಣ ಹೊರಟಾಗ
ಬೆಳಗ್ಗೆ ನಡೆದಿದ್ದ ವಿಚಿತ್ರ ಘಟನೆಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿದ್ದ.
ಅವನ ಮೊದಲ ಹುಡುಗ ಆರು ವರ್ಷಗಳ ಹಿಂದೆಯೇ ಮನೆ ಬಿಟ್ಟು
ಓಡಿಹೋಗಿದ್ದ. ಅವನೂ ಇದ್ದಿದ್ದರೆ? ಅವನಿಗೂ ಒಂದು ಓಟು ಇರುತ್ತಿತ್ತೋ
ಏನೋ. ಆರೋಗ್ಯಮ್ಮನೂ ಅಷ್ಟೇ. ಇನ್ನೂ ಒಂದಷ್ಟು ದಿನ ಬದುಕಿದ್ದರೆ?
ಅಂತೂ ತನ್ನ ಅದೃಷ್ಟ ಖುಲಾಯಿಸಿತು...ಆರೋಗ್ಯಮ್ಮ ಇದ್ದಿದ್ದರೆ ಅವಳೆ
ದುರು ಜಂಭ ತೋರಿಸಬಹುದಾಗಿತ್ತು.
ಈ ವಿಷಯ ಯಾರಿಗೂ ಹೇಳಬಾರದು, ಎಂದುಕೊಂಡ ತಿರುಕಣ್ಣನ್,
ಹೇಳಿದರೆ ಸಿಗುವ ಹಣಕ್ಕೆ ಎಲ್ಲಿ ಕಲ್ಲು ಬೀಳುವುದೋ ಎಂಬ ಭಯ, ಆದರೆ
ಸಂಜೆ, ಕೇರಿಯ ಕೆಲಸಗಾರರು ವಾಪಸು ಬಂದಾಗ, ಮನೆ ಮುದುಕರೋ