ಈ ಪುಟವನ್ನು ಪರಿಶೀಲಿಸಲಾಗಿದೆ

ಒಂದೇ ನಾಣ್ಯದ ಎರಡು ಮೈ

51

ಇಲ್ಲಿರಾನೆ. ನಾಳೆ ಗೋವಾದಲ್ಲಿ, ನಾಡದ್ದು ಲೋಂಡಾದಲ್ಲಿ. ದೊಡ್ಡ ದೊಡ್ಡ ಅಧಿಕಾರಿಗಳು, ಸಾಹುಕಾರ್‍ರು ಎಲ್ರಿಗೂ ಬೇಕಾದವನೇ. ಏನ್ಹೇಳ್ತೀರಾ ಅವನ ದರ್ಬಾರು...! ಬಡ ಕನಿಷ್ಠ ಬಿಲ್ಲನಿಗೆ ನನಗ್ಯಾಕ್ಬೇಕು? ಮಾತ್ಸ ಹೇಳ್ದೆ ಅಷ್ಟೆ... ಯಾರಿಗೂ ಹೇಳ್ಬೇಡಿಪ್ಪ ಸದ್ಯಃ....ಹೂಂ... ನಿಮಗೆ ಯಾರೂ ಜಾವಿನು ನಿಲ್ಲೋದಿಲ್ವೊ?"

ಉತ್ತರ ಕೊಡಲಾಗದೆ ಮುಗುಳು ನಕ್ಕೆ ನಾನು...
.........................
ಇದು ಹಲವು ವರ್ಷಗಳ ಹಿಂದಿನ ಮಾತು.

ಪುನಃ ಮೊನ್ನೆಯೊಮ್ಮೆ ಕಾರವಾರಕ್ಕೆ ಹೋಗಿದ್ದೆ 'ಪರಮ ಸ್ಟೇಹಿತರಿಲ್ಲದೆ,? ನಾನೊಬ್ಬನೇ, ಸ್ವತಂತ್ರ ಪ್ರಜೆಯಾಗಿ. ಅದೇ ಹಾದಿ. ಅದೇ ಬಿದಿರು ಮೆಳೆಯ ಕಮಾನು ಉದ್ದಕ್ಕೂ. ದೂರದಿಂದ ನೀಲಿಯಾಗಿ, ಹತ್ತಿರ ಕಪ್ಪಾಗಿ, ತೋರುವ ಹೆಸಿರು ಗಿಡಮರಗಳ ದಟ್ಟಡವಿ. ಹಿಂದಿನ ಕಿರುತೊರೆ, ಉಪನದಿ, ಕೆರೆಗಳೇ.

ಸರಕಾರಿ ಸಾರಿಗೆಯ ಆ ದೊಡ್ಡ ವಾಹನದಲ್ಲಿ ಮಾತುಕತೆಯಾಗುತ್ತಿತ್ತು.

“ಹುಬ್ಬಳ್ಳಿ-ಕಾರವಾರ ರಸ್ತೆಗೆ ಡಾಮರು ಹಾಕ್ತಾರಂತ್ರಿ."

"ಯಾರೋ ಅಂದ್ರು-ರೈಲ್ವೆ ಹಾಕಿಸೋ ಯೋಜನೇನೂ ಅದೆ ಅಂತೆ."

ನಾಳೆಯ ಕನಸು. ಸಾಧ್ಯತೆಯ ಮಾತು. ರಾಷ್ಟ್ರ ಕಟ್ಟುವ ಯೋಚನೆ. ಯೋಜನೆಗಳ ಯೋಚನೆ. ಕ್ಷಣಕಾಲವಾದರೂ ಕಚಗುಳಿ ಇಡುತ್ತಿದ್ದ ತಣುಪು ಗಾಳಿಯಷ್ಟೆ ಹಿತಕರವಾದ ಮಾತು.

ಆದಕ್ಕೆ ಅದನ್ನು ಮೀರಿಸುವ ಹಾಗೆ ಆರಂಭವಾಯಿತೊಂದು ಸಂಭಾಷಣೆ- ಗೋವಾಕ್ಕೆ ಸಂಬಂಧಿಸಿ. ಇಬ್ಬರ ಮಾತಿಗೆ ಎಲ್ಲರೂ ಧ್ವನಿ ಕೂಡಿಸುವವರೇ. ಕಾತರ__ಉದ್ವೇಗ__ಶಂಕೆ__ಕನಿಕರ...

“ಸ್ವಾತಂತ್ರ್ಯದ ದಿನ ಹತ್ತು ಸಾವಿರ ಜನ ಹೋಗ್ತಾರಂತ್ರೀ."

“ಅವರು ಕರುಣೆ ಇಲ್ದೋರು ಕಣ್ರೀ. ನಾಗರಿಕ ಭಾಷೆ ಅವರಿಗೆ ಎಲ್ಲಿ ಅರ್ಥವಾದೀತು?”

“ಏನೇ ಹೇಳಿ ಗೋವಾ ಸ್ವತಂತ್ರವಾಗೋದು ಸುಲಭವಲ್ಲ."