ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದರ ತುದಿಯಲ್ಲಿ ಶುಭ್ರವಾದ ಬಿಳಿಯ ಬಟ್ಟೆ ಇತ್ತು, ಅದನ್ನು ಅಲ್ಲಿಯೆ ಎಣ್ಣೆಯಲ್ಲಿ ತೋಯಿಸಿದರು. ಕಲ್ಯಾಣಸಾಮಿ ತಾನೇ ಆ ಪಂಜಿಗೆ ಸೊಡರು ಮುಟ್ಟಿಸಿದ.

ಅದು ಪ್ರಕಾಶಮಾನವಾಗಿ ಉರಿಯತೊಡಗಿದಂತೆ ಅತನೆಂದ;

"ಇದು ಸ್ವಾತಂತ್ರ ದೀವಟಿಗೆ, ನಮ್ಮ ಗುರಿ ಸಾಧಿಸುವ ವರೆಗೂ ಈ ದೀವಟಿಗೆ ಉರಿಯುತ್ತಲೇ ಇರಬೇಕು!”

ಮುನ್ನುಗ್ಗಿದ ಜನ, ಆ ದೀವಟಿಗೆಯನ್ನು ನೋಡಿದರು. ಅದರ ಬೆಳಕಿನಲ್ಲಿ, ಪ್ರತಿವಿಧಿಗೆಂದು ಕಲಾಣಸ್ವಾಮಿ ಹಿಡಿದಿದ್ದ ಖಡ್ಡ ಚಕಚಕಿಸಿತು.