ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಯ ನಿರೂಪಣ ಕ್ರಮವನ್ನನುಸರಿಸಿ ಸಾಧ್ಯವಾದ ಮಟ್ಟಿಗೂ ಅವನ ಮಾತುಗಳನ್ನೇ ಬಳಸಿಕೊಂಡು ಈಗಿನ ರೂಪದಲ್ಲಿ ಈಗಿನವರಿಗೆ ಅರ್ಥ ವಾಗುವಂತೆ ಬರೆಯುವುದು ನನ್ನ ರೀತಿ. ಮುಖ್ಯವಾಗಿ ವಿದ್ಯಾರ್ಥಿಗಳಿಗೂ, ಜೀವನಕ್ಕಾಗಿ ಹಲವು ವೃತ್ತಿಗಳಲ್ಲಿ ತೊಡಗಿ ಸಾಹಿತ್ಯಾಭ್ಯಾಸಕ್ಕೆ ಹೆಚ್ಚು ಬಿಡುವಿಲ್ಲದಿರುವ ಸಾಮಾನ್ಯ ವಿದ್ಯಾನ ನರ್ತ ಈ ಪ್ರಯತ್ನದಿಂದ ಸಹಾಯವಾಗಬಹುದೆಂದು ನಂಬಿದ್ದೇನೆ.

ಸರಳತೆಗಾಗಿ ಇಲ್ಲಿ ಉದಾಹರಿಸಿರುವ ಪದ್ಯಗಳಲ್ಲಿ 'ಅ'ಕಾರ * ಆ ಕಾರಗಳನ್ನು ಉಪಯೋಗಿಸಿಲ್ಲ. ಅದಕ್ಕೆ ಬದಲಾಗಿ 1 ರ 'ಕಾರ - ಛ 'ಕಾರ ಗಳನ್ನೆ ಬಳಸಿದೆ.


ಈ ಕೆಲಸ ಮಾಡಬೇಕೆಂದು ನಾಲೈದು ವರ್ಷಗಳಿಂದಲೂ ಆಲೋಚಿಸುತ್ತಿದ್ದೆನಾದ ಇಬ್ಬರು ಮಾನ್ಯ ಮಿತ್ರರ ಪ್ರೋತ್ಸಾಹದಿಂದ ಈಗ ಇದು ಕಾರ್ಯರೂಪಕ್ಕೆ ಬಂತು. ಶ್ರೀ ಎಂ. ವಿ. ಸೀತಾರಾಮಯ್ಯ ಎಂ.ಎ., ಆವರು ಒಳ್ಳೆಯ ಚಿತ್ರ ಬರೆದುಕೊಟ್ಟು ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ. ಇವರಿಗೆ ವಂದನೆಗಳು.

ಬೆಂಗಳೂರು
೨೪-೩-೧೯೪೫

ಎಲ್. ಗುಂಡಪ್ಪ