ಈ ಪುಟವನ್ನು ಪ್ರಕಟಿಸಲಾಗಿದೆ

ಕಥಾ ಸಂಗ್ರಹ

547

ಅರಸನ ಕುದುರೆ ಲಾಯದಲ್ಲಿಯೇ ಮುಪ್ಪಾಯಿತು.
ಅಲ್ಪ ಕಾರ್ಯಕ್ಕೆ ಅರಮನೆಗೆ ಹೋಗ ಬಾರದು.
ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧ ರಾತ್ರೆಯಲ್ಲಿ ಕೊಡೇ ಹಿಡಿಸಿಕೊಂಡ.
ಅಲ್ಪರ ಸಂಗ ಅಭಿಮಾನ ಭಂಗ.
ಅಲ್ಲಾಡುವ ಹಲ್ಲಿನ ಮೇಲೆ ಹಲಿಗೇ ಕಲ್ಲು ಬಿದ್ದಂತೆ.
ಅವನ ಮಾತು ಕೆಸರಿನಲ್ಲಿ ನೆಟ್ಟ ಕಂಭದ ಹಾಗೆ.
ಅವನ ಸಾಕ್ಷಿ ಅಡ್ಡ ಗೋಡೆಯ ಮೇಗಣ ದೀಪದ ಹಾಗೆ.
ಅಶನ ವಸನ ಶಿಕ್ಕಿದ ಮೇಲೆ ವ್ಯಸನವ್ಯಾಕೆ?
ಅಳಿದ ಊರಿಗೆ ಉಳಿದವನೇ ಗೌಡ.
ಆಕಳು ಕಪ್ಪಾದರೆ ಹಾಲು ಕಪ್ಪೇ?
ಆಗದ ಕಾರ್ಯಕ್ಕೆ ಆಶೆ ಪಟ್ಟರೆ, ಸಾಗುವದಿಲ್ಲ ಹೋಗುವದಿಲ್ಲ.
ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ.
ಆನೆಗೆ ಗುಂಗುರು ಕಾಡಿದ ಹಾಗೆ.
ಆನೇ ಕಂಡು ಶ್ವಾನ ಬೋಗುಳಿದ ಹಾಗೆ
ಆನೇ ಕೈಲಿ ಕಬ್ಬು ಕೊಟ್ಟ ಹಾಗೆ.
ಆನೇ ಮೇಲೆ ಹೋಗುವವನನ್ನು ಸುಣ್ಣಾ ಕೇಳಿದ ಹಾಗೆ
ಆರಾಳು ಮೂರು ಘಾಜು.
ಆಶೆಗೆ ನಾಶವಿಲ್ಲ.
ಇಡೀ ಮುಳುಗಿದ ಮೇಲೆ ಛಳಿ ಉಂಟೇ?
ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ.
ಇಲಿ ಬೆಕ್ಕಿಗೆ ಸಾಕ್ಷಿ.
ಇಲಿಗೆ ಹೆದರಿ, ಹುಲಿಯ ಬಾಯಿಯಲ್ಲಿ ಬಿದ್ದ.
ಇವನವನಿಗೆ ಎಣ್ಣೆ ಶೀಗೆ.
ಈಚಲು ಮರದ ಕೆಳಗೆ ಮಜ್ಜಿಗೇ ಕುಡಿದರೆ, ನಾಚಿಕೆ ಗೇಡಾಗದೇ?
ಉಂಟು ಮಾಡಿದ ದೇವರು ಊಟವ ಕೊಡಲಾರನೋ?
ಉಂಡದ್ದು ಉಂಡ ಹಾಗೆ ಹೋದರೆ, ವೈದೃನ ಹಂಗೇನು?
ಉಂಬೋಕ್ಕೆ ಉಡೋಕ್ಕೆ ಅಣ್ಣಪ್ಪ, ಕೆಲಸಕ್ಕೆ ಮಾತ್ರ ಡೊಣ್ಣಪ್ಪ.
ಊರೆಲ್ಲಾ ಸೂರೆ ಆದ ಮೇಲೆ ಬಾಗಲು ಹಾಕಿದರು.
ಎಣ್ಣೆ ಬರುವಾಗ ಗಾಣ ಮುರಿಯಿತು.