ಈ ಪುಟವನ್ನು ಪ್ರಕಟಿಸಲಾಗಿದೆ

ಕಥಾ ಸಂಗ್ರಹ

519

ಕಾಡಿನಲ್ಲಿ ತಿರುಗಿ, ಕಟ್ಟಿಗೆ ಇಲ್ಲ ಅಂದ ಹಾಗೆ.
ಕಿಚ್ಚೆದ್ದಾಗ ಭಾವಿ ತೋಡಿದ.
ಕಿಟಕಿಯಿಂದ ನುಸುಳುವವ ಹೆಬ್ಬಾಗಿಲಿಂದ ಬಾರನೇ?
ಕಿಡಿಯಿಂದ ಕಾಡ ಸುಡ ಬಹುದು.
ಕೀಟ ಸಣ್ಣದಾದರೂ ಕಾಟ ಬಹಳ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಕುರುಬನ ಮುಂದೇ ತೋಳ ಕಾದ ಹಾಗೆ.
ಕುಲವನ್ನು ನಾಲಿಗೆ ಹೇಳುವದು.
ಕಾಸು ಕಾಸ ಬಾಳದು, ಜೋಗುಳ ಮುಗಿಲ ಮುಟ್ಟಿತು?
ಕೂಳ ಚೆಲ್ಲಿದ ಕಡೆ ಸಾವಿರ ಕಾಗೆ.
ಕೆರದ ಅಳತೆಗೆ ಕಾಲು ಕೊಯಿಸಿದ ಹಾಗೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ.
ಕೊಯಿದ ಕಾಲು ನಾಯಿ ತಿಂದರೇನು ನರಿ ತಿಂದರೇನು?
ಕೋಟಿ ವಿದ್ಯೆಯೂ ಕೂಳಿಗೋಸ್ಕರವೇ?
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
ಗಂಗೆಗೆ ಹೋಗಿ, ತೆಂಗಿನ ಓಟೆ ತಂದ ಹಾಗೆ.
ಗಂಡ ಹೆಂಡರ ಜಗಳದಲ್ಲಿ ಕೂಸು ನಾಶವಾಯಿತು?
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ?
ಗುರುವಿನಂತೆ ಶಿಷ್ಯ, ತಂದೆಯಂತೆ ಮಗ.
ಗೇಣು ಬಿಟ್ಟು ಅಗಳು ದಾಟಿದ ಹಾಗೆ.
ಘಾಳಿ ಬಂದಾಗಲೇ ತೂರಿ ಕೊಳ್ಳ ಬೇಕು.
ಚರ್‍ಮ ತೊಳೆದರೆ ಕರ್‍ಮ ಹೋದೀತೇ?
ಚಿಂತೆಯೇ ಮುಪ್ಪು, ಸಂತೋಷವೇ ಯೌವನ.
ಚಿನ್ನದ ಚೂರಿ ಎಂದು ಕುತ್ತಿಗೆ ಕೊಯಿಸಿ ಕೊಳ್ಳ ಬಹುದೇ?
ಚೇಳಿನ ಮಂತ್ರವನ್ನರಿಯದವ ಹಾವಿನ ಹುತ್ತಕ್ಕೆ ಕೈ ಇಕ್ಕಿದ ಹಾಗೆ.
ಜಗದೀಶ್ಚರನ ದಯೆ ಒಂದಿದ್ದರೆ, ಜಗತ್ತೆಲ್ಲಾ ನನ್ನದು.
ಜನ ಮರುಳೋ? ಜಾತ್ರೆ ಮರುಳೋ?
ಜೋಗಿಗೆ ಜೋಗಿ ತಬ್ಬಿ ಕೊಂಡರೆ, ಮೈಯೆಲ್ಲಾ ಬೂದಿ.
ಜ್ಞಾನವಂತನಿಗೆ ಸ್ನಾನವೇಕೆ?