ಈ ಪುಟವನ್ನು ಪ್ರಕಟಿಸಲಾಗಿದೆ

ಕಥಾ ಸಂಗ್ರಹ

551

ದೇವರು ಕೊಟ್ಟರೂ, ಪೂಜಾರಿ ಕೊಡ.
ದೇಶಾಂತರ ಹೋದರೆ, ದೈವ ಬಿಟ್ಟೀತೇ?
ದೊಣ್ಣೆ ಹಿಂಡಿದರೆ, ಎಣ್ಣೆ ಬೀಳುವದೇ?
ದೋತ್ರ ದೊಡ್ಡದಾದರೆ ಗೋತ್ರ ದೊಡ್ಡದೇ?
ದೋಷಾ ಮಾಡುವವನಿಗೆ ರೋಷ ಬಹಳ.
ದ್ರಾಕ್ಷಿ ಶೀ ಎಂದು ಬಳ್ಳಿ ಸಹ ತಿನ್ನ ಬಾರದು.
ಧರ್ಮಕ್ಕೆ ಕೊಟ್ಟ ಎಮ್ಮೇ ಹಲ್ಲು ಹಿಡಿದು ನೋಡಿದ.
ಧರ್ಮಕ್ಕೆ ಕೊಟ್ಟ ದಟ್ಟೀ ಹಿತ್ತಲಿಗೆ ಹೋಗಿ ಮೊಳಾ ಹಾಕಿ ನೋಡಿದ.
ಧೂಪಾ ಹಾಕಿದರೆ ಪಾಪ ಹೋದೀತೇ?
ಧೈರ್ಯ ಉಂಟಾದವನಿಗೆ ದೈವ ಸಹಾಯ ಉಂಟು.
ದೊರೆಯಿಂದ ಆಗುವಂಥಾದ್ದು ನರಿಯಿಂದ ಆದೀತೇ?
ಧೊರೆ ಹೇಳಿದನೆಂದರೆ ಮರದ ಕಾಯಿ ಬಿದ್ದೀತೇ?
ನಡುಗುವವನ ಮೇಲೆ ಸತ್ತ ಹಾವು ಬಿದ್ದ ಹಾಗೆ.
ನಯವಿದ್ದಲ್ಲಿ ಭಯವಿಲ್ಲ.
ನಯ ಶಾಲಿಯಾದವ ಜಯ ಶಾಲಿಯಾದಾನು.
ನರಕಕ್ಕೆ ನವ ದ್ವಾರ, ನಾಕಕ್ಕೆ ಒಂದೇ ದ್ವಾರ.
ನರಿಯ ಹೊಟ್ಟೇ ಒಳಗೆ ಸಿಂಹದ ಮರಿ ಹುಟ್ಟೀತೇ?
ನರ್ಮದೆಗೆ ಹೋದರೆ ಕರ್ಮ ತಪ್ಪೀತೇ?
ನವಿಲು ಕುಣಿಯೋದ ನೋಡಿ ಕೆಂಬೋತಿ ಪುಕ್ಕಾ ತೆರೆಯಿತು.
ನಷ್ಟ ಬಿದ್ದರೂ ಭ್ರಷ್ಟನಾಗ ಬಾರದು.
ನಾಕದವರಿಗೆ ಲೋಕದ ಭಯವೇನು?
ನಾಕದ ಸಂತೋಷ ಸೂಕರಗೆ ತಿಳಿದೀತೇ?
ನಾಚಿಕೆ ಇಲ್ಲದವರ ಕಂಡರೆ ಆಕೆಗೆ ಹೋಗ ಬೇಕು.
ನಾಡಿಗೆ ಇಬ್ಬರು ಅರಸುಗಳಾದರೆ, ಕೇಡು ಬಪ್ಪುದು ತಪ್ಪದು.
ನಾಡೀ ನೋಡದೆ ಮದ್ದು ಕೊಟ್ಟರೆ, ಕಾಡು ರೋಗ ಬರೋದು.
ನಾಡೀ ಪರೀಕ್ಷೆ ಆಡು ಬಲ್ಲದೇ?
ನಾದವಿದ್ದರೆ ಘಂಟೆ, ವಾದವಿದ್ದರೆ ತಂಟೆ.
ನಾಮವಿದ್ದವಗೆ ಕಾಮ ಕಡಿಮೆಯೇ?
ನಾಯಿ ಕೂಗಿದರೆ ದೇವ ಲೋಕ ಹಾಳಾದೀತೇ?