ಈ ಪುಟವನ್ನು ಪ್ರಕಟಿಸಲಾಗಿದೆ
೧೪ | ನಾವೂ ಮನುಷ್ಯರು! ಸಾಯಂಕಾಲ ಮರತೇ ಹೋಯಿತು.ಮೆರವಣಿಗೆ ಒಟ್ಟಿಗೆ ಓಡಿದ್ದೇ. ಪುನಃ ತಂದುಬಿಟ್ಟೆ . (ರುಕ್ಕು ಬುಟ್ಟಿಯನ್ನು ಎತ್ತಿಟ್ಟು, ಮಗನನ್ನು ತಬ್ಬಿಕೊಳ್ಳು ವಳು.)
ರಾಮಣ್ಣ : ನಮ್ಮ ಹಸಿ ಬಂಗುಡೆ ಈ ದಿನ ಬಿಸಿಯಾದೀತು....
ಕಿಟ್ಟು : (ತಾಯಿಯಿಂದ ಬಿಡಿಸಿಕೊಂಡು)
ಹೇಯ್! ನನಗೊಂದು ಪದ್ಯ ಗೊತ್ತುಂಟು: ಕಾಸಿಗೆ ಎರಡು ಬೆಳ್ಳುಳ್ಳಿ ಬಂಗುಡೆಮಿನಿಗೆ ಸಂಗಡವಾದ ಅಂಗಡಿಯೊಳಗಿನ ಬೆಳ್ಳುಳ್ಳಿ
ರುಕ್ಕು : ಕಾಸಿಗೆ ಎರಡು ಬೆಳ್ಳುಳ್ಳಿ ಇಲ್ಲವೆ ಇಲ್ಲ. ಈಗ ಅದರ
ಅಗತ್ಯವೂ ಇಲ್ಲ.
ಈ ಪದ್ಯ ಹೇಳು ಕಿಟ್ಟ-ಮಿಟಿಂಗ್ನಲ್ಲಿ ಹೇಳಿದ್ರಲ್ಲ ಅದು.... (ತಾಯಿ ಮೊದಲು,ಮತ್ತೆ ತಾಯಿ ಮಗ ಜತೆಯಾಗಿ) ಊರಿನಲ್ಲಿ ದುಡಿವ ನಮಗೆ ಹೊಟ್ಟೆಗಿಲ್ಲದಾಗಿದೆ ಊರಹಂಚು ಮಾಡುವೆಮಗೆ ಮನೆಯೆ ಇಲ್ಲವಾಗಿದೆ ೧ ದುಡಿವುದೊಂದೆ ಗೊತ್ತು ನಮಗೆ, ನಮ್ಮ ಬೆವರ ಫಲವನು ದುಡಿಯದೆಯೇ ಕುಡಿದು ತಿಂಬ ಜಡಧನಿಕನು ಸುಲಿವನು ೨ ನಮ್ಮದು ಹೊಲ ನಮ್ಮದು ನೆಲ ನಮ್ಮದಿಡೀ ರಾಜ್ಯವು ನಮ್ಮದನ್ನು ನಾವು ಪಡೆಯೆ ನಮಗೆ ಯಾರ ವ್ಯಾಜ್ಯವು? ೩ ಊರ ಸುಲಿವ ಚೋರತನದ ಪಾರುಪತ್ಯ ಈಗಿದೆ ಊರಿಗಿಲ್ಲ ಸುಖವು ಇದನ್ನು ವೀರತನದಿ ನೀಗದೆ ೪