ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

107

ಮಹಾರಾಯ್ತಿ.."
"ಹೋಗಲಿ ಬಿಡಪ್ಪಾ.ಅಷ್ಟಕ್ಕೆಲ್ಲಾ -"
"ನೀವು ಹೋಗಿ ರಂಗಮ್ನೋರೇ. ಹೊರಗೆ ದುಡಿಯೋ ಗಂಡಸಿನ ಕಷ್ಟ
ಯಾರಿಗೆ ಗೊತ್ತಾಗುತ್ತೆ?"
ಆ ಸಂಭಾಷಣೆ ಕೇಳಿಸುತ್ತಿದ್ದ ಉಪಾಧ್ಯಾಯರು ಹೆಂಡತಿಯತ್ತ ನೋಡಿದರು.
ಓದುತ್ತಿದ್ದ ಇಬ್ಬರು ಹುಡುಗರೂ ಪರಸ್ಪರ ಮುಖ ನೋಡಿಕೊಂಡರು. ರಾಜಮ್ಮ
ಬಾಗಿಲ ಬಳಿ ನಿಂತರು.ಗುಂಡಣ್ಣ ಬಾಗಿಸಿದ ತಲೆಯನ್ನು ಎತ್ತಲಿಲ್ಲ.
ಒಳಗೆ ನೆಲದ ಮೇಲೆ ಮುದುರಿದ್ದ ಹೆಂಗಸು ಎದ್ದು ಕುಳಿತಳು .ಬಾಗಿಲು ತೆ
ರೆಯಿತು.ಕೈಯಲ್ಲಿ ಹಿಡಿದುಕೊಂಡು ರಂಗಸ್ವಾಮಿ ಹೊರಬಂದ.ಕತ್ತಲಲ್ಲಿ
ಆ ಮುಖ ಯಾರಿಗೂ ಕಾಣಿಸಲಿಲ್ಲ.
"ಯಾಕಪ್ಪಾ ಹೊರಟ್ಬಿಟ್ರಿ?"
-ಎಂದು ರಂಗಮ್ಮ ಕೇಳುತ್ತಿದ್ದಂತೆಯೇ ಆತ ಅಂಗಳ ದಾಟಿ ಬೀದಿಗಿಳಿದ.
ಒಳಗಿನಿಂದ ಹೆಂಗಸು ಗೋಳಾಡಿದಳು:
"ಊಟ ಮಾಡ್ದೇನೇ ಹೋಗ್ತಿದಾರೆ ರಂಗಮ್ನೋರೇ..."
ರಾಜಿ ಮಾಡಿಸಲೆಂದು ರಂಗಮ್ಮ ಕರೆದರು:
"ರಂಗಸ್ವಾಮಿ!"
ಗಂಡಸು ಕೇಳಲೇ ಇಲ್ಲ.'ಡ್ಯೂಟಿ'ಗಾಗಿ ಆತ ಹೊರಟು ಹೋದ.
ರಂಗಮ್ಮ ಸಂತೈಸುವ ನುಡಿಗಳನ್ನಾಡಿತ್ತಿದ್ದಂತೆಯೇ ಈಗ ರಂಗಸ್ವಾಮಿಯ
ಹೆಂಡತಿ,ಹೃದಯಪಾತ್ರೆಯನ್ನು ಆ ದಿನದ ಮಟ್ಟಿಗೆ ಬರಿದುಗೊಳಿಸಲೆಂದು ತುಂಬಿದ
ದುಃಖವನ್ನೆಲ್ಲ ಹೊರಕ್ಕೆ ಹರಿಸಿದಳು.
ಜಯರಾಮು ನಿಟ್ಟುಸಿರು ಬಿಟ್ಟು ಬೇಸರದ ಧ್ವನಿಯಲ್ಲಿ ಹೇಳಿದ:
"ನಡೀ ರಾಧಾ,ಮನೆಗೆ ಹೋಗೋಣ."
ಅವರು ಮಹಡಿಯ ಮೆಟ್ಟಿಲೇರುತ್ತಿದ್ದಂತೆಯೇ,ಶಂಕರನಾರಾಯಣಯ್ಯ
ಮತ್ತು ಚಂದ್ರಶೇಖರಯ್ಯ ಇಬ್ಬರೂ ವಠಾರಕ್ಕೆ ಬಂದರು.ಚಂದ್ರಶೇಖರಯ್ಯನ
ಕೈಯಲ್ಲಿ ಎಂದಿನಂತೆ ಕಡತಗಳನ್ನು ಹೊತ್ತ ಚರ್ಮದ ಚೀಲವಿತ್ತು.ಶಂಕರನಾರಾ
ಯಣಯ್ಯನ ಕೈಯಲ್ಲೊಂದು ಹಸುರೆಲೆಯ ಪೊಟ್ಟಣವಿತ್ತು-ನಿತ್ಯದಂತೆಯೇ.
"ಬರ್ತೀನಿ ಶಂಕರನಾರಾಯಣಯ್ಯ.ಗುಡ್ ನೈಟ್,"ಎಂದು ಚಂದ್ರಶೇಖ
ರಯ್ಯನೆಂದ.ಶಂಕರನಾರಾಯಣಯ್ಯ ಮಾರುತ್ತರವಿತ್ತ:
"ನಮಸ್ಕಾರ,ನಮಸ್ಕಾರ."
ಮಹಡಿಯನ್ನೇರತೊಡಗಿದ್ದ ಅಣ್ಣ ತಂಗಿಯರನ್ನು ಕಂಡು ಚಂದ್ರಶೇಖರಯ್ಯ
ಸ್ವಲ್ಪ ವೇಗವಾಗಿಯೇ ಹೆಜ್ಜೆ ಹಾಕಿದ.ಜಯರಾಮು ಮಾತನಾಡಿಸಲೇಬೇಕಾಯಿತು.
"ಇವತ್ತು ಬೇಗ್ನೆ ಬಂದ್ಬಿಟ್ಟಿದೀರಲ್ಲ ಚಂದ್ರಶೇಖರ್ರವರೆ?"