ಈ ಪುಟವನ್ನು ಪ್ರಕಟಿಸಲಾಗಿದೆ

120

ಸೇತುವೆ

ವಾಸ್ತವವಾಗಿ ಇಷ್ಟೆಲ್ಲವನ್ನೂ ರಾಧೆ ಚಂಪಾವತಿಗೆ ಹೇಳಿದ್ದಳು; ಚಂಪಾವತಿ
ಗಂಡನಿಗೆ ವರದಿಯೊಪ್ಪಿಸಿದ್ದಳು.
ನೇರವಾಗಿ ಮನೆಗೆ ಹೋಗುವ ಆತುರದಲ್ಲಿದ್ದರೂ, ಶಂಕರನಾರಾಯಣಯ್ಯ
ಒಂದು ಕ್ಷಣ ತಡೆದು ನಿಂತ.
"ಏನು, ಇಲ್ಲಿ ನಿಂತಿದ್ರಿ?" ಎಂದು ಆತ ಜಯರಾಮುವನ್ನು ಕೇಳಿದ. ಯಾಕೆ
ನಿಂತುದು ಎಂದು ಊಹಿಸುವಷ್ಟು ದಕ್ಷ ಮನಃಶಾಸ್ತ್ರಜ್ಞ ಶಂಕರನಾರಾಯಣಯ್ಯ
ನಾಗಿರಲಿಲ್ಲ. ಯಾಕೆಂಬುದನ್ನು ಜಯರಾಮುವೂ ಹೇಳುವಂತಿರಲಿಲ್ಲ.
"ಹೀಗೇ"
ಜಯರಾಮುವಿನ ದೃಷ್ಟಿ ಬೋರ್ಡುಗಳತ್ತ ಸರಿಯಿತು. ಶಂಕರನಾರಾಯಣ
ಯ್ಯನೂ ಅತ್ತ ನೋಡಿದ.
"ತುಂಬಾ ಚೆನ್ನಾಗಿವೆ. ನೀವು ಚೆನ್ನಾಗಿ ಬರೀತೀರಿ."
"ಈ ಬೋರ್ಡುಗಳೆ? ಅಯ್ಯೋ!"
ತನ್ನ ಕೃತಿಯ ಬಗೆಗೇ ಆತನಿಗಿದ್ದ ತಾತ್ಸಾರ ಜಯರಾಮುವನ್ನು ಚಕಿತ
ಗೊಳಿಸಿತು.
"ನೀವು ಬರೆದಿರೋ ಚಿತ್ರಗಳನ್ನು ನಾನು ನೋಡಿಲ್ಲ"
"ಚಿತ್ರಗಳು? ನಾನು ಕಲಾವಿದ ಅಂತ ತಿಳಕೊಂಡ್ರೇನು? ಹಾಗೇನಾದ್ರೂ
ನಾನು ಅಂದೆ ಅಂದ್ರೆ, ನಿಜವಾದ ಕಲಾವಿದರು ತಮಗೆ ಮಾನಹಾನಿಯಾಯ್ತೂಂತ ನನ್ನ
ಮೇಲೆ ಮೊಕದ್ದಮೆ ಹೂಡಬಹುದು!"
ಆ ಸ್ವರದಲ್ಲಿ ವ್ಯಂಗ್ಯವಿತ್ತು, ನೋವಿತ್ತು. ಆ ನಗೆ ಮಾತಿನ ತೆರೆಯ ಹಿಂದೆ
ಸಂತೋಷವನ್ನು ಜಯರಾಮು ಕಾಣಲಿಲ್ಲ. ತನ್ನೆದರು ನಿಂತಿದ್ದ ವ್ಯಕ್ತಿಯ ರಹಸ್ಯ
ವನ್ನು ಭೇದಿಸಬಯಸುವವನಂತೆ ಜಯರಾಮು ಆತನನ್ನೇ ನೆಟ್ಟ ದೃಷ್ಟಿಯಿಂದ
ನೋಡಿದ.
"ನಾನು ವರ್ಣಚಿತ್ರ ತೈಲಚಿತ್ರ ಬರೆಯೋಲ್ಲ ಜಯರಾಮು. ಚಿತ್ರ ಬರೆದು
ಬದುಕೋಕೆ ಆಗೋದಿಲ್ಲ. ನಾನು ಬರೆಯೋದು ಸಿನಿಮಾ ಪೋಸ್ಟರು. 'ಶನಿ
ಮಹಾತ್ಮ್ಯೆ'ಯ ದೊಡ್ಡ ಬೋರ್ಡು ನೋಡಿದೀರೋ ಇಲ್ವೊ? ಆನಂದರಾವ್
ಸರ್ಕಲಿನಲ್ಲೂ ಮೆಜೆಸ್ಟಿಕಿನಲ್ಲೂ ಕಟ್ಟಿ ನಿಲ್ಲಿಸಿದ್ದಾರೆ. ಆ ದೇವರ ಚಿತ್ರ ಬರೆದೋನು
ನಾನೇ. ಇನ್ನೊಂದನ್ನೂ ನೀವು ನೋಡಿರಬೇಕು. 'ಜಣಕ್ ಜಣಕಾಂತ-ಮೈಕೈ
ಬಿಟ್ಕೊಂಡು ಕುಣಿಯೋದು. ಅದನ್ನ ಬರೆದೋನೂ ನಾನೇ."
ಏನನ್ನೋ ಮಾತನಾಡಬೇಕೆಂದು ಜಯರಾಮು ಯತ್ನಿಸಿದ. ಆದರೆ ನಾಲಿಗೆ
ಗಂಟಲು ಆರಿಹೋಗಿದ್ದುವು.
ತನ್ನೊಳಗೆ ಇನ್ನೂ ಹಸುರಾಗಿಯೇ ಇದ್ದ ಗಾಯವೊಂದನ್ನು ಕೆದಕಿದಂತಾಗಿ

ಶಂಕರನಾರಾಯಣಯ್ಯ ಅಷ್ಟು ಮಾತನಾಡಿದ್ದ. ಅದಕ್ಕೆ ಎಂತಹ ಪ್ರತ್ಯುತ್ತರ ಬಂದೀ