ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

165

"ದೇವರಿದಾನಮ್ಮ, ಮುಪ್ಪಿನಲ್ಲಿ ಮಕ್ಕಳೇ ಅಲ್ವೆ ನಮ್ಮನ್ನ ನೋಡಿ
ಕೊಳ್ಳೋದು?"
ರಂಗಮ್ಮನ ಮಾತು ಕೇಳಿದರೆ, ಆಕೆಗಂತೂ ಮುಪ್ಪು ಇನ್ನೂ ಬಂದೇ ಇಲ್ಲ
ವೇನೋ ಎನ್ನಬೇಕು ಯಾರಾದರೂ! ಆದರೂ ವಾಡಿಕೆಯ ಒಳ್ಳೆಯ ಮಾತೆಂದು
ರಂಗಮ್ಮ ಅದನ್ನು ಅಂದರು.
ವೆಂಕಟಸುಬ್ಬಮ್ಮನನ್ನು ಕುರಿತು ಅಷ್ಟೆಲ್ಲವನ್ನೂ ರಂಗಮ್ಮ ಬೇರೆ ಹೆಂಗಸರಿಗೆ
ಹೇಳಲಿಲ್ಲ. ಆದರೂ ದಿನ ಕಳೆದಂತೆ ಹೇಗೋ ಹೇಗೋ ಒಂದೊಂದೇ ಅಕ್ಷರವಾಗಿ
ಆ ವಿಷಯ ವಠಾರದಲ್ಲಿ ಹರಡಿಕೊಂಡಿತು.
"ಅಯ್ಯೋ ಪಾಪ!"
-ಎಂದರು ಎಷ್ಟೋ ಹೆಂಗಸರರು. ತನ್ನ ಗಂಡನನ್ನು ಹತೋಟಿಯಲ್ಲಿಟ್ಟು
ಕೊಳ್ಳಲಾರದೇ ಹೋದ ಆ ಹೆಂಗಸಿನ ಬಗೆಗೆ ಅವರೆಲ್ಲರಿಗೂ ಕನಿಕರವೆನಿಸಿತು.
ಒಂದು ದಿನ ಪೋಲೀಸ್ ರಂಗಸ್ವಾಮಿಯ ಹೆಂಡತಿ ಒಂದು ಬಟ್ಟಲು ಬೇಳೆ
ಸಾಲ ಕೇಳಲೆಂದು ವೆಂಕಟಸುಬ್ಬಮ್ಮನ ಬಾಗಿಲ ಮುಂದೆ ನಿಂತಳು. ಎಂಜಿನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ ಆಗಲೆ ಹೊರಟು ಹೋಗಿದ್ದ. ಚಿಕ್ಕವನು ಹೊರ
ಡಲು ಹೊತ್ತಾಯಿತೆಂದು ಅವಸರ ಅವಸರವಾಗಿ ಉಣ್ಣುತ್ತಿದ್ದ.
"ಏನ್ಮಾಡ್ತಿದೀರಿ ವೆಂಕಟಸುಬ್ಬಮ್ಮ?" ಎಂದು ರಂಗಸ್ವಾಮಿಯ ಹೆಂಡತಿ
ಅಂದಳು.
"ಬಡಿಸ್ತಾ ಇದ್ದೀನಿ, ಬಂದ್ಬಿಟ್ಟೆ ಕಣ್ರೀ.
ಆದರೆ ಆಕೆ ಹೊರಬರುವುದರೊಳಗೇ ವಠಾರದೆದುರು ಒಂದು ಜಟಕಾ ಗಾಡಿ
ನಿಂತಿತು. ಮಧ್ಯ ವಯಸ್ಸು ದಾಟಿದ್ದ ಭಾರೀ ಗಾತ್ರದ ಬಿಳಿ ಮೀಸೆಯ ದೊಡ್ಡ
ರುಮಾಲಿನ ಗೃಹಸ್ಥರೊಬ್ಬರು ಕೆಳಕ್ಕಿಳಿದು ಗಾಡಿಯನ್ನು ಕೇಳಿದರು.
"ಇದೇ ಏನಯ್ಯ?"
"ಹೂಂ ಸಾಮಿ."
ಎಡಗೈಯಲ್ಲಿ ಕೊಡೆ ಬಲಗೈಯಲ್ಲಿ ಧೋತರದ ಅಂಚು.ಎಕ್ಕಡ ಮೆಟ್ಟಿ
ಕೊಂಡು ಅವರು ಅನುಮಾನಿಸುತ್ತಾ ಅಂಗಳ ಸೇರಿದರು.
'ಯಾರೋ ಬಂದ್ರು,' 'ಯಾರೋ ಬಂದ್ರು' ಎಂದು ಸುದ್ದಿ ವಠಾರ ತುಂಬ
ಕುಪ್ಪಳಿಸಿತು.
ರಂಗಸ್ವಾಮಿಯ ಹೆಂಡತಿಯನ್ನು ನೋಡಲು ಬಾಗಿಲಿಗೆ ಬಂದ ವೆಂಕಟಸುಬ್ಬ
ಮ್ಮನೂ ಹೊರಕ್ಕೆ ಇಣುಕಿದಳು. ಒಮ್ಮೆಲೆ ಅವಳ ಮುಖ ಅಷ್ಟಗಲವಾಯಿತು.
"ಅಯ್ಯೋ ! ನಮ್ಮ ಯಜಮಾನ್ರು." ಎಂದು ಆಕೆ ಪಿಸುದನಿಯಲ್ಲಿ ಅಂದು,
ಉಣ್ಣುತ್ತಿದ್ದ ಮಗನಿಗೆ ಕೇಳಿಸುವಂತೆ ಹೇಳಿದಳು.

"ನಿಮ್ಮಪ್ಪ ಬಂದ್ರು ಕಣೋ".