ಈ ಪುಟವನ್ನು ಪ್ರಕಟಿಸಲಾಗಿದೆ

180

ಸೇತುವೆ

ಆಗಾಗ್ಗೆ ಕಾಗದದಲ್ಲಿ ರಂಗಮ್ಮ ಮಗನಿಗೆ ಷರಾ ಬರೆಸುವುದಿತ್ತು. ಅದು ಎಷ್ಟೋ
ವರ್ಷಗಳಿಂದ ಅವರು ಬರೆಸುತ್ತಲೇ ಬಂದ ಒಕ್ಕಣೆ.
'ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ' ರಂಗಮ್ಮನ ಕೈ ನೋಡಿ ಭವಿಷ್ಯ ನುಡಿ
ದಿರಲಿಲ್ಲ ನಿಜ. ಆದರೆ, ರಂಗಮ್ಮನನ್ನು ಬಿಟ್ಟು ವಠಾರ ಇದ್ದೀತು ಎಂದು ಹೇಳುವ
ಸಾಹಸ ಮಾಡಲು ಯಾರೂ ಸಿದ್ಧರಿರಲಿಲ್ಲ.
ಜಾಗೃತಾವಸ್ಥೆಯಿರಲಿ, ಸ್ವಪ್ನಾವಸ್ಥೆಯಿರಲಿ - ರಂಗಮ್ಮನ ಹೆಚ್ಚಿನ ಆಯುಸ್ಸೆಲ್ಲ
ವಠಾರದ ಚಿಂತನೆಯಲ್ಲಿ ಕಳೆದು ಹೋಗುತಿತ್ತು.
"ನಿಮ್ಮ ವಠಾರದಲ್ಲಿ ಎಷ್ಟು ಸಂಸಾರಗಳಿವೆ ರಂಗಮ್ನೋರೆ?" ಎಂದು ಯಾರಾ
ದರು ಕೇಳಿದರೆ, ಅವರು ಕೊಡುತ್ತಿದ್ದ ಉತ್ತರ:
"ಹದಿನಾಲ್ಕು."
"ಹದಿನೈದಲ್ವೆ ಅಜ್ಜಿ?"
-ಎಂದು ಯಾರಾದರೂ ತಿದ್ದಲು ಹೋಗುವುದಿತ್ತು. 'ಅಜ್ಜಿ' ಎಂಬ ಸಂಬೋ
ಧನೆ ಅವರಿಗೆ ಪ್ರಿಯವಾಗಿರಲಿಲ್ಲ. ಸ್ವಲ್ಪ ರೇಗುತ್ತ, ಅವರು ಸಾರುತ್ತಿದರು:
"ಹದಿನೈದಲ್ಲ, ಹದಿನಾಲ್ಕೇ!"
ನಿಜವಾಗಿ, ಅವರದನ್ನೂ ಸೇರಿಸಿ ಸಂಸಾರಗಳಾಗುತ್ತಿದ್ದುವು. ಆದರೆ
ಅವರ ಲೆಕ್ಕದ ರೀತಿ ಬೇರೆ. ಹದಿನಾಲ್ಕು ಸಂಸಾರಗಳು ತಮ್ಮ ಮನೆಯಲ್ಲಿವೆ, ವಠಾರ
ದಲ್ಲಿವೆ, ಎಂದು ಅವರು ಸಾಧಿಸುತ್ತಿದ್ದರು.
ಸ್ವಲ್ಪ ಕಾಲದ ಹಿಂದೆ ನಡೆದ ಅಹಲ್ಯಾ-ವೆಂಕಟೇಶರ ಪ್ರಕರಣವನ್ನು ರಂಗಮ್ಮ
ಮರೆತಿರಲಿಲ್ಲ. ಅದರಿಂದ ಅವರ ಮನಸ್ಸಿಗೆ ತುಂಬಾ ನೋವಾಗಿತ್ತು. ರಾಜಮ್ಮ ತನ್ನ
ಮಾತಿಗೆ ಬೆಲೆ ಕೊಡಲಿಲ್ಲವೆಂಬುದು ಆಗಾಗ್ಗೆ ಅವರಿಗೆ ನೆನಪಾಗುತಿತ್ತು.
ಅದನ್ನು ಮರೆಸುವಂತಹ ಒಳ್ಳೆಯ ಕೆಲಸವನ್ನೇನಾದರೂ ಮಾಡಲು ಅವರು
ಹಾತೊರೆಯುತ್ತಿದ್ದರು.
ಹಿಂದೆಯೇ ಅವರ ಮನಸ್ಸಿನೊಳಗಿದ್ದು ಮೂಲೆ ಸೇರಿದ್ದ ವಿಷಯ ಚಳಿಗಾಲದ
ಅನಂತರ ಹೊಂಬಿಸಿಲಿನಲ್ಲಿ ಗರಿಗೆದರಿಕೊಂಡು ಹೊರಬಂತು.
ಒಂದು ಸಂಜೆ ಹೊರ ಅಂಗಳದಲ್ಲಿ ನಿಂತಿದ್ದ ಅವರು ವಠಾರಕ್ಕೆ ಹಿಂತಿರುಗುತ್ತಿದ್ದ
ಚಂದ್ರಶೇಖರಯ್ಯನನ್ನು ಕಂಡರು. ಆತ ಇತ್ತೀಚಿಗೆ ಇಸ್ತ್ರಿ ಹಾಕಿದ್ದ ತನ್ನ ಹಳೆಯ
ಗ್ಯಾಬರ್ಡೀನ್ ಸೂಟನ್ನು ತೊಟ್ಟಿದ್ದ. ರಂಗಮ್ಮನ ಕಣ್ಣಿಗೆ ಸಿಂಗರಿಸಿದ ಮದುವಣಿಗನ
ಹಾಗೆಯೇ ಅವನು ಕಂಡ.
"ಏನು ಚಂದ್ರಶೇಖರಯ್ಯ, ನಿಮ್ಮ ಹತ್ತಿರ ಮಾತನಾಡೋಣ ಅಂದ್ರೆ ನಿಮಗೆ
ಒಂದು ನಿಮಿಷವೂ ಪುರುಸೊತ್ತೇ ಇಲ್ವಲ್ಲಾ?" ಎಂದು ರಂಗಮ್ಮ ಪೀಠಿಕೆ ಹಾಕಿದರು.
"ಪುರುಸೊತ್ತು ನಿಮಗಿರೊಲ್ಲಾಂತ ನಾನೇ ಬಂದು ಮಾತಾಡ್ಸೊಲ್ಲ. ಅಷ್ಟೆ,"
ಎಂದು ಚಂದ್ರಶೇಖರಯ್ಯ ವಿವರಣೆ ಕೊಟ್ಟ, ರಂಗಮ್ಮ ನಿಲ್ಲಿಸಿಕೊಂಡು ಭೈರಿಗೆ