ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

183

ತಿಳೀಬೇಡ್ವೆ?"
ಆಕೆ ಸುಮ್ಮನಾದಳು. ಆತ ಆ ಪುಸ್ತಕವನ್ನು ನೋಡುತ್ತ ಹೇಳಿದ:
"ಹೀಗೆಲ್ಲಾ ನೀನು ಪುಸ್ತಕ ಎಸೆದ್ರೆ, ಮುಂದೆ ರಾಧಾ ತಂದುಕೊಡೋದೇ
ಇಲ್ಲ, ನೋಡು."
ಚಂಪಾವತಿಗೆ ರಾಧೆಯ ನೆನಪಾಯಿತು. ತಾನು ಪ್ರಸ್ತಾಪಿಸಬೇಕಾಗಿದ್ದ ವಿಷಯ
ವನ್ನು ಯೋಚಿಸಿ ಆಕೆ ಮುಗುಳ್ನಕ್ಕಳು. ಆ ಮುಗುಳುನಗುವನ್ನು ನೋಡಿ ಶಂಕರ
ನಾರಾಯಣಯ್ಯ ಅದರ ಹಿಂದೆ ಬರುತ್ತಲಿದ್ದ ಮಾತುಗಳನ್ನು ನಿರೀಕ್ಷಿಸಿದ.
"ನಿಮ್ಮ ಸ್ನೇಹಿತ ಚಂದ್ರಶೇಖರಯ್ಯನಿಗೆ ಇನ್ನೂ ಮದುವೆ ಇಲ್ಲ ಅಲ್ವೆ?"
"ಇಲ್ಲ, ನಿನ್ನ ಮಗಳ‍್ನ ಕೊಡೋಣಾಂತಿದೀಯೇನು?"
"ರಾಧಾ ಮನೆ ಪಕ್ಕದಲ್ಲೇ ಆತ ಇರೋದು."
"ಪಾಪ! ಇವತ್ತು ಗೊತ್ತಾಯ್ತೇನೊ?"
ಚಂಪಾ ಮಾತನಾಡಲಿಲ್ಲ. ಅಹಲ್ಯೆಗೆ ಆದ ಅನುಭವ ರಾಧೆಗೂ ಆಗಬಹು
ದೆಂದು ಆಕೆ ಹೆದರಿದಳು. ಹಾಗಾಗಬಾರದು, ಹಾಗಾಗದಿರಲಿ-ಎಂಬ ಹಾರೈಕೆ
ಅವಳದು.
ಚಂಪಾ ತಲೆ ಎತ್ತಿ ಗಂಡನ ಮುಖವನ್ನೇ ದಿಟ್ಟಿಸಿದಳು.
ಶಂಕರನಾರಾಯಣಯ್ಯ ಮೃದುವಾದ ಸ್ವರದಲ್ಲಿ ಮಾತನಾದಡಿದ:
"ಚಂಪಾ, ಸುಮ್ನೆ ಏನಾದರೂ ಯೋಚ್ನೆ ಮಾಡ್ಬೇಡ."
"ನಿಮ್ಮಸ್ನೇತ. ಯಾವತ್ತಾದರೂ ಮಾತನಾಡಿಸಿ ನೋಡಿ.
"ಹೂಂ."
ಚಂಪಾವತಿಗೆ ಸಮಾಧಾನವಾಯಿತು.
.........ಆ ವಾರವೇ ಒಂದು ಸಂಜೆ ಚಂದ್ರಶೇಖರಯ್ಯ ಹೋಟೆಲಿನಲ್ಲಿ ಶಂಕರ
ನಾರಾಯಣಯ್ಯನಿಗೆ ಕಾಣಲು ಸಿಕ್ಕಿದ. ಚಂಪಾವತಿ ಹೇಳಿದ್ದುದನ್ನು ನೆನಸಿಕೊಳ್ಳುತ್ತ
ಶಂಕರನಾರಾಯಣಯ್ಯ ಮಾತು ಹೇಗೆ ಆರಂಭಿಸಬೇಕೆಂದು ಚಡಪಡಿಸಿದ. ಚಂದ್ರ
ಶೇಖರಯ್ಯ ಏನೆಂದುಕೊಳ್ಳುವನೋ ಎಂದು ಸಂಕೋಚವೆನಿಸಿತು. ಹೆಸರು-ಹಲಿಗೆ
ಬರೆದುಕೊಟ್ಟದ್ದಕ್ಕಾಗಿ ಚಂಪಾ "ನಿಮ್ಮ ಸ್ನೇಹಿತ" ಎಂದು ಹೇಳುತ್ತಿದ್ದಳಾದರೂ,
ಹೇಳಿಕೊಳ‍್ಳುವಂತಹ ‌ಸ್ನೇಹವೇನೂ ಅವರ ನಡುವೆ ಬೆಳೆದಿರಲಿಲ್ಲ. ಹೆಚ್ಚಾಗಿ ಬೆರೆ
ಯಲು ಬಿಡುವು ದೊರೆಯದೆ ಇರುತ್ತಿದ್ದುದೇ ಅದಕ್ಕೆ ಕಾರಣ.
ಚಂದ್ರಶೇಖರಯ್ಯ ಸಿಗರೇಟು ಕೊಟ್ಟ. ಶಂಕರನಾರಾಯಣಯ್ಯ ಕಡ್ಡಿಕೊರೆದು
ಇಬ್ಬರದಕ್ಕೂ ಹಚ್ಚಿದ. ಹೋಟೆಲಿನ ಆ ಮೂಲೆಯಲ್ಲಿ ಅಷ್ಟಾಗಿ ಜನರೂ ಇರಲಿಲ್ಲ.
"ಇನ್ನೊಂದು ಒನ್-ಬೈ-ಟು ಕಾಫಿ ತಗೊಳೋಣ‍್ವೆ?" ಎಂದು ಚಂದ್ರಶೇಖ
ರಯ್ಯ ಕೇಳಿದ. ಶಂಕರನಾರಾಯಣಯ್ಯ ಸಮ್ಮತಿಸೂಚಕವಾಗಿ ತಲೆಯಾಡಿಸಿದ.