ಈ ಪುಟವನ್ನು ಪ್ರಕಟಿಸಲಾಗಿದೆ

186

ಸೇತುವೆ

ಹೆಂಡತಿಯ ದೇಹಸ್ಥಿತಿಯನ್ನು ಗಮನಿಸುತ್ತ ಗಂಡನೆಂದ:
"ಅಂತೂ ನಿನ್ನ ಬಯಕೆ ಈಡೇರಿತೊ ಇಲ್ವೊ?"
"ಆದರೆ ಯಾರಿಗೂ ಹೇಳ್ಬೇಡಿ. ಇದು ರಹಸ್ಯ!"
ಹಿರಿಯರಿಗೆ ತಿಳಿಯದೆಯೇ ಏನಾದರೂ ಸಂಭವಿಸಿದೆಯೋ ಏನೋ ಅನ್ನಿಸಿತು ಶಂಕರನಾರಾಯಣಯ್ಯನಿಗೆ.
"ಹಾಗಂದ್ರೆ?"
"ರಂಗಮ್ಮ ಬಂದು ಗುಟ‍್ಟಾಗಿ ಹೇಳಿದ್ರು. ಅವರದೇ ಅಂತೆ ರಾಯಭಾರ. ಆದರೆ
ಇನ್ನೂ ಎರಡು ತಿಂಗಳು ಯಾರಿಗೂ ಹೇಳ್ಬಾರ್ದು ಅಂದ್ರು."
"ಹಾಗೋ?"
"ಮೀನಾಕ್ಷಮ್ಮ, ಕಮಲಮ್ಮ, ಪದ್ಮಾವತಿ, ಕಾಮಾಕ್ಷಿ-ಪ್ರತಿಯೊಬ್ಬರ
ಹತ್ರಾನೂ ಹಾಗೇನೇ ಗುಟ್ಟಾಗಿ ರಂಗಮ್ಮ ಹೇಳಿ ಹೋದ್ರು."
ಇದು ತನ್ನ ಸರದಿಯೆಂದು, ಶಂಕರನಾರಾಯಣಯ್ಯ ಬಿದ್ದು ಬಿದ್ದು ನಕ್ಕ.

೨೦

ನಾರಾಯಣಿ ಸತ್ತು ಒಂದು ವರ್ಷವಾಗಿತ್ತು ಆಗಲೆ. ಪ್ರತಿಯೊಬ್ಬರ ವಯಸ್ಸೂ
ಹಿಂದಿಗಿಂತ ಒಂದು ವರ್ಷ ಹೆಚ್ಚಿತ್ತು.
"ಎಷ್ಟು ಬೇಗ ಕಾಲ ಕಳೆದ್ಹೋಗುತ್ತೆ!" ಎಂದು ರಂಗಮ್ಮ ತಮ್ಮಷ್ಟಕ್ಕೇ
ಆಶ್ಚರ್ಯ ವ್ಯಕ್ತಪಡಿಸಿದರು.
ಉಪಾಧ್ಯಾಯ ಲಕ್ಷ್ಮೀನಾರಾಯಣಯ್ಯಗೆ ಮಾಗಡಿಗೆ ವರ್ಗವಾದ ವಾರ್ತೆ
ಬಂತು. ಒಬ್ಬರೇ ಹೋದರಾಯಿತೆಂದು ಮೊದಲು ಯೋಚಿಸಿದ್ದರೂ ತೀರ್ಮಾನ
ಮಾಡುವ ಹೊತ್ತು ಬಂದಾಗ ಸಂಸಾರವನ್ನೂ ಜತೆಯಲ್ಲೇ ಕರೆದೊಯ್ಯುವುದು
ಮೇಲೆಂದು ಅವರು ನಿರ್ಧರಿಸಿದರು.
"ಈ ತಿಂಗಳ ಕೊನೇಲಿ ಮನೆ ಖಾಲಿ ಮಾಡ್ತೀನಿ ರಂಗಮ್ನೋರೆ," ಎಂದು
ಲಕ್ಷ್ಮೀನಾರಾಯಣಯ್ಯ ತಿಳಿಸಿದರು.
"ಬೆಂಗಳೂರಿಗೇ ವಾಪಸು ವರ್ಗವಾದಾಗ ನಿಮ್ಮ ವಠಾರದಲ್ಲೇ ಈ ಮನೆಯನ್ನೇ
ನೀವು ಕೊಡ್ಬೇಕು!" ಎಂದು ವಿನಂತಿಯನ್ನೂ ಮಾಡಿದರು.
"ಆಗಲಪ್ಪಾ ಆಗಲಿ," ಎಂದು ರಂಗಮ್ಮ ಅನ್ನದಿರಲಿಲ್ಲ.
ಆದರೆ ಅವರ ವಯಸ್ಸು ಆಗಲೆ ಎಣಿಕೆ ಹಾಕಿತು; ಎಡಬದಿಯ ಮೊದಲ ಮನೆ
ಗಿನ್ನು ಹತ್ತೊಂಭತ್ತು ರೂಪಾಯಿ ಬಾಡಿಗೆ; ಬೇಗನೆ ವಿವಾಹವಾಗಲಿರುವ ಚಂದ್ರ