ಈ ಪುಟವನ್ನು ಪ್ರಕಟಿಸಲಾಗಿದೆ

38

ಸೇತುವೆ

"ಹದಿನೈದನೇ ತಾರೀಕು ಸಾಯಂಕಾಲ ಬಂದ್ದಿಡ್ತೀನಿ.. ಅರ್ಧ ತಿಂಗಳಿನ ಬಾಡಿಗೆ
ಮುಂಗಡ ಕೊಡ್ರೀನಿ."
ಈ ಲೆಕ್ಕಾಚಾರದಲ್ಲೆಲ್ಲ ರಂಗಮ್ಮ ಎಂದೂ ಬಿಟ್ಟುಕೊಟ್ಟವರಲ್ಲ. ಕಟ್ಟುನಿಟ್ಟಾ
ಗಿಯೇ ಅವರು ಹೇಳಿದರು:
"ಅದೊಂದು ಸಾಧ್ಯವಿಲ್ಲ. ನಾಳೆ ದಿವಸ ಚೆನ್ನಾಗಿದೆ. ಬಂದು ಹತ್ತೊಂಭತ್ತು
ರೂಪಾಯಿ ಮುಂಗಡ ಕೊಟ್ಟ ಕರಾರು ಪತ್ರ ಮಾಡೊಂಡು ಹೋಗಿ.. ನಾಡಿದ್ದು
ಬಿಡಾರ ಬಂದ್ದಿಡಿ.. ಮುಂದಿನ ತಿಂಗಳು ಮೊದಲ್ನೆ ತಾರೀಕಿಗೆ, ಅಥವಾ ಐದನೇ
ತಾರೀಕಿನೊಳಗೆ.. ಈ ಅರ್ಧ ತಿಂಗಳ ಬಾಡಿಗೆ ಕೊಡಿ."
ವಠಾರದ ಒಡತಿಯೊಡನೆ ಚರ್ಚೆ ವ್ಯರ್ಥವೆಂದು ಮನಗೊಂಡ ಶಂಕರನಾರಾಯ
ಣಯ್ಯ ಸಂದರ್ಶನವನ್ನು ಮುಕ್ತಾಯಗೊಳಿಸಿದ.
“ಹಾಗೇ ಆಗ್ಲಿ."
ಬಂದವನು ಹೊರಡಲು ಎದು ನಿಂತನೆಂದ ರಂಗಮ್ಮನೂ ಎದ್ದರು. ಆದರೆ
ಈಗಿರುವ ಮನೆಯನ್ನು ಆತ ಬಿಡಲು ಕಾರಣವೇನೆಂದು ತಿಳಿಯುವ ಒಂದು ಕೆಲಸ
ಉಳಿದಿತ್ತು, ಅದಕ್ಕೆ ಪೀಠಿಕೆಯಾಗಿ ಪಟ್ಟ ಪ್ರಶ್ನೆಗಳನ್ನು ರಂಗಮ್ಮ ಕೇಳಬೇಕಾಯಿತು.
“ನೀವು ಕೆಲಸ ಮಾಡೋದೆಲ್ಲಿ?"
"ಗಾಂಧಿನಗರದಲ್ಲಿ"
"ಹಾಲಿ ಅಲ್ಲೇ ವಾಅಸವಾಗಿದೀರೋ?"
"ಇಲ್ಲ. ಈಗಿರೋದು ಶೇಷಾದ್ರಿಪುರದಲ್ಲಿ."
ಮತ್ತೆ! ಅದೇ ಸಮೀಪ ಅಲ್ವೆ ನಿಮ್ಗೆ?"
"ಬೆಂಗಳೂರಲ್ಲಿ ದೂರವೇನು, ಸಮೀಪವೇನು, ಎಲ್ಲಾ ಒಂದೇ."
ರಂಗಮ್ಮನಿಗೆ ಬೇಕಾಗಿದ್ದುದು, ಆ ಉತ್ತರದಿಂದ ದೊರೆಯಲಿಲ್ಲ, ಅವರು ನೇರ
ವಾಗಿಯೇ ಕೇಳಬೇಕಾಯಿತು.
“ಈಗೀರೊ ಮನೇನ ಯಾಕೆ ಬಿಡ್ತಿದೀರಿ ಹಾಗಾದರೆ?"
"ಒಂದು ಅರ್ಧ ಕ್ಷಣ ಶಂಕರನಾರಾಯಣಯ್ಯನ ದೃಷ್ಟಿ ಶೀತಲವಾಯಿತು.
ಆದರೂ ಉತ್ತರ ಕೊಡಲು ಆತ ತಡಮಾಡಲಿಲ್ಲ.
“ಈಗಿರೋ ಮನೆ ಅಷ್ಟು ಅನುಕೂಲವಾಗಿಲ್ಲ, ಕಡಿಮೆ ಬಾಡಿಗೇದು. ಜವುಗು
ಜಾಗ, ಶ್ರೀರಾಮಪುರದ ಹವಾ ಚೆನಾಗಿದೇಂತ ಡಾಕ್ಟರು ಬೇರೆ ಹೇಳಿದ್ರು-----"
"ಹೌದು, ಹೌದು. ಅದು ನಿಜವೇ. ಆರೋಗ್ಯದ ದೃಷ್ಟಿಯಿಂದ ಇದು
ಒಳ್ಳೆ ಜಾಗ. ನಮ್ಮ ವಠಾರದ ವಿಷಯದಲ್ಲಂತೂ ಇಲ್ಲಿ ಯಾರನ್ನು ಬೇಕಾದರೂ
ಕೇಳಿ, ಹೇಳ್ತಾರೆ. ಮಳೆ ಇರಲಿ, ಛಳಿ ಇರಲಿ, ಸೆಖೆ ಇರಲಿ, ರಂಗಮ್ಮನ ವಠಾರದಲ್ಲಿ
ಎಲ್ಲಾ ಒಂದೇ!"
“ ಕೇಳೋದೇನ್ಬಂತು-ಕಣ್ಣಾರೆ ನಾಅನೇ ಕ್ಂದ್ಮೇಲೆ ?"