ಈ ಪುಟವನ್ನು ಪ್ರಕಟಿಸಲಾಗಿದೆ

42

ಸೇತುವೆ

ಅಷ್ಟೇ ಸೂಕ್ಶ್ಮವಾಗಿ ತಿರುತಿರುಗಿಸಿ ಅವರು ಪರೀಕ್ಷಿಸಿದ್ದರು. ಆಗಲೂ ಹೇಳಿದ್ದರು
'ದೃಷ್ಟಿ ಸ್ವಲ್ಪ ಮಂದ'ಎಂದು. 'ವಯಸ್ಸಾಯ್ತು' ಎಂದು ಮಾತ್ರ ಅಂದಿರಲಿಲ್ಲ.
ದೃಷ್ಟಿ ಎಂದೂ ಅವರಿಗೆ ತೊಂದರೆ ಕೊಟ್ಟಿರಲಿಲ್ಲವೆಂದಲ್ಲ. ಆದರೆ ನೇತ್ರ ವೈದ್ಯರ
ಬಳಿಗೆ ಹೋಗಿ ಕನ್ನಡಕ ಕೊಳ್ಳುವ ಗೋಜಿಗೆ ಅವರು ಹೋಗಿರಲಿಲ್ಲ.
"ಸರಿಯಾಗಿದೆ,"ಎಂದರು ರಂಗಮ್ಮ. ಮುಂದೆ ತಾವೇ ಮಾತು ಸೇರಿಸಿದರು:
"ನಿಮ್ಮಲ್ಲಿ ಕಾಗದ ಪೆನ್ನು ಏನೂ ಇಲ್ಲಾಂತ ತೋರುತ್ತೆ."
"ಪೆನ್ನಿದೆ."
"ಜುಬ್ಬದ ಎದೆ ಭಾಗದಲ್ಲಿ ಪೆನ್ನಿಗಾಗಿಯೇ ಮಾಡಿದ್ದ ಕಿರುಜೇಬಿನಿಂದ ಎರಡು
ರೂಪಾಯಿಯ ನಕಲಿ ಪಾರ್ಕರ್ ಪೆನ್ನನ್ನು ಹೊರತೆಗೆದು ಶಂಕರನಾರಾಯಣಯ್ಯ
ಕೈಯಲ್ಲಿ ಹಿಡಿದುಕೊಂಡ.
ರಂಗಮ್ಮ ಅಸ್ಪಷ್ಟವಾಗಿ ಏನನ್ನೋ ಗೊಣಗಿ, ಕೊರಳಿಗೆ ತೂಗಹಾಕಿದ್ದ ಬೀಗದ
ಕೈಯಿಂದ ಕಬ್ಬಿಣದ ಪೆಟ್ಟಗೆಯನ್ನು ತೆರೆದು, ಸ್ವಲ್ಪ ಮಾಸಿದ್ದ ಮಡಚಿದ್ದ ಕಾಗದದ
ಹಾಳೆಯೊಂದನ್ನು ಹೊರತೆಗೆದು,ಆತನ ಮುಂದಿಟ್ಟರು. ಒತ್ತಿಕೊಳ್ಳಲೆಂದು
ಯಾವುದೋ ಒಂದು ಹಳೆಯ ಪುಸ್ತಕವನ್ನೂ ಕೊಟ್ಟರು.
ಶಂಕರನಾರಾಯಣಯ್ಯ ಬರೆಯಲು ಸಿದ್ಧನಾದ. ರಂಗಮ್ಮನ ಮುಖ ನೋಡಿದ.
"ಹೇಳಿ ಬರಕೋತೀನಿ.
"ರಂಗಮ್ಮ ಹೇಳಲು ಸಿದ್ಧವಾದರು. ಎಷ್ಟೋ ಸಾರೆ ಹೇಳಿ ಬರೆಸಿ ಅಭ್ಯಾಸ
ವಾಗಿತ್ತು. ಪರಿಚಯ ಪದಗಳು ಅವರ ಮನಸ್ಸಿನಲ್ಲಿ ರೂಪುಗೊಂಡುವು.
"ಮಲ್ಲೇಶ್ವರ, ಶ್ರೀರಾಮಪುರ ರಂಗಮ್ಮನ ವಠಾರದ ಮಾಲಿಕರಾದ ರಂಗಮ್ಮ
ನವರಿಗೇ-ಆಮೇಲೆ ನಿಮ್ಮ ಹೆಸರು ಹಾಕಿ-ನಾದ ನಾನು ಬರೆದು ಕೊಡುವು
ದೇನೆಂದರೆ...
"ಶಂಕರನಾರಾಯಣಯ್ಯ ಅಷ್ಟನ್ನೂ ಬರೆದುಕೊಂಡ. ಆತನಿಗೆ ನಗು ಬಂತು.
ತುಟಿಗಳು ಬೇರ್ಪಟ್ಟು ಕೋಲುಮುಖ ಅಗಲವಾಯಿತು. ಆದರೆ ಆತನ ತಲೆ ಬಾಗಿದ್ದು
ದರಿಂದಲೂ ಮುಂದಿನ ಮಾತುಗಳನ್ನು ರಂಗಮ್ಮ ನೆನಪು ಮಾಡಿಕೊಳ್ಳುತ್ತಿದ್ದುದ
ರಿಂದಲೂ ಆಕೆಗೆ ಅದು ಕಾಣಿಸಲಿಲ್ಲ.
"ಅಷ್ಟೂ ಬರೆದಾಯ್ತೊ?"
"ಹೂಂ.ಮುಂದಕ್ಕೆ ಹೇಳಿ."
"ಮುಂದೆ ಇವತ್ತಿನ ತಾರಿಖು-ತಿಂಗಳು-ಇಸವಿ ಬರೀರಿ."
"ಹೂಂ."

"ಈ ದಿವಸ ನಾನು ಮೊಬಲಗು ರೂಪಾಯಿ ಹತೋಂಭತ್ತನ್ನು ಈ ವಠಾರದ
ಮನೆಯ-ನಂಬರು ಹದಿನಾರು ಐವತ್ತು-ಒಂದು ತಿಂಗಳ ಮುಂಗಡ ಬಾಡಿಗೆಯಾಗಿ
ಪೂರ್ತಾ ಪಾವತಿ ಮಾಡಿದ್ದೇನೆ....ಬರೆದಿರೋ?...ಮುಂದೆ ಪ್ರತಿ ತಿಂಗಳೂ ಮೊದಲ್ನೇ