ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

53

ಸ೦ತೃಪ್ತಿಯ ನಿಟ್ಟುಸಿರುಬಿಟ್ಟರು.
ಸುಬ್ಬುಕೃಷಯ್ಯ ಆ ಬಾಗಿಲಿ೦ದ ಹೊರಬಿದ್ದು ತನ್ನ ಬಾಗಿಲಿಗೆ ಹೊರಟ.
ರ೦ಗಮ್ಮನ ಮಾತುಗಳು ಆತನನ್ನು ಹಿ೦ಬಾಲಿಸಿದುವು.
"ಹತ್ತು ಘ೦ಟೆ ಆಗೊಃಯಿತ೦ತ ಕಾಣುತ್ತೆ. ಊಟ ಆದ್ಮೇಲೆ ಹೇಳಪ್ಪಾ.
ದೀಪ ಆರಿಸ್ತಿನಿ."
ಸುಬ್ಬುಕೃಷಯ್ಯ ಊತ್ತರವೀಯಲಿಲ್ಲ. ನೇರವಾಗಿ ತನ್ನ ಮನೆಯೋಳಕ್ಕೆ ಬ೦ದು
ತಟ್ಟೆಯ ಮು೦ದೆ ಕುಳಿತ.
ತಮ್ಮ ಬಾಗಲಿಗೆ ಆಗಣಿ ಹಾಕಲೆ೦ದು ರ೦ಗಮ್ಮ ಎದ್ದರು.
ಅಷ್ಟರಲ್ಲಿ ಹಿತ್ತಿಲ ಬಾಗಿಲನಾಚೆಯ ಕೊಚ್ಚೆ ಹಾದಿಯಿ೦ದ ಸ್ವರ ಕೇಳಿಸಿತು:
"ಕವಳಾತ್ತಾಯಿ ....ಆಮ್ಮಾ..."
ನಾಭಿಯಲ್ಲೇ ನಡುಕ ಹುಟ್ಟಿಸುವ೦ತಹ ವಿಕಾರ ಕರ್ಕಶ ಧ್ವನಿ.
ಮಧ್ಯಾಹ್ನದ ఒ೦ದು ತುತ್ತು ಅನ್ನ ಮಿಕ್ಕಿತ್ತು, ರಂಗಮ್ಮ ಅದನ್ನೆತ್ತಿಕೊ೦ಡು
ಓಣಿಯುದ್ದಕ್ಕೂ ಹೋಗಿ ಹಿತ್ತಿಲ ಬಾಗಿಲು ತೆಗೆದು ಭಿಕ್ಷುಕಿಗೆ ಹಾಕಿದರು.
ಒಳಬಂದು ಕೈ ತೊಳೆದು, ಹಾಸಿಗೆ ಹಾಸಿದ ಸ್ವಲ್ಪ ಹೊತ್ತಿನಲ್ಲಿ ಮೀನಾಕ್ಷಮ್ಮನ
ಕೀರಲು ಸ್ವರ ಕೇಳಿಸಿತು:
"ದೀಪ ಆರಿಸಿ ರಂಗಮ್ಮೊರೇ..."
ರಂಗಮ್ಮ ವಿದ್ಯುತ್ ಹಿಡಿಯನ್ನು ಮೇಲಕ್ಕೆ ತಳ್ಳಿದರು.
ಅದು ಟಿಕ್ ಸದು ಮಾಡಿತು. ದೀಪ ಆರಿಹೋಯಿತು.



ఒంಟಿ ಎತ್ತಿನ ಗಾಡಿಯಲ್ಲಿ ಶಂಕರನಾರಾಯಣಯ್ಯನ ಸ೦ಸಾರ ರಂಗಮ್ಮನ
ವಠಾರಕ್ಕೆ ಸಾಗಿ ಬಂತು. ಹೊರಗೆ ಹುಡುಗರು ನಡೆಸಿದ್ದ ಗದ್ದಲದೊಡನೆ ಸ್ಪರ್ಧಿಸು
ತ್ತಿದ್ದವನ ಹಾಗೆ ಗುಂಡಣ್ಣ ಗೊರಕೆ ಹೊಡೆಯುತ್ತ ನಿದ್ದೆ ಹೋಗಿದ್ದ, ರಾಜಮ್ಮ
ಮಗನನ್ನು ಎಬ್ಬಿಸಿದರು;
"ಏಳೋ ಗು೦ಡ. ರಂಗಮ್ಮ ಕೂಗ್ತಿದಾರೆ ನೋಡು."
ಮುಖಕ್ಕಿಷ್ಟು ನೀರು ಹನಿಸಿ ಹೊರಬ೦ದ ಗುಂಡಣ್ಣನಿಗೆ ಕತ್ತಲೆಯ ನಡು
ಹಾದಿಯ ಆಚೆ ಅ೦ಗಳಕ್ಕಿಳಿಯುತ್ತಿದ್ದ ಸಾಮಾನುಗಳು ಗೋಚರಿಸಿದುವು. ರಂಗಮ್ಮ
ಕರೆದುದರ ಉದ್ದೆಶವೂ ಅರ್ಥವಾಯಿತು. ಅವರ ಬಳಿಗೆ ಹೋಗದೆ ಗುಂಡಣ್ಣ
ನೇರವಾಗಿ ಅಂಗಳಕ್ಕೇ ನಡೆದ.