ಈ ಪುಟವನ್ನು ಪ್ರಕಟಿಸಲಾಗಿದೆ

62

ಸೇತುವೆ

ಕೆಲಸದಲ್ಲಿತ್ತು. ಅದನ್ನು ಈಗಲೇ ಮಾಡೋಣವೆ ಬೇಡವೆ ಎಂದು ಅನಿಶ್ಚಯತೆ
ಯಿಂದ ತೊಟ್ಟಿಲನ್ನೆ ಶಂಕರನಾರಾಯಣಯ್ಯ ನೋಡಿದ. ಅದನ್ನು ಗಮನಿಸಿ ಚಂಪಾ
ಹೇಳಿದಳು:
"ಇವತ್ತಿಗೆ ಇಷ್ಟು ಸಾಕು. ಅದನ್ನೆಲ್ಲಾ ನಾಳೆ ಮಾಡುವಿರಂತೆ."
"ಹೂಂ. ಸೊಂಟ ನೋಯ್ತಿದೆ, ಯಾಕೋ..."
"ಎಷ್ಟೊಂದು ಕೆಲಸ ಮಾಡಿದೀರಿ, ಏನು ಕಥೆ! ನೋಯದೆ ಇರುತ್ಯೆ?"
"ನಿನಗೇನು ಹೇಳು, ಎಲ್ಲಾ ತಮಾಷೆಯೆ....
"ಚಂಪಾ ಒಂದು ಪೊರಕೆಯನ್ನೆತ್ತಿಕೊಂಡಳು.
"ಏಳಿ ಗುಡಿಸ್ಬಿಡ್ತೀನಿ. ನೀವು ಹೋಗಿ ಕೊಳಾಯಿ ಬೀಗ ತೆಗೆಸಿ."
"ಹೂಂ. ಬಿಂದಿಗೆ-ಬಕೀಟು ಎರಡು ತಗೊಂಡ್ಬಾ. ನನಗಂತು ಸ್ನಾನ
ಮಾಡಿಯೀ ತೀರ್ಬೀಕು."
"ಎಲ್ಮಾಡ್ತೀರಾ ಸ್ನಾನ?"
"ಬಚ್ಚಲು ಮನೆಯೇನೋ ಪಕ್ಕದಲ್ಲೆ ಇದೆ. ಇಷ್ಟು ಹೊತ್ತಿಗೆ ಕ್ಯೂನೂ
ಇರಲಾರದು."
ಚಂಪಾ ಹೊರಹೋಗಿ ಬಚ್ಚಲುಮನೆ ನೋಡಿ ಬಂದಳು.
"ಅಲ್ಲಿ ದೀಪ ಇಲ್ಲಾಂದ್ರೆ."
"ಹೋಗಲಿ ಬಿಡು. ಅಡುಗೆ ಮನೇಲು ಸ್ನಾನಕ್ಕೆ ಏರ್ಪಾಡಿದೆ. ನೀರು
ಹೋಗೋಕೆ ಮೋರಿ ಮಾಡಿದಾರೆ."
ಆತ ಎದ್ದು ರಂಗಮ್ಮನವರಲ್ಲಿಗೆ ಹೋದ. ದೇವರ ಸ್ಮರಣೆ ಮಾಡುತ್ತ ಕುಳಿ
ತಿದ್ದ ಅವರು ತಗ್ಗಿದ ಧ್ವನಿಯಲ್ಲಿ ಕೇಳಿದರು: <
"ಎಲ್ಲಾ ಕೆಲಸ ಮುಗಿಯಿತೆ?"
"ಮುಗೀತಾ ಬಂತು ರಂಗಮ್ನೋರೇ. ಸ್ವಲ್ಪ ನೀರು ಬೇಕಲ್ಲ."
ರಂಗಮ್ಮ ಎದ್ದು , ಗೋಡೆಯೊಳಗಿಸದ್ದ ಗೂಡಿನಿಂದ ಬೀಗದ ಕೈ ತೆಗೆದುಕೊಟ್ಟರು.
"ನೀರು ತುಂಬಿಸಿ ಆದ್ಮೇಲೆ ಬೀಗ ಹಾಕಿಟ್ಟು ಕೈನ ತಂದ್ಕೊಡೀಪ್ಪಾ."
"ಆಗಲಿ ರಂಗಮ್ನೋರೆ."
ರಂಗಮ್ಮ ಪುನಃ ಗೋಡೆಗೊರಗಿ ಕುಳಿತು ದೇವರ ಸ್ಮರಣೆಯಲ್ಲಿ ನಿರತರಾದರು.
ಆದರೆ, ರಾತ್ರಿಯ ಹೊತ್ತು ಕೊಳಾಯಿಯಿಂದ ವೇಗವಾಗಿ ಸುರಿಯುತ್ತಿದ್ದ ನೀರಿನ
ಸುಂಯ್ ಎಂಬ ಸದ್ದು ಅವರಿಗೆ ಕೇಳಿಸದೆ ಇರಲಿಲ್ಲ.
ಶಂಕರನಾರಾಯಣಯ್ಯ ಮೈತೊಳೆದುಕೊಂಡ. ಚಂಪಾ ಮುಖ ಕೈ ಕಾಲು
ತೊಳೆದುಕೊಂಡಳು.
ಸಂಜೆ ಮಗುವನ್ನೆತ್ತಿಕೊಂಡಿದ್ದ ಚಂಪಾಳನ್ನು ಕಂಡಾಗ ಹತ್ತಿರಕ್ಕೆ ಕರೆದು ಏನೋ
ಮಾಡಬೇಕೆಂದು ಗಂಡನಿಗೆ ತೋರಿತ್ತು. ಈಗ ಕೆಲಸ ಮಾಡಿ ಬಳಲಿದ ಮೇಲೆ, ಅವನಿಗೆ