ಪುಟ:Valmeeki Ramayana Shaapa Mattu Vara.pdf/೧೦೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೯

೯೯

ಮಹಾಭಾರತದಲ್ಲಿ ರಾಮಕಥೆಯು ವನಪರ್ವದ ಅಧ್ಯಾಯದಲ್ಲಿ (೨೭೩ರಿಂದ ೨೯೧) ಬಂದಿದೆ.

ಕಾಮಮಂಗಾನಿ ಮೇ ಸೀತೇ ದುನೋತು ಮರಕಧ್ವಜಃ ||೨೭||

ನ ತ್ವಾಮಕಾಮಾಂ ಸುಶ್ರೋಣಿ ಸಮೇಷ್ಯೇ ಚಾರುಹಾಸಿನೀಮ್ ||೨೮||

``ಹೇ ಸುಂದರಿ! ಎಲೈ ಸುಹಾಸಿನಿಯೆ! ಕಾಮನು ನನ್ನ ಶರೀರವನ್ನು ಎಷ್ಟೇ ಪೀಡಿಸಿದರೂ ನಾನು ನನ್ನ ಒಪ್ಪಿಗೆಯಿಲ್ಲದೆ ಸಮಾಗಮಿಸುವುದಿಲ್ಲ. ಈ ರೀತಿ ರಾವಣನು ನಿಖರವಾಗಿ ಹೇಳಿದ್ದಾನೆ; ಆದ್ದರಿಂದ ಇನ್ನಿತರ ಪುರಾವೆಗಳ ಆವಶ್ಯಕತೆಯಿಲ್ಲ.

ತ್ರಿಜಟೆ ಎಂಬ ರಾಕ್ಷಸಿಯು ಸೀತೆಯಲ್ಲಿ ನೆಚ್ಚಿಕೆಯನ್ನುಂಟುಮಾಡಿ ಈ ರೀತಿ ಹೇಳಿದ್ದಾಳೆ: ಮಾ ಚ ತೇsಸ್ತು ಭಯಂ ಭೀರು ರಾವಣಾಲ್ಲೋಕಗರ್ಹಿತಾತ್ |

ನಲಕೂಬರಶಾಪೇನ ರಕ್ಷಿತಾ ಹ್ಯಸಿ ನಂದಿನೀ ||೫೯||

ಶಪ್ತೋಹ್ಯೇಣ ಪುರಾ ಪಾಪೋ ವಧುಂ ರಂಭಾಂ ಪರಾಮೃಶನ್ |

ನ ಶಕ್ನೋತ್ಯವಶಾಂ ನಾರೀಮುಪೈತುವ ಜಿತೇಂದ್ರಿಯಃ ||೬0||

``ಹೇ ನಂದಿನಿ! ಆತನಿಗೆ ಕುಬೇರಪುತ್ರನಾದ ನಲಕೂಬರನ ಶಾಪವು ದೊರಕಿದೆ. ಅದರಿಂದಲೇ ನಿನ್ನ ರಕ್ಷಣೆಯಾಗುತ್ತಿದೆ. ಪೂರ್ವದಲ್ಲಿ ಈ ದುಷ್ಟನು ಸೊಸೆಯಂತಿದ್ದ ರಂಭೆ ಎಂಬ ನಾರಿಯೊಡನೆ ಅತಿಪ್ರಸಂಗವನ್ನು ಮಾಡಿದನು. ಆ ಕಾರಣ ಆತನಿಗೆ ತಾನಾಗಿ ಶಾಪ ದೊರಕಿದೆ. ಈ ಅಜಿತೇಂದ್ರಿಯನಾದ ರಾವಣನು ಆತನಿಗೆ ತಾನಾಗಿ ವಶವಾಗದ ಸ್ತ್ರೀಯೊಡನೆ ಸಮಾಗಮವನ್ನು ನಡೆಸಲು ಅಸಮರ್ಥನಾಗಿದ್ದಾನೆ.

ಶ್ರೀರಾಮನು ಸೀತೆಯ ಚಾರಿತ್ರ್ಯದ ಶುದ್ಧತೆಯ ಬಗ್ಗೆ ಸಂದೇಹವನ್ನು ತಳೆದು ಅವಳನ್ನು ತ್ಯಜಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಕಟನಾಗಿ ಇಂತೆಂದನು:

ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತ ಮಯಾ ||೩೩||

(ವನಪರ್ವ, ೨೯೧)

``ನಲಕೂಬರ ಶಾಪದಿಂದ ನಾನು ಅವಳ ರಕ್ಷಣೆಯನ್ನೇರ್ಪಡಿಸಿದ್ದೆನು. ಅದೇ ರೀತಿ