೯೯
೯೯
ಮಹಾಭಾರತದಲ್ಲಿ ರಾಮಕಥೆಯು ವನಪರ್ವದ ಅಧ್ಯಾಯದಲ್ಲಿ (೨೭೩ರಿಂದ ೨೯೧) ಬಂದಿದೆ.
ಕಾಮಮಂಗಾನಿ ಮೇ ಸೀತೇ ದುನೋತು ಮರಕಧ್ವಜಃ ||೨೭||
ನ ತ್ವಾಮಕಾಮಾಂ ಸುಶ್ರೋಣಿ ಸಮೇಷ್ಯೇ ಚಾರುಹಾಸಿನೀಮ್ ||೨೮||
``ಹೇ ಸುಂದರಿ! ಎಲೈ ಸುಹಾಸಿನಿಯೆ! ಕಾಮನು ನನ್ನ ಶರೀರವನ್ನು ಎಷ್ಟೇ ಪೀಡಿಸಿದರೂ ನಾನು ನನ್ನ ಒಪ್ಪಿಗೆಯಿಲ್ಲದೆ ಸಮಾಗಮಿಸುವುದಿಲ್ಲ. ಈ ರೀತಿ ರಾವಣನು ನಿಖರವಾಗಿ ಹೇಳಿದ್ದಾನೆ; ಆದ್ದರಿಂದ ಇನ್ನಿತರ ಪುರಾವೆಗಳ ಆವಶ್ಯಕತೆಯಿಲ್ಲ.
ತ್ರಿಜಟೆ ಎಂಬ ರಾಕ್ಷಸಿಯು ಸೀತೆಯಲ್ಲಿ ನೆಚ್ಚಿಕೆಯನ್ನುಂಟುಮಾಡಿ ಈ ರೀತಿ ಹೇಳಿದ್ದಾಳೆ: ಮಾ ಚ ತೇsಸ್ತು ಭಯಂ ಭೀರು ರಾವಣಾಲ್ಲೋಕಗರ್ಹಿತಾತ್ |
ನಲಕೂಬರಶಾಪೇನ ರಕ್ಷಿತಾ ಹ್ಯಸಿ ನಂದಿನೀ ||೫೯||
ಶಪ್ತೋಹ್ಯೇಣ ಪುರಾ ಪಾಪೋ ವಧುಂ ರಂಭಾಂ ಪರಾಮೃಶನ್ |
ನ ಶಕ್ನೋತ್ಯವಶಾಂ ನಾರೀಮುಪೈತುವ ಜಿತೇಂದ್ರಿಯಃ ||೬0||
``ಹೇ ನಂದಿನಿ! ಆತನಿಗೆ ಕುಬೇರಪುತ್ರನಾದ ನಲಕೂಬರನ ಶಾಪವು ದೊರಕಿದೆ. ಅದರಿಂದಲೇ ನಿನ್ನ ರಕ್ಷಣೆಯಾಗುತ್ತಿದೆ. ಪೂರ್ವದಲ್ಲಿ ಈ ದುಷ್ಟನು ಸೊಸೆಯಂತಿದ್ದ ರಂಭೆ ಎಂಬ ನಾರಿಯೊಡನೆ ಅತಿಪ್ರಸಂಗವನ್ನು ಮಾಡಿದನು. ಆ ಕಾರಣ ಆತನಿಗೆ ತಾನಾಗಿ ಶಾಪ ದೊರಕಿದೆ. ಈ ಅಜಿತೇಂದ್ರಿಯನಾದ ರಾವಣನು ಆತನಿಗೆ ತಾನಾಗಿ ವಶವಾಗದ ಸ್ತ್ರೀಯೊಡನೆ ಸಮಾಗಮವನ್ನು ನಡೆಸಲು ಅಸಮರ್ಥನಾಗಿದ್ದಾನೆ.
ಶ್ರೀರಾಮನು ಸೀತೆಯ ಚಾರಿತ್ರ್ಯದ ಶುದ್ಧತೆಯ ಬಗ್ಗೆ ಸಂದೇಹವನ್ನು ತಳೆದು ಅವಳನ್ನು ತ್ಯಜಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಕಟನಾಗಿ ಇಂತೆಂದನು:
ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತ ಮಯಾ ||೩೩||
(ವನಪರ್ವ, ೨೯೧)
``ನಲಕೂಬರ ಶಾಪದಿಂದ ನಾನು ಅವಳ ರಕ್ಷಣೆಯನ್ನೇರ್ಪಡಿಸಿದ್ದೆನು. ಅದೇ ರೀತಿ