ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸಹಾನುಭೂತಿ ಇರುವದು ಆವಶ್ಯಕವಿರುತ್ತದೆ. ಈ ಮೂಲಕ ಸದಿಚ್ಛೆಯ ಅಭಿವ್ಯಕ್ತಿಯು ಉಚ್ಚಾರದಿಂದ ಆಗುತ್ತದೆ. ಸದ್ಭಾವನೆಯು ಸಮಾನಧರ್ಮ ವಾಗಿದ್ದರೂ, ವರ, ಆಶೀರ್ವಾದ ಮತ್ತು ಸದಿಚ್ಛೆಗಳ ವ್ಯಾಪಕತೆ, ಸ್ವರೂಪ ಹಾಗೂ ಪರಿಣಾಮಗಳು ಭಿನ್ನವಾಗಿವೆ.

ಆಶೀರ್ವಾದ ಈ ಶಬ್ದವು ಆಶೀಃ+ವಾದ ಈ ಎರಡು ಸಂಸ್ಕೃತ ಶಬ್ದಗಳಿಂದ ಬಂದಿದೆ. `ಇಷ್ಟಾರ್ಥಾವಿಷ್ಕರಣಮ್'- ಇಷ್ಟವಾದ ಅರ್ಥದ ಆವಿಷ್ಕರಣ ಎಂಬ ವ್ಯಾಖ್ಯೆಯು ಆಶೀರ್ವಾದವನ್ನು ಕುರಿತು-

ವಾತ್ಸಲ್ಯಾದ್ಯತ್ರ ಮಾನ್ಯೇನ ಕನಿಷ್ಠಸ್ಯಾಭಿಧೀಯತೇ |

ಇಷ್ಟಾವಧಾರಕಂ ವಾಕ್ಯಮಾಶೀಃ ಸಾ ಪರಿಕೀರ್ತಿತಾ ||

ಹಿರಿಯರು ಕಿರಿಯರ ಬಗ್ಗೆ ವಾತ್ಸಲ್ಯವನ್ನು ತಾಳಿ, ಅವರಿಗೆ ಇಷ್ಟವಿದ್ದ ಸಂಗತಿಗಳು ಸಫಲಗೊಳ್ಳಬೇಕೆಂದು ನುಡಿಯುವ ಶಬ್ದಗಳು ಆಶೀರ್ವಾದ ವೆಂದಾಗುತ್ತವೆಂದು `ಶಬ್ದ-ಕಲ್ಪದ್ರುಮ'ದಲ್ಲಿ ಹೇಳಿದ್ದಾರೆ.೪೬ ಆಶೀರ್ವಾದದ ವೈದಿಕೇತರ ಮಂತ್ರವು ಈ ರೀತಿ ಇದೆ.

ಆಶೀರ್ವಾದಾಃ ಸಫಲಾಃ ಸಂತು ಪೂರ್ಣಾಃ ಸಂತು ಮನೋರಥಾಃ |

ಶತ್ರೂಣಾಂ ನಾಶನಂ ಚಾಸ್ತು ಮೈತ್ರಾಣಾಮುದಯಸ್ತವ ||

ಋಗ್ವೇದದಲ್ಲಿಯ ಈ ಕೆಳಗಿನ ಮಂತ್ರವು ಎಲ್ಲರಿಗೂ ಪರಿಚಿತವಿದೆ.

ಶತಂ ಜೀವ ಶರದೋ ವರ್ಧಮಾನಃ ಶತಂ ಹೇಮಂತಾಂ ರತಮ್ ವಸಂತಾನ್ |

ಶತಮಿಂದ್ರಾಗ್ನೀ ಸವಿತಾ ಬೃಹಸ್ವತಿಃ ಸತಾಯುಷಾ ಹವಿಷೇಮಂ ಪುನರ್ದುಃ ||

ಆಹಾರ್ಷಂ ತ್ವಾವಿದಂ ತ್ವಾ ಪುನರಾಗಾಃ ಪುನರ್ನವ |

ಸರ್ವಾಂಗ ಸರ್ವ ತೇ ಚಕ್ಷು ಸರ್ವಮಾಯುಶ್ಚ ತೇವಿದಮ್ ||

``ನೀನು ನೂರು ಶರದ್ ಋತುಗಳ ಕಾಲ ನೂರು ಹೇಮಂತ ಋತುಗಳ ವರೆಗೆ ಮತ್ತು ನೂರು ವಸಂತ ಋತುಗಳ ಕಾಲ ಜೀವಿಸಿರು! ಉತ್ತರೋತ್ತರ ಅಭಿವೃದ್ಧಿಯನ್ನು ಪಡೆ. ಇಂದ್ರ, ಅಗ್ನಿ ಮತ್ತು ಬೃಹಸ್ಪತಿ ಇವರುಗಳಿಗೆ ಶತಾಯುಸ್ಸ ನ್ನುಂಟುಮಾಡುವ ಹವಿರ್ಭಾಗವು ತಲುಪುವುದರಿಂದ ಅವರು ಪ್ರಸನ್ನರಾಗಿ